Blog
ಆಲೆಮನೆ- ಬೆಲ್ಲ ತಯಾರಿಸುವ ಸಾಂಪ್ರದಾಯಿಕ ವಿಧಾನ💛🌱

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ರಾಮಣ್ಣ ಹನಮಣ್ಣನವವರು ಹಲವಾರು ವರ್ಷಗಳಿಂದ ಸಾವಯವ ಬೆಲ್ಲವನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು, ಸಾವಯವ ಪದ್ದತಿಯಲ್ಲಿ ಬೆಳೆದಿರುವ ಕಬ್ಬಿನ ತೋಟವನ್ನು ಖರೀದಿಸಿ, ಕಬ್ಬನ್ನು ಕಟಾವು ಮಾಡಿ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೆ ಬೆಲ್ಲವನ್ನು ತಯಾರಿಸುತ್ತಾರೆ.

ಸಾವಯವ ಕೃಷಿಯಿಂದ 10% ಇಳುವರಿ ಹೆಚ್ಚಾಗಿದೆ

ದಾವಣಗೆರೆ ಜಿಲ್ಲೆ: ಹೊನ್ನಾಳಿ ತಾಲ್ಲೂಕು, ಹನಗವಾಡಿ ಗ್ರಾಮದ  ರೈತ – ಥಾನೇಶ್ ರಾವ್ ರವರು 3-4 ವರ್ಷಗಳಿಂದ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನುಉಪಯೋಗಿಸುತ್ತಿದ್ದು, ಬಳಸಿದ ನಂತರ ಅಡಿಕೆ ಬೆಳೆಯಲ್ಲಿಉತ್ತಮ ಬೆಳವಣಿಗೆ ಮತ್ತು ಅಭಿವೃದ್ಧಿ ಪಡೆದಿದ್ದಾರೆ.

ಅಡಿಕೆ ಜೊತೆ ಮಿಶ್ರ ಬೆಳೆಯಿಂದ ನಿರಂತರ ಆದಾಯ

ಮೈಸೂರುಜಿಲ್ಲೆ: ಮೈಸೂರುಜಿಲ್ಲೆ ಕೆಆರ್ ನಗರ ತಾಲ್ಲೂಕಿನ ರೈತರಾದ  ನಟರಾಜ್ ಅವರು ಸಮಗ್ರ ಕೃಷಿ ಪದ್ಧತಿಯಲ್ಲಿ ಅಡಿಕೆ ತೋಟದಲ್ಲಿ ತೊಗರಿ, ಬಾಳೆ, ಅವರೆ, ಟೊಮೇಟೊ ಮತ್ತು ಬದನೆ  ಇತ್ಯಾದಿ ಅಂತರ ಬೆಳೆಗಳನ್ನುಬೆಳೆಯುತ್ತಿದ್ದಾರೆ.

ಹತ್ತು ವರ್ಷದಿಂದ ಸಾವಯವ ಕೃಷಿ, ಈಗ ಅಡಿಕೆ ಬೆಳೆ ಹೇಗಿದೆ ಗೊತ್ತಾ?

ತುಮಕೂರ : ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು ರೈತರಾದ ವಿಶ್ವನಾಥ್ ಅವರು 10 ವರ್ಷದಿಂದ ಸಾವಯವ ಕೃಷಿ ಪದ್ಧತಿಯಲ್ಲಿಯೇ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಕೃಷಿಯ ಜತೆಗೆ ಕುರಿ ಸಾಕಾಣಿಕೆ, ಜೇನು ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ.

ಭತ್ತ ನಾಟಿಗೂ ಮುನ್ನ ಬೀಜೋಪಚಾರ ಮಾಡಿ.

ಮೈಸೂರು: ಮೈಸೂರು ಜಿಲ್ಲೆ, ಕೆ ಆರ್ ನಗರ ತಾಲ್ಲೂಕು ರೈತರಾದ ಮಹದೇವ ಅವರು ಭತ್ತ ಬೆಳೆಯನ್ನು ಸಾವಯವ ಕೃಷಿಯಲ್ಲಿ ಬೆಳೆಯುತ್ತಿದ್ದಾರೆ. ಭತ್ತ ಬೆಳೆ ನಿರ್ವಹಣೆ ರೈತರಿಗೆ ಒಂದು ದೊಡ್ಡ ಸವಾಲು. ಗೊಬ್ಬರದ ನಿರ್ವಹಣೆ, ನೀರಿನ ಸಮಸ್ಯೆ ಇವೆಲ್ಲವನ್ನು ನಿಭಾಯಿಸೋದು ಕಷ್ಟ ಸಾಧ್ಯವಾಗಿರುತ್ತದೆ.

ಅಡಿಕೆ ಪಟ್ಟೆ ನೋಡಿದ್ರೆ ಸಾಕು ಇಳುವರಿ ಗೊತ್ತಾಗುತ್ತೆ.

ಮೈಸೂರು: ಅಡಿಕೆ ಬೆಳೆ ಆರೋಗ್ಯವಾಗಿದೆ, ಹೆಚ್ಚಿನ ಇಳುವರಿ ಬರುತ್ತಿದೆ ಎನ್ನುವುದನ್ನು ಅಡಿಕೆಯ ಪಟ್ಟೆ ನೋಡಿ ಗುರುತಿಸಲಾಗುತ್ತದೆ. ಹಾಗೇಯೆ ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ರೈತರಾದ ರಾಮಚಂದ್ರಪ್ಪ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅಲ್ಲಿಯ ಅಡಿಕೆಯ ಪಟ್ಟೆಯನ್ನು ನೋಡಿದರೆ, ಅಡಿಕೆಯ ಇಳುವರಿ ಎಷ್ಟು ಹೆಚ್ಚಾಗಿ ಬರುತ್ತದೆ ಎಂಬುದನ್ನು ಹೇಳಬಹುದು.

ನೀರಿನಿಂದ ಹಾಳಾಗಿದ್ದ ಅಡಿಕೆ ತೋಟ ಮತ್ತೆ ಚಿಗುರಿದ್ದು ವಿಸ್ಮಯ

ತುಮಕೂರು: ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು ರೈತರಾದ ವಿಶ್ವನಾಥ್ ಚಾರು, ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. 5 ವರ್ಷದ ಅಡಿಕೆ ತೋಟವನ್ನು ನಿರ್ವಹಣೆ ಮಾಡುತ್ತಿದ್ದು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ. ಹಸಿರೆಲೆ ಗೊಬ್ಬರಗಳಾದ ಸೆಣಬು, ಡಯಂಚಾವನ್ನು ಬಳಸುತ್ತಿದ್ದರಿಂದ ಭೂಮಿಯ ಆರೋಗ್ಯ ಹೆಚ್ಚಾಗಿ ಬೆಳೆ ಕೂಡ ಆರೋಗ್ಯವಾಗಿ ಬೆಳೆಯುತ್ತಿದೆ.

ಸಾಯುತ್ತಿದ್ದ ಅಡಿಕೆ ಮರಗಳು ಮತ್ತೆ ಚಿಗುರಿದ್ದು ಹೇಗೆ?

ತುಮಕೂರು :  ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ಸಾವಯವ ಕೃಷಿಕರಾದ ಹೇಮಂತ್ ಅವರು ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ.  ಅಡಿಕೆಯಲ್ಲಿ 10 ಕ್ವಿಂಟಾಲ್ ಒಣ ಅಡಿಕೆಯನ್ನು ಪಡೆದಿದ್ದಾರೆ. ಮೊದಲ ಬಾರಿ ಅಡಿಕೆಯಲ್ಲಿ 4 ಲಕ್ಷ ರೂ ಆದಾಯವನ್ನು ಪಡೆದಿದ್ದರು.  ಸಾವಯವ ಕೃಷಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ರೈತರಾದ ಹೇಮಂತ್ ಅವರು ಬಳಸುತ್ತಿದ್ದಾರೆ. ಇದರಿಂದ ಖರ್ಚು ಕೂಡ ಕಡಿಮೆಯಾಗಿದೆ.

ಅಡಿಕೆ ಸಿಪ್ಪೆಗೆ ಜೀವ ತುಂಬಿದ ಕೃಷಿಕ

ತುಮಕೂರು : ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ರೈತರಾದ  ನಟರಾಜ್ ಅವರು  ಸಾವಯವ ಕೃಷಿ ಪದ್ಧತಿಯಲ್ಲಿ ಅಡಿಕೆ ಸೇರಿದಂತೆ ಹಲವಾರು ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಟ್ಟಾರೆ 12 ಎಕರೆ ತೋಟವಿದ್ದು 4 ಎಕರೆಯಲ್ಲಿ ತೆಂಗು, 8 ಎಕರೆಯಲ್ಲಿ ಅಡಿಕೆ ಹಾಗೂ ಹಣ್ಣುಬೆಳೆಗಳು ಇವೆ.

ರಾಸಾಯನಿಕ ಕೃಷಿ ಕಬ್ಬು ಬೆಳೆ VS ಸಾವಯವ ಕೃಷಿ ಕಬ್ಬು ಬೆಳೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆ, ಕೊಳ್ಳೆಗಾಲ ತಾಲ್ಲೂಕಿನ ಕೃಷಿಕರಾದ ಪ್ರಭುಸ್ವಾಮಿ 3 ಎಕರೆಯಲ್ಲಿ ಕಬ್ಬು ಬೆಳೆಯನ್ನು ಬೆಳೆಯುತ್ತಿದ್ದಾರೆ. ಅದರಲ್ಲಿ ಒಂದು ಎಕರೆ ಸಾವಯವ ಕೃಷಿ, ಉಳಿದ ಎರಡು ಎಕರೆಯಲ್ಲಿ ರಾಸಾಯನಿಕ ಕೃಷಿ ಮಾಡುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಬೆಳೆದ ಕಬ್ಬು ಆರೋಗ್ಯವಾಗಿದ್ದು ಖರ್ಚು ಕಡಿಮೆಯಾಗಿದೆ. ರಾಸಾಯನಿಕ ಬೆಳೆಗಳು ಬೆಳವಣಿಗೆ ಕುಂಠಿತವಾಗಿ ಖರ್ಚು ಕೂಡ ಹೆಚ್ಚಾಗಿದೆ.

ಕಬ್ಬಿನ ರವದಿ ಹಾಕಿದ್ದಕ್ಕೆ ಕೃಷಿ ಭೂಮಿ ಸೇಫ್..!

ಮಂಡ್ಯ : ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ ಕೃಷಿಕರಾದ ಲೋಕೇಶ್ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಹಿಪ್ಪುನೇರಳೆ ಮತ್ತು ಕಬ್ಬು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಬ್ಬು ಬೆಳೆಯಲ್ಲಿ ಈಗಾಗಲೇ ಒಂದು ಕೂಳೆ ಇಳುವರಿ ತೆಗೆದುಕೊಂಡಿದ್ದಾರೆ, ಈಗ ಎರಡನೇ ಕೂಳೆ ಕಬ್ಬು ಬೆಳೆಯುತ್ತಿದೆ.  ಒಟ್ಟಾರೆ ಒಂದೂವರೆ ಎಕರೆಯಲ್ಲಿ  ಬೆಳೆಗಳನ್ನು  ಬೆಳೆಯುತ್ತಿದ್ದು 20 ಗುಂಟೆಯಲ್ಲಿ ಹಿಪ್ಪುನೇರಳೆ ಬೆಳೆ ಇದೆ.

20 ಗುಂಟೆಯಲ್ಲಿ 27 ಕೆಜಿ ಸುಗಂಧರಾಜ ಹೂ ಇಳುವರಿ..!

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಯುವ ಕೃಷಿಕರಾದ ಮುದ್ದುರಾಜ್ ಅವರು ಸುಗಂಧರಾಜ ಹೂ ಬೆಳೆಯನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ, 20 ಗುಂಟೆಯಲ್ಲಿ ಬೆಳೆಯಿದ್ದು, 27ಕೆಜಿಯವರೆಗೂ ಇಳುವರಿಯನ್ನು ಪಡೆಯುತ್ತಿದ್ದಾರೆ, ಹೂ ಶೈನಿಂಗ್, ಕಲರ್ ತುಂಬಾ ಗುಣಮಟ್ಟದಿಂದ ಬೆಳೆಯುತ್ತಿದೆ.

ಅಡಿಕೆಯಲ್ಲಿ 150 ಕ್ವಿಂಟಾಲ್ ನಿಂದ 750 ಕ್ವಿಂಟಾಲ್ ಗೆ ಇಳುವರಿ ಹೆಚ್ಚಾಯ್ತು.

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ, ತರಿಕೆರೆ ತಾಲ್ಲೂಕಿನ ಸಾವಯವ ಕೃಷಿಕರಾದ ಪಿ ಜಿ ಓಂಕಾರಪ್ಪ ಅವರು ಅಡಿಕೆ ಬೆಳೆಯಲ್ಲಿ 750 ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದಾರೆ. ಹೌದು 6 ವರ್ಷದಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಅಡಿಕೆ ಬೆಳೆ ಬೆಳೆಯುತ್ತಿರುವ ಕೃಷಿಕ ವರ್ಷದಿಂದ ವರ್ಷಕ್ಕೆ ಅದಿಕ ಇಳುವರಿ ಪಡೆಯುತ್ತಿದ್ದಾರೆ.

8 ಅಡಿಕೆ ಮರಗಳಲ್ಲಿ ಒಂದು ಮರದಿಂದ 12 ಕೆಜಿ ಅಡಿಕೆ..!

ತುಮಕೂರು : ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನಲ್ಲಿರುವ ಅಡಿಕೆ ತೋಟ ಯಾವುದೇ ರೋಗ ಕೀಟಗಳ ತೊಂದರೆಯಿಲ್ಲದೆ ಸಮೃದ್ಧವಾಗಿ ಬೆಳೆಯುತ್ತಿದೆ. ಹೌದು, ಕೊರಟಗೆರೆ ತಾಲೂಕಿನ ಕೃಷಿಕ ಮಂಜುನಾಥ್ ಅವರು 6-8 ವರ್ಷದ ಅಡಿಕೆ ತೋಟವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ.

ಏಲಕ್ಕಿ ಬಾಳೆಯಲ್ಲಿ ಒಂದೊಂದು ಗೊನೆ 18-20 ಕೆಜಿ..!

ಕೋಲಾರ: ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕಿನ ರೈತರಾದ ಶಿವಕುಮಾರ್ ಹಾಗೂ ಅವರ ತಂದೆಯವರಾದ ಮುನಿವೆಂಕಟಪ್ಪ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಗುಂಪುಬಾಳೆಯನ್ನು ಬೆಳೆಯುತ್ತಿದ್ದಾರೆ. ಏಲಕ್ಕಿ ಬಾಳೆಯನ್ನು ಬೆಳೆಯುತ್ತಿದ್ದು ಒಂದೊಂದು ಬಾಳೆಗೊನೆ 18-20 ಕೆಜಿ ಬರುತ್ತಿದೆ. 20*20 ಅಡಿಯಲ್ಲಿ ಗುಂಪುಬಾಳೆಯನ್ನು ಬೆಳೆಯುತ್ತಿದ್ದು  ಎಕರೆಗೆ 125 ಸಸಿಗಳನ್ನು ನಾಟಿಮಾಡಿದ್ದಾರೆ, ಒಂದೊಂದು ಗುಂಪಿನಲ್ಲಿ 10-15 ಮರಿಗಳು ಬರುತ್ತಿವೆ. ಬಾಳೆ ಎಲೆಗಳು 7 ಅಡಿಯಷ್ಟು ಎತ್ತರ ಬೆಳೆಯುತ್ತಿವೆ.

ಈ ಗುಲಾಬಿ ಹೂ ಮಾರ್ಕೆಟ್ ನಲ್ಲಿ ಫುಲ್ ಸೇಲ್

ಚಿಕ್ಕಬಳ್ಳಾಪುರ :  ಚಿಕ್ಕಬಳ್ಳಾಪುರ ಜಿಲ್ಲೆ, ಕೊತ್ತನೂರು ಗ್ರಾಮದ ಕೃಷಿಕರಾದ ಸುಬ್ರಹ್ಮಣ್ಯ ಅವರು ಗುಲಾಬಿ ಬೆಳೆಯನ್ನು ಬೆಳೆಯುತ್ತಿದ್ದಾರೆ, ಇವರ ಗುಲಾಬಿ ಹೂಗಳು ಮಾರುಕಟ್ಟೆಗೆ ಲಗ್ಗೆ ಇಟ್ಟರೆ ಫುಲ್ ಸೇಲ್ ಆಗಿಬಿಡುತ್ತವೆ. ಮಾರುಕಟ್ಟೆಯಲ್ಲಿ 10 ರಿಂದ 20 ರೂ ಜಾಸ್ತಿ ಬೆಲೆ ಇವರ ಹೂವಿಗೆ ಸಿಗುತ್ತದೆ.

ಜಿ9 (Grand nain) ಗುಂಪು ಬಾಳೆ ಪದ್ಧತಿಯಲ್ಲಿ ವರ್ಷಪೂರ್ತಿ ಆದಾಯ..!

ಮಂಡ್ಯ : ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕಿನ  ಸಾವಯವ ಕೃಷಿ ರೈತರಾದ ನಂದೀಶ್ ಅವರು ಬಾಳೆ, ಪಪ್ಪಯಾ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಾ ಸಮಗ್ರ ಕೃಷಿ ಮಾಡುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರವನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಗೊಬ್ಬರದ ನಿರ್ವಹಣೆ ಮಾಡುತ್ತಿದ್ದು ಅನೇಕ ಕೃಷಿಕರಿಗೆ ಮಾದರಿಯಾಗಿದ್ದಾರೆ.

30 ಗಿಡದಿಂದ 450 ಕೆಜಿ ಅಡಿಕೆ..!

ಮೈಸೂರು: ಮೈಸೂರು ಜಿಲ್ಲೆ, ಮೈಸೂರು ತಾಲೂಕಿನ, ಯಾಚೇಗೌಡನಹಳ್ಳಿ ಗ್ರಾಮದ ಕೃಷಿಕರಾದ ಕುಮಾರ್ ಅವರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದು ಜತೆಗೆ ಕೃಷಿಯತ್ತ ಒಲವು ತೋರಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅಡಿಕೆಯ ಜತೆಗೆ ತೆಂಗು, ಜಾಯಿಕಾಯಿ ಮಿಶ್ರ ಬೆಳೆಗಳನ್ನು ಬೆಳೆಯುತ್ತಾ ಸಾವಯವ ಕೃಷಿ ಪದ್ಧತಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ.
ಒಟ್ಟಾರೆ ಇಪ್ಪತ್ತು ವರ್ಷದ 40 ಅಡಿಕೆ ಮರಗಳು, ಐದು ವರ್ಷದ 300 ಅಡಿಕೆ ಗಿಡಗಳಿದ್ದು ಇಪ್ಪತ್ತು ವರ್ಷದ 30 ಅಡಿಕೆ ಮರಗಳಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿದ ಮೇಲೆ 450 ಕೆಜಿ ಇಳುವರಿ ಪಡೆದಿದ್ದಾರೆ.
ಸತತ 4 ವರ್ಷದಿಂದ ಸಾವಯವ ಕೃಷಿ ಮಾಡುತ್ತಿರುವ ರೈತ ಈ ಹಿಂದೆ ರಾಸಾಯನಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದರು ಆಗ 40 ಮರಗಳಿಂದ ಕೇವಲ 50-60 ಕೆಜಿ ಅಡಿಕೆ ಸಿಕ್ಕಿತ್ತು, ಈಗ ಸಾವಯವ ಕೃಷಿಗೆ ಬದಲಾದ ಮೇಲೆ 450 ಕೆಜಿ ಪಡೆದಿದ್ದಾರೆ.
ವಾರ್ಷಿಕ ಬೆಳೆಯಾದ ಅಡಿಕೆ ಬೆಳೆಯನ್ನು ಬೆಳೆಯುವಾಗ ಬೆಳೆಯಲ್ಲಿ ಕಾಣಿಸಿಕೊಳ್ಳುವ ರೋಗಗಳು, ಕೀಟಗಳ ತೊಂದರೆಯಿಂದ ರೈತರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ, ಅಷ್ಟೇ ಅಲ್ಲ ಬೆಳೆಗೆ ಬಳಸುವಂತಹ ರಸಗೊಬ್ಬರಗಳಿಂದಲೂ ರೋಗಗಳ ತೊಂದರೆ ಹೆಚ್ಚಾಗುತ್ತಿರುತ್ತದೆ. ಕಡಿಮೆ ಖರ್ಚಿನಲ್ಲಿ ರೋಗಮುಕ್ತ ಬೆಳೆಯನ್ನು ಬೆಳೆಯುವುದು ಹೇಗೆ? ಇಳುವರಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಎನ್ನುವುದರ ಕುರಿತು ರೈತರಾದ ಕುಮಾರ್ ನಮ್ಮ ಪ್ರತಿನಿಧಿ ಜತೆ ಮಾತನ್ನಾಡಿದ್ದು ಹೀಗೆ.

ಸಾಯುತ್ತಿದ್ದ ಎಲೆ ಬಳ್ಳಿ 1 ತಿಂಗಳಲ್ಲಿ ಮತ್ತೆ ಚಿಗುರಿತು..!

ದಶಕದ ಹಿಂದೆ ವೀಳ್ಯದೆಲೆ ಬೆಳೆಯೋಕೆ ಪೈಪೋಟಿಗೆ ಬಿದ್ದಿದ್ದ ರೈತರು ಈಗ, ಶೇಂಗಾ, ಹತ್ತಿ, ಇತರ ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳತ್ತ ಮುಖಮಾಡಿದ್ದಾರೆ. ವೀಳ್ಯದೆಲೆ ಸೂಕ್ಷ್ಮ ಬೆಳೆಯಾಗಿದ್ದರಿಂದ ನಿರ್ವಹಣೆಯಲ್ಲಿ ರೈತರು ಎಡುವುದು ಹೆಚ್ಚು. ತ್ತೀಚೆಗೆ ರೋಗಗಳು ಹೆಚ್ಚಾಗಿದ್ದು, ವೀಳ್ಯದೆಲೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಎಲೆಚುಕ್ಕೆ ರೋಗ, ಎಲೆ ಮುಟುರು ರೋಗ, ಸೊರಗು ರೋಗ, ಬುಡ ಕೊಳೆಯುವ ರೋಗಗಳಿಂದ ಹೆಚ್ಚಿನ ವೀಳ್ಯದೆಲೆ ಬೇಸಾಯಗಾರರು ನಷ್ಟ ಅನುಭವಿಸುತ್ತಿದ್ದಾರೆ.

ಸೆಡ್ಡು ಹೊಡೆದು ಮಾಡಿದ ಸಾವಯವ ಕೃಷಿ ಯುವ ಕೃಷಿಕನಿಗೆ ಬೆಳಕಾಯ್ತು..!

ಮೊದಲು ಸಾವಯವ ಕೃಷಿ ಎಂದ್ರೆ ಮೂಗು ಮುರಿಯುವ ಜನರು ಹೆಚ್ಚಾಗಿದ್ದರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿಯ ಮಹತ್ವವನ್ನು ಅರಿಯುತ್ತಿರುವುದರಿಂದ ಬೆಳೆ, ಭೂಮಿ ಉಳಿಸಿಕೊಳ್ಳಲು ಸಾವಯವ ಕೃಷಿ ಅನಿವಾರ್ಯ ಎಂಬುದನ್ನು ಮನಗಾಣುತ್ತಿದ್ದಾರೆ.

ಉಳ್ಳಾಗಡ್ಡಿಯಲ್ಲಿ ಸಾಹುಕಾರರಾಗುವುದು ಹೇಗೆ..?

ಈರುಳ್ಳಿ ಇಲ್ಲ ಎಂದ್ರೆ, ಬಹುತೇಕರ ಮನೆಯಲ್ಲಿ ಅಡುಗೆಯೇ ಅಪೂರ್ಣವಾಗಿಬಿಡುತ್ತದೆ.  ಯಾವುದೇ ಅಡುಗೆಯ ರುಚಿಯೂ ಇಲ್ಲಾ ಎಂದರ್ಥ. ಈರುಳ್ಳಿಯ ಒಗ್ಗರಣೆ ಚುರ್ ಎನ್ನಲಿಲ್ಲಾ ಎಂದರೆ ಅಡುಗೆ ಮನೆಗೆ ಕಳೇನೆ ಇರುವುದಿಲ್ಲ. ಆದರೆ ಒಗ್ಗರಣಗೆ ಮಾತ್ರವಲ್ಲ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿಯೂ ಈರುಳ್ಳಿ ಪ್ರಮುಖ ಪಾತ್ರ ವಹಿಸುತ್ತೆ.

ಕಲ್ಲಂಗಡಿ ಕೃಷಿ ಹೇಗೆ ಮಾಡಬೇಕು ಗೊತ್ತಾ?

ಕಲ್ಲಂಗಡಿ ರಾಜ್ಯದ ಬೇಸಿಗೆ ಕಾಲದ ಪ್ರಮುಖ ಬೆಳೆ. ಆದರೆ ಇತ್ತೀಚಿನ ದಿನಗಳಲ್ಲಿ ವರ್ಷಪೂರ್ತಿ ಇದಕ್ಕೆ ಬೇಡಿಕೆ ಸೃಷ್ಟಿಯಾಗಿದೆ. ಇದರ ವೈಜ್ಞಾನಿಕ ಹೆಸರು ಸಿಟ್ರುಲಸ್ ಲನಾಟಸ್. ಇದು ಕುಕುರ್ಬೆಟಿಸ್ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದನ್ನು ಬಚ್ಚಲಕಾಯಿ ಎಂದೂ ಕರೆಯುವುದುಂಟು. ಬೇಸಿಗೆ ಕಾಲ ಕಲ್ಲಂಗಡಿ ಹಣ್ಣು ಬೆಳೆಗೆ ಸೂಕ್ತ ಹವಾಗುಣ ಅಂತ ಹೇಳಬಹುದು. ಒಣಹವೆ ಇದ್ದರೆ ಸಕ್ಕರೆಯ ಅಂಶ ಚೆನ್ನಾಗಿ ಬರುತ್ತದೆ. 

ಎಲ್ಲಾ ರೈತರೂ ಉದ್ಧಾರವಾಗಲಿ ಎಂದು ಬಯಸಿದರು. ಆಮೇಲೆ?

       ಸಾವಯವ ಕೃಷಿ ಸಾವಿಲ್ಲದ ಕೃಷಿ, ಸನಾತನ ಕೃಷಿ. ಒಂದು ಕಾಲದಲ್ಲಿ ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕವಾಗಿ ಬೆಳೆದ ಆಹಾರ ತಿಂದು ಜನ ಸದೃಢವಾಗಿದ್ದರು. ಹಸಿರು ಕ್ರಾಂತಿಯ ನಂತರ ಹೆಚ್ಚಿದ ರಾಸಾಯನಿಕ ಬಳಕೆಯಿಂದ ಮಣ್ಣು ಮಲಿನವಾಗಿ ಆಹಾರದ ಪೌಷ್ಠಿಕತೆ ನಶಿಸಿಹೋಗಿದೆ. ಇದನ್ನು ಅರ್ಥ ಮಾಡಿಕೊಂಡಿರುವ ಜನರು ಈಗ ನಿಧಾನವಾಗಿ ಸಾವಯವ ಬೆಳೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಹೀಗಾಗಿ ರೈತರೂ ಕೂಡ ಸಾವಯವ ಕೃಷಿ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇಲ್ಲೊಬ್ಬ ರೈತ 7-8 ವರ್ಷಗಳಿಂದ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದು, ಇತರ ರೈತರಿಗೂ ಈ ಅಮೂಲ್ಯ ಜ್ಞಾನವನ್ನು ಹಂಚುತ್ತಿದ್ದಾರೆ.

ವಿಷಯುಕ್ತ ಶೇಂಗಾ ಬೇಡ, ವಿಷಮುಕ್ತ ಶೇಂಗಾ ಬೇಕು..!

ಶೇಂಗಾ ಬೀಜವನ್ನು ನಾವು ನೆಲಗಡಲೆ, ಕಡಲೆಕಾಯಿ, ಕಡ್ಲೆ ಬೀಜ ಸೇರಿದಂತೆ ಹಲವಾರು ಹೆಸರುಗಳಲ್ಲಿ ಕರೆಯುವುದುಂಟು. ಹೀಗಿರುವಾಗ ಶೇಂಗಾ ಬೀಜಕ್ಕೆ ಹೆಸರುಗಳು ಮಾತ್ರ ಹೆಚ್ಚಾಗಿಲ್ಲ ಶೇಂಗಾ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳು ಕೂಡ ಅಷ್ಟೇ ಅಧಿಕ.

ಕೃಷಿಯಲ್ಲಿ ರೈತನ ತಂತ್ರಜ್ಞಾನ ಹೆಚ್ಚುಇಳುವರಿಗೆ ಮಾರ್ಗ..!

ಕೃಷಿ ನಮ್ಮ ದೇಶದ ಆರ್ಥಿಕ ಬೆನ್ನೆಲುಬು. ಕೃಷಿ ಕ್ಷೇತ್ರದ ಏಳಿಗೆಯಲ್ಲಿ ನಮ್ಮ ದೇಶದ ಏಳಿಗೆ ಇದೆ ಅಂತ ಹೇಳಿದರೆ ತಪ್ಪಾಗಲಾರದು. ಸದ್ಯಕ್ಕೆ ಕೃಷಿಯ ಮೇಲೆ ನಮ್ಮ ಸರ್ಕಾರ ತೋರುತ್ತಿರುವ ಕಾಳಜಿ, ನೀಡುತ್ತಿರುವ ಸವಲತ್ತುಗಳನ್ನು ನೋಡ್ತಾಯಿದ್ರೆ ರೈತರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

ಶೇಂಗಾ ಅಥವಾ ಕಾಳು ಬೆಳೆಯನ್ನು ಬೆಳೆಯುವಾಗ..!

ಬಡವರ ಬಾದಾಮಿ ಶೇಂಗಾ ರಾಜ್ಯದ ಎಲ್ಲಾ ಭಾಗದಲ್ಲಿ ಬೆಳೆಯುವ ಬೆಳೆ. ಎಲ್ಲಾ ರೀತಿಯ ಹವಾಗುಣಕ್ಕೂ ಹೊಂದಿಕೊಳ್ಳುವುದರಿಂದ ಪ್ರಮುಖ ದ್ವಿದಳ ಎಣ್ಣೆಕಾಳು ಬೆಳೆ ಎಂದು ಕರೆಯುತ್ತಾರೆ.

ಒಂದೇ ಒಂದು ಬದಲಾವಣೆಯಿಂದ 100 ಟನ್ ಕಬ್ಬು ಇಳುವರಿ..!

ಮೈತುಂ ಸಿಹಿಯನ್ನು ತುಂಬಿಕೊಂಡು ಸಕ್ಕರೆ, ಬೆಲ್ಲ ಸೇರಿದಂತೆ ಹಲವಾರು ಪದಾರ್ಥಗಳಾಗಿ ಮಾರ್ಪಾಡಾಗುವ ಕಬ್ಬು ನಮ್ಮ ರಾಜ್ಯದ ಪ್ರಮುಖ ಬೆಳೆಗಳಲ್ಲಿ ಒಂದು. ಹಾಗಾಗಿ ಕಬ್ಬು ಬೆಳೆ ರೈತನ ಕೈಹಿಡಿಯಿತು ಅಂದರೆ ಖಜಾನೆ ತುಂಬಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ ಈಗಿನ ಕೃಷಿ ಪದ್ಧತಿಯಿಂದ ಕಬ್ಬು ಬೆಳೆಯಲ್ಲಿ ಎಕರೆಗೆ 30 ರಿಂದ 40 ಟನ್ ಪಡೆಯುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ತಾವು ಎಡುವುತ್ತಿರುವುದು ಎಲ್ಲಿ ಎಂಬುದು ಬಹುತೇಕ ರೈತರಿಗೂ ಅರಿವಿಲ್ಲ. ಇದನ್ನು ಮನಗಂಡಿರುವ ಮೈಕ್ರೋಬಿ ಸಂಸ್ಥೆ ರೈತರಿಗೆ ಅರಿವು ಮೂಡಿಸಿ ಎಕರೆಗೆ 80 ರಿಂದ 100 ಟನ್ ಇಳುವರಿ ಪಡೆಯಲು ರೈತರಿಗೆ ಬೆನ್ನೆಲುಬಾಗಿ ನಿಂತಿದೆ.

ಆರೋಗ್ಯಕರ ಅರಿಶಿನ ಬೆಳೆಯಲು ಸರಳ ಮಾರ್ಗ

ಅರಿಶಿನ ಕೇವಲ ಅಡುಗೆಗೆ ಮಾತ್ರ ಬಳಸುವಂತಹ ಪದಾರ್ಥವ ಲ್ಲ. ಸಾಕಷ್ಟು ರೋಗಗಳಿಗೆ ಅರಿಶಿನ ರಾಮಬಾಣವಾಗಿದೆ.ಅರಿಶಿನದಲ್ಲಿ ಕಂಡು ಬರುವ ಕರ್ಕುಮಿನ್ ಎಂಬ ಪೋಷಕಾಂಶವೇ ಈ ಹೆಗ್ಗಳಿಕೆಗೆ ಪ್ರಮುಖ ಕಾರಣ. ಅಷ್ಟೇ ಅಲ್ಲ ಸೌಂದರ್ಯವರ್ಧಕಗಳಲ್ಲಿಯೂ ಸಹಿತ ಅರಿಶಿನದ ಪ್ರಾಮುಖ್ಯತೆ ಹೆಚ್ಚು. ಅರಿಶಿನದಲ್ಲಿ ಕರ್ಕುಮಿನ್ ಪೋಷಕಾಂಶ ಹೆಚ್ಚು ಆದ್ಯತೆ ಪಡೆದಿರುವುದರಿಂದ ಅರಿಶಿನ ಖರೀದಿ ಮಾಡುವಾಗ, ಮಾರ್ಕೆಟ್ ನಲ್ಲಿ ಕರ್ಕುಮಿನ್ ಕಂಟೆಂಟ್ ಎಷ್ಟಿದೆ ಎಂಬುದನ್ನು ನೋಡಿ ಖರೀದಿಸುತ್ತಾರೆ. ಅದು ಅಗತ್ಯ ಪ್ರಮಾಣದಲ್ಲಿದ್ದರೆ ಮಾತ್ರ ಹೆಚ್ಚು ಬೇಡಿಕೆ. ಹೀಗಿರುವಾಗ ರೈತರು ಅರಿಶಿನವನ್ನು ಬೆಳೆಯುವಾಗ ಗುಣಮಟ್ಟದ ಬೆಳೆ ಬರುವ ಹಾಗೆ ಜೈವಿಕ ಗೊಬ್ಬರಗಳನ್ನು ಬಳಸಿ ಬೆಳೆದರೆ ಒಳ್ಳೆಯದು.

120 ಎಕರೆಯ ಕಡಲೆಯಲ್ಲಿ ನೋಡಿ ಚಮತ್ಕಾರ..!

ಕಡಲೆ ಬೆಳೆ ಉತ್ಪಾದನೆ ಹಾಗೂ ಬೆಳವಣಿಗೆಯಲ್ಲಿ ಭಾರತ ದೇಶ ಅಗ್ರಸ್ಥಾನದಲ್ಲಿದೆ. ಕಡಲೆ ಬೆಳೆಯಲ್ಲಿ ಉತ್ತಮ ಪೋಷಕಾಂಶಗಳಿರುವುದರಿಂದ ಹೆಚ್ಚು ಬಳಸಲಾಗುತ್ತದೆ. 3 ತಿಂಗಳ ಬೆಳೆಯಾಗಿರುವ ಕಡಲೆ ಬೆಳೆಯನ್ನು ವಿವಿಧ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದು. ಮರಳು ಮಿಶ್ರಿತ ಕಲಸು ಮಣ್ಣು, ಜೇಡಿ ಮಣ್ಣು ಇದಕ್ಕೆ ಸೂಕ್ತವಾಗಿರುತ್ತದೆ. ಮಣ್ಣಿನಲ್ಲಿ 5.5 ರಿಂದ 7.0 ರವರೆಗಿನ ಪಿಎಚ್ ಮಟ್ಟ ಸೂಕ್ತ. ತೇವಾಂಶ ಭರಿತವಾದ ಹವಾಗುಣದಲ್ಲಿ ಕಡಲೆ ಚೆನ್ನಾಗಿ ಬೆಳೆಯುತ್ತದೆ.

ಕಬ್ಬು ಬೆಳೆಗಾರರೇ… ನೀವು ಮಾಡಬೇಕಾದ ಮುಖ್ಯ ಕೆಲಸವಿದು..!

ಕಬ್ಬು ಬೆಳೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಸಿಹಿ ರಾಜಾ ಅಂದ್ರೆ ಅದು ಕಬ್ಬು ಬೆಳೆ. ಇನ್ನು ನಮ್ಮ ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳು ಎಂದರೆ, ಮಧ್ಯಪ್ರದೇಶ, ಗುಜರಾತ್, ಬಿಹಾರ್, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ.

ಈ 6 ಪರೀಕ್ಷೆ ಮಾಡಿದರೆ ನಿಮ್ಮ ತೋಟದ ಹಣೆಬರಹ ಗೊತ್ತಾಗುತ್ತೆ..!

ತೋಟಗಾರಿಕೆ ಬೆಳೆಯಾದ ಅಡಿಕೆ, ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಮಲೇಷ್ಯಾ ದೇಶದ ಮೂಲವಾದ ಅಡಿಕೆಗೆ ಹೆಚ್ಚಿನ ಬೇಡಿಕೆ. ಹೀಗಾಗಿ ಸಾಕಷ್ಟು ರೈತರು ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಮಲೆನಾಡು, ಕರಾವಳಿ ಸೇರಿದಂತೆ ಬಯಲು ಸೀಮೆಯಲ್ಲಿಯೂ ವ್ಯಾಪಕವಾಗಿ ಬೆಳೆಯುತ್ತಾರೆ.

ಕಬ್ಬಿನ ರವದಿ ಸುಡುತ್ತಿದ್ದೀರಾ? ಹಾಗಾದರೆ...!

       ಕಬ್ಬು ಬೆಳೆಗಾರರು ಕಬ್ಬು ಕಟಾವು ಮಾಡಿದ ಮೇಲೆ ಉಳಿದ ಸೋಗು ಅಥವಾ ರವದಿ, ತ್ಯಾಜ್ಯಗಳನ್ನು ಸುಟ್ಟು ಹಾಕುತ್ತಾರೆ. ಇದು ಕೇವಲ ಕಬ್ಬಿಗಲ್ಲದೇ ಎಲ್ಲಾ ಬೆಳೆಗಳಲ್ಲೂ ಕಟಾವಿನ ನಂತರ ತ್ಯಾಜ್ಯಗಳನ್ನು ಸುಡುವುದು ಅಥವಾ ಜಮೀನಿನ ಹೊರಗೆ ಬಿಸಾಡುವುದು ಬಹುತೇಕ ರೈತರ ಹವ್ಯಾಸವಾಗಿದೆ. ಇದರಿಂದ ಗಾಳಿಯೂ ಮಲಿನವಾಗುತ್ತದೆ. ಆದರೆ ಇವುಗಳ ಉಪಯೋಗಗಳನ್ನು ತಿಳಿದರೆ ಬಹುಶಃ ಯಾವ ರೈತನೂ ತ್ಯಾಜ್ಯವನ್ನು ಸುಡುವುದಿಲ್ಲ. ಕೃಷಿಯಲ್ಲಿ ಯಾವುದೇ ತ್ಯಾಜ್ಯವಾಗಲಿ ಸರಿಯಾಗಿ ಉಪಯೋಗಿಸಿಕೊಂಡರೆ ಅನೇಕ ಲಾಭಗಳಿವೆ.

ಕಬ್ಬಿನಲ್ಲಿ ಸಕ್ಕರೆ ಅಂಶ ಕಂಡುಹಿಡಿಯಲು ಇಲ್ಲಿದೆ ಸಾಧನ?

       ರಾಜ್ಯದ ಎಷ್ಟೋ ರೈತರು ಕಬ್ಬಿನ ಮೇಲೆ ಅವಲಂಬಿತರಾಗಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಬಹಳಷ್ಟು  ರೈತರು ಕಬ್ಬನ್ನು ತಲತಲಾಂತರದಿಂದ ಬೆಳೆದುಕೊಂಡು ಬಂದಿದ್ದಾರೆ. ಹಾಗಾಗಿ ಇವರ ಆದಾಯ ಕಬ್ಬಿನ ಬೆಳೆ ಹಾಗೂ ಬೆಲೆಯ ಮೇಲೆ ನಿಂತಿದೆ. ಹೆಚ್ಚು ಟನ್ ಬೆಳೆದರೆ ಹೆಚ್ಚು ಆದಾಯ. ಕರ್ನಾಟಕದಲ್ಲಿ ಇಂದು ಟನ್ ಕಬ್ಬಿಗೆ 3000 ರೂ ಆಸುಪಾಸಿನಲ್ಲಿ ಬೆಲೆ ಇದೆ. ಆದರೆ ಕೇವಲ ಇಳುವರಿಯ ಮೇಲೆ ಬೆಲೆ ನಿಗದಿ ಮಾಡುವುದು ಎಷ್ಟು ಸರಿ? ಇದರ ಬದಲಿಗೆ ಗುಣಮಟ್ಟದ ಮೇಲೆ, ಸಕ್ಕರೆ ಪ್ರಮಾಣದ ಮೇಲೆ ಬೆಲೆ ನಿಗದಿ ಮಾಡಿದರೆ, ಉತ್ತಮ ಬೆಳೆಗೆ ಬೆಲೆ ಸಿಕ್ಕಿ ಕಡಿಮೆ ಇಳುವರಿ ಪಡೆದರೂ ಗುಣಮಟ್ಟದ ಮೇಲೆ ಉತ್ತಮ ಆದಾಯವನ್ನು ರೈತರು ಗಳಿಸಬಹುದು. ಸಕ್ಕರೆ ಅಂಶವನ್ನು ಅಳತೆ ಮಾಡಲು ಒಂದು ಸಾಧನ ಇದೆ. ಬ್ರಿಕ್ಸ್ ರಿಫ್ರಾಕ್ಟೋಮೀಟರ್(brix refractometer).

ಕೃಷಿ ಭೂಮಿಗೆ ನಾಟಿ ಔಷಧಿ ಕೆಲಸ ಮಾಡುತ್ತಾ?

ಕೋಟಿ ವಿದ್ಯೆಗಿಂತ ನಾಟಿ ವಿದ್ಯೆ ಮೇಲು. ಗುಡ್ಡಗಾಡುಗಳಲ್ಲಿ ಸಿಗುವ ಎಲೆ, ಬೇರು, ಕಾಯಿಗಳಿಂದ ಔಷಧಿ ತಯಾರಿಸಿ ನಾನಾ ವ್ಯಾಧಿಗಳಿಗೆ ಚಿಕಿತ್ಸೆ ನೀಡುತ್ತಾರೆ ನಾಟಿ ವೈದ್ಯರು. ನಾಟಿ ವೈದ್ಯ ಪದ್ಧತಿಗೆ ಶತಶತಮಾನಗಳ ಇತಿಹಾಸವಿದ್ದು, ಭವ್ಯ ಭಾರತ ಶ್ರೇಷ್ಠ ಪರಂಪರೆಯ ಭಾಗವಾಗಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದು ಸಾವಿರಾರು ಜನರು ಈ ವೃತ್ತಿಯಲ್ಲಿದ್ದರೂ ಸಹಿತ ಎಲೆಮರೆ ಕಾಯಿಗಳಂತೆ ಕೆಲಸ ಮಾಡುತ್ತಿದ್ದಾರೆ.

ಬಾಂಗ್ಲಾದೇಶದಲ್ಲಿ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಡಾ. ಸಾಯಿಲ್ ಜೈವಿಕ ಗೊಬ್ಬರಗಳ ಸದ್ದು

       ಕಳೆದ 1 ದಶಕದಿಂದ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರು ಮತ್ತು ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಕೆ.ಆರ್.ಹುಲ್ಲುನಾಚೇಗೌಡರ ನೇತೃತ್ವದ ತಂಡ ರಾಜ್ಯದಾದ್ಯಂತ ಸಂಚರಿಸಿ ರೈತರ ಜಮೀನು, ತೋಟಗಳಿಗೆ ಭೇಟಿ ನೀಡಿ ಮಣ್ಣಿನ ಫಲವತ್ತತೆ, ಬೆಳೆಗಳ ಇಳುವರಿ ಹೆಚ್ಚಿಸುವ ಸಾವಯವ ಕೃಷಿಯ ಬಗ್ಗೆ ಪಾಠ ಮಾಡಿದೆ. ನಾಡಿನಾದ್ಯಂತ ಸಾವಯವ ಕೃಷಿಯ ಮಹತ್ವವನ್ನು ರೈತರಿಗೆ ತಿಳಿಸುತ್ತಾ, ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನು ಸಾವಯವ ಕೃಷಿಗೆ ಬದಲಾಯಿಸಿದ ಮೈಕ್ರೋಬಿ ಸಂಸ್ಥೆಯ ಉತ್ಪನ್ನವಾದ ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಯಶೋಗಾಥೆ ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿ ಪ್ರತಿಧ್ವನಿಸಿದೆ.

ಕೃಷಿ ಭೂಮಿಯಿಲ್ಲದಿದ್ದರು ಕೃಷಿಮಾಡುವ ವಿಧಾನದ ಬಗ್ಗೆ ನಿಮಗೆಷ್ಟು ಗೊತ್ತು?

ತಂತ್ರಜ್ಞಾನವಿಜ್ಞಾನಶಿಕ್ಷಣ ಸೇರಿದಂತೆ ಎಲ್ಲದರಲ್ಲೂ ನಾವು ಮುಂದೆ ಸಾಗುತ್ತಿರುವುದು ಹೆಮ್ಮೆಯ ವಿಚಾರವೇ. ಅದರಂತೆ ಕೃಷಿ ಕ್ಷೇತ್ರದಲ್ಲಿಯೂ ಒಂದಲ್ಲಾ ಒಂದು ಬೆಳವಣಿಗೆ, ಪ್ರಯೋಗ ನಿತ್ಯವೂ ಸಾಗಿದೆ.  ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗಿರುವ ಹೈಡ್ರೋಪೋನಿಕ್ಸ್ ಕೃಷಿ ಎಲ್ಲರ ಗಮನ ಸೆಳೆಯುತ್ತಿದೆ. ಕೃಷಿಗೆ ಮಣ್ಣೇ ಜೀವಾಳ. ಆದರೆ ಈ ಹೊಸ ಮಾದರಿಯ ಕೃಷಿಗೆ ಮಣ್ಣು ಬೇಡವೇ ಬೇಡ. ಮಣ್ಣಿಲ್ಲದೆ ಕೃಷಿ ಮಾಡಿ ಅಧಿಕ ಆದಾಯ ಗಳಿಸಬಹುದು. ಹೈಡ್ರೋಪೋನಿಕ್ಸ್ ತಂತ್ರಜ್ಞಾನವೆಂದು ಕರೆಯಲ್ಪಡುವ ಈ ವಿಧಾನವನ್ನು 1940ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ವ್ಯವಸ್ಥೆಯಲ್ಲಿ ಬೆಳೆಯುವ ಬೆಳವಣಿಗೆಗೆ ಬೇಕಾಗುವ ಪೋಷಕಾಂಶ ದ್ರಾವಣವನ್ನು ಅಭಿವೃದ್ಧಿಪಡಿಸಿದರು. ನಂತರ 1960 ಮತ್ತು 70ರ ದಶಕದಲ್ಲಿ ಕೆಲವೊಂದು ದೇಶಗಳಲ್ಲಿ ಹೈಡ್ರೋಪೋನಿಕ್ಸ್ ಫಾರ್ಮ್ ಗಳು ತಲೆ ಎತ್ತಿದವು.

40 ವರ್ಷದಿಂದ ಕಂಡಿರದ ಅರಿಶಿನ ಬೆಳೆ ಇದು..!

ಅರಿಶಿನವಿಲ್ಲದೆ ಅಡುಗೆಯೂ ಇಲ್ಲ, ಧಾರ್ಮಿಕ ಆಚರಣೆಯೂ ಇಲ್ಲ. ಅಷ್ಟೇ ಅಲ್ಲ ಆಯುರ್ವೇದದಲ್ಲೂ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹೀಗಾಗಿ ಅರಿಶಿನಕ್ಕೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆಯಿರುವುದರಿಂದ ರೈತರು ಅರಿಶಿನ ಬೆಳೆಯೋಕೆ ಉತ್ಸುಕರಾಗಿರುತ್ತಾರೆ.

ಆಲೂಗಡ್ಡೆ ಕೃಷಿ ಮಾಡುವ ಮುನ್ನ ತಿಳಿಯಬೇಕಾದ ವಿಷಯಗಳು

ತರಕಾರಿ ಬೆಳೆಗಳ ರಾಜ ಎಂದು ಕರೆಯುವ ಆಲೂಗಡ್ಡೆ ಉತ್ತಮ ಪೌಷ್ಠಿಕಾಂಶಗಳ ಆ. ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಲೂಗಡ್ಡೆ ತಿನ್ನುವುದು ಒಳ್ಳೆಯದು ಎನ್ನುತ್ತಾರೆ. ಸಾಕಷ್ಟು ತಿಂಡಿಗಳಲ್ಲಿ ಆಲೂಗಡ್ಡೆಯನ್ನು ಬಳಕೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೆ ಸದಾ ಬೇಡಿಕೆ ಇದ್ದೇ ಇರುತ್ತದೆ ಹಾಗಾಗಿ ರೈತರು ಆಲೂಗಡ್ಡೆಯನ್ನ ಬೆಳೆದರೆ ಉತ್ತಮ ಆದಾಯ ಪಡೆಯಬಹುದು.

ಆಲೂಗಡ್ಡೆ ಕೃಷಿ ಮಾಡುವ ಮುನ್ನ ತಿಳಿಯಬೇಕಾದ ವಿಷಯಗಳು

ತರಕಾರಿ ಬೆಳೆಗಳ ರಾಜ ಎಂದು ಕರೆಯುವ ಆಲೂಗಡ್ಡೆ ಉತ್ತಮ ಪೌಷ್ಠಿಕಾಂಶಗಳ ಆ. ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಲೂಗಡ್ಡೆ ತಿನ್ನುವುದು ಒಳ್ಳೆಯದು ಎನ್ನುತ್ತಾರೆ. ಸಾಕಷ್ಟು ತಿಂಡಿಗಳಲ್ಲಿ ಆಲೂಗಡ್ಡೆಯನ್ನು ಬಳಕೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೆ ಸದಾ ಬೇಡಿಕೆ ಇದ್ದೇ ಇರುತ್ತದೆ ಹಾಗಾಗಿ ರೈತರು ಆಲೂಗಡ್ಡೆಯನ್ನ ಬೆಳೆದರೆ ಉತ್ತಮ ಆದಾಯ ಪಡೆಯಬಹುದು.

ಕಲ್ಲಂಗಡಿ ಕೃಷಿ ಮಾಡುವವರಿಗೆ ಕಿವಿಮಾತು…!

ರಾಜ್ಯದ ಪ್ರಮುಖ ಬೇಸಿಗೆ ಬೆಳೆಯಾಗಿರುವ ಕಲ್ಲಂಗಡಿ ಕುಕುರ್ಬಿಟೇಸಿ ಕುಟುಂಕ್ಕೆ ಸೇರಿದ ಸಸ್ಯವಾಗಿರುತ್ತದೆಇದನ್ನು ಬಚ್ಚಲಗಾಯಿವಾಟರ್ಮೆಲನ್ ಎಂಬ ಹೆಸರುಗಳಿಂದ ಕರೆಯುತ್ತೇವೆಕಲ್ಲಂಗಡಿ ಬೇಸಿಗೆ ಕಾಲದ ಮುಖ್ಯವಾದ ಬೆಳೆ, ಕಾಯಿ ಹಣ್ಣಾಗುವಾಗ ಒಣಹವೆ ಇದ್ದರೆ ಸಕ್ಕರೆ ಅಂಶ ಹೆಚ್ಚಾಗುತ್ತದೆರಾಜ್ಯದ ಬಹುತೇಕ ಎಲ್ಲ ಪ್ರದೇಶಗಳಲ್ಲಿ  ಬೆಳೆಯನ್ನು ಬೆಳೆಯಬಹುದುಹಣ್ಣಿನಲ್ಲಿ ಪ್ರತಿಶತ 78ರಷ್ಟು ಭಾಗವು ಸೇವನೆಗೆ ಯೋಗ್ಯವಾಗಿದ್ದು ಪ್ರೋಟಿನ್ಕ್ಯಾಲ್ಸಿಯಂಫಾಸ್ಪರಸ್ಕಬ್ಬಿಣಕರೋಟಿನ್ಥಯಾಮಿನ್ರೈಬೋಪ್ಲೇವಿನ್ನಯಾಸಿನ್ ಹಾಗೂ ವಿಟಾಮಿನ್ ‘ಸಿ’ ಅಂಶವನ್ನು ಸಹ ಹೊಂದಿರುತ್ತದೆ.

ಉತ್ಕೃಷ್ಟ ಇಳುವರಿಗೆ ಸುಲಭ ತಂತ್ರ ಇಲ್ಲಿದೆ..!

       ಮಣ್ಣು ಇಲ್ಲದೇ ಜೀವಿಗಳು ಇಲ್ಲ. ಹಾಗಾಗಿಯೇ ಮಣ್ಣು ಸಕಲ ಸಂಪತ್ತಿನ ಆಗರ ಎನ್ನುವುದು. ಮಣ್ಣು ಫಲವತ್ತಾಗಿರದಿದ್ದರೆ ಯಾವುದೇ ಬೆಳೆಯಾಗಲಿ, ಯಾವುದೇ ಆಹಾರವಾಗಲಿ ಪೌಷ್ಠಿಕವಾಗಿರುವುದಿಲ್ಲ. ಮಣ್ಣಿನ ಫಲವತ್ತತೆ ಹಾಳಾಗಿದ್ದರ ಫಲವಾಗಿಯೇ ಇಂದು ಹಲವು ರೋಗ ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯಿಂದ ಮಣ್ಣು ಮತ್ತು ಆಹಾರ ಸತ್ವ ಕಳೆದುಕೊಂಡಿದೆ.

ಅತಿಯಾದ್ರೆ ಅಮೃತವೇ ವಿಷ. ಇನ್ನು ನೀರು ಏನಾಗುತ್ತೆ..?

ನೀರು ಸಕಲ ಜೀವರಾಶಿಗಳಿಗೆ ಅತ್ಯಗತ್ಯ. ಜತೆಗೆ ಕೃಷಿಯಲ್ಲಿಯೂ ಕೂಡ ನೀರಿನ ಪಾತ್ರ ಅತಿ ಮುಖ್ಯ. ನೀರು ಇಲ್ಲವೆಂದ್ರೆ ಬೆಳೆಯೇ ಇಲ್ಲ, ಹಾಗಂತ ನೀರನ್ನು ಹೆಚ್ಚಾಗಿ ಬಳಕೆ ಮಾಡುವಂತಿಲ್ಲ.ತಿಯಾದರೂ ಸಮಸ್ಯೆ, ಕಡಿಮೆಯಾದರೂ ಸಮಸ್ಯೆ. ಹಾಗಾಗಿ ಕೃಷಿ ಭೂಮಿಗೆ ನೀರನ್ನು ಹೇಗೆ ಬಳಸಬೇಕೆಂಬುದನ್ನು ರೈತರು ತಿಳಿಯಬೇಕು.

ಸಾವಯವ ಕೃಷಿ ಮೊದಲ ಯತ್ನದಲ್ಲೇ 100 ಟನ್ ಕಬ್ಬು ಇಳುವರಿ

ಸಾವಯವ ಕೃಷಿ ಮತ್ತು ವೈಜ್ಞಾನಿಕ ಕೃಷಿಯತ್ತ ರೈತರು ಚಿತ್ತ ಹರಿಸಿದರೆ ತಮ್ಮ ಭೂಮಿಯ ಆಯಸ್ಸನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ತಮ್ಮ ಕೃಷಿ ಭೂಮಿ ಮುಂದಿನ ಪೀಳಿಗೆಗೂ ಉಳಿಯಬೇಕೆಂದರೆ ರಾಸಾಯನಿಕಕ್ಕೆ ಮುಕ್ತಾಯ ಹೇಳುವುದು ಅನಿವಾರ್ಯವಾಗಿದೆ. ಅಷ್ಟೇ ಅಲ್ಲ ಮನುಷ್ಯನ ಆಯಸ್ಸು ಸಹಿತ ಕೃಷಿ ಪದ್ಧತಿಯ ಮೇಲೆಯೇ ಅವಲಂಬಿತವಾಗಿದೆ ಎಂದರೆ ತಪ್ಪಾಗದು. ಕಾರಣ ಮನುಷ್ಯ ಸೇವಿಸುವ ಆಹಾರ ಕೂಡ ವಿಷಯುಕ್ತವಾಗಿದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತಿಲ್ಲ. ಹೀಗಾಗಿ ಮನುಷ್ಯನ ಆರೋಗ್ಯ ಕೂಡ ದಿನೇ ದಿನೇ ಕ್ಷೀಣಿಸುತ್ತಿರುವುದು ವಿಪರ್ಯಾಸವೇ ಸರಿ.

ಇದು ZERO CHEMICAL ಸಾವಯವ ಕಬ್ಬು-160 ಟನ್ ಇಳುವರಿ..!

ಕಬ್ಬು ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಮಂಡ್ಯ, ಮೈಸೂರು, ಚಾಮರಾಜನಗರ, ಉತ್ತರ ಕರ್ನಾಟಕದ ಹಲವು ಭಾಗಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಎಷ್ಟೋ ರೈತರಿಗೆ ಕಬ್ಬು ಬೆಳೆಗೆ ನೀರು ನಿರ್ವಹಣೆ ಮಾಡುವುದೆ ದೊಡ್ಡ ತಲೆನೋವು. ಅದರ ಜತೆಗೆ ಗೊಣ್ಣೆ ಹುಳುವಿನ ತೊಂದರೆ, ಇನ್ನು ಹಲವಾರು ಸಮಸ್ಯೆಗಳನ್ನು ಅನುಭವಿಸಿ ಇಳುವರಿಯಲ್ಲಿ ಎಕರೆಗೆ ಕೇವಲ 30 ರಿಂದ 40 ಟನ್ ಪಡೆಯೋದು ಕಷ್ಟವಾಗಿರುತ್ತೆ. ಹೀಗಾಗಿ ನಿರೀಕ್ಷಿತ ಲಾಭ ಗಗನ ಕುಸುಮವಾಗಿದೆ.

ಸಾವಯವ ಕೃಷಿಯಲ್ಲಿ ಬದನೆ ಬೆಳೆ: ಏನು ಲಾಭ?

       ಮೈಸೂರು ಜಿಲ್ಲೆ HD ಕೋಟೆ ತಾಲ್ಲೂಕಿನ ಕಂಚಮಳ್ಳಿ ಗ್ರಾಮದ ರೈತ ಮಧು 5 ಎಕರೆ ಜಮೀನಿನ ಮಾಲೀಕರು. 1 ಎಕರೆಯಲ್ಲಿ ಬದನೆಕಾಯಿ ಬೆಳೆದಿದ್ದಾರೆ. ವಿಶೇಷವೆಂದರೆ ಇವರು ಸಾವಯವ ಕೃಷಿ ಪದ್ಧತಿಯಲ್ಲಿ ಬದನೆ ಬೆಳೆದಿದ್ದಾರೆ. ಯಾವುದೇ ರಾಸಾಯನಿಕಗಳನ್ನು ಬಳಸದೇ ನಾಟಿ ಹಸುವಿನ ಗಂಜಲ ಮತ್ತು ಬೇವಿನೆಣ್ಣೆ ಬಳಸಿ ಕೀಟಗಳ ನಿರ್ವಹಣೆ ಮಾಡುತ್ತಿದ್ದಾರೆ.

ಇವರ ಕಡಲೆ ಬೆಳೆ ಕಂಡು 200 ಎಕರೆಯಲ್ಲಿ ರೈತರು ಮಾಡಿದ್ದೇನು ಗೊತ್ತಾ..?

ಕಡಲೆ ದ್ವಿದಳ ಧಾನ್ಯಗಳ ಪೈಕಿ ಪ್ರಮುಖ ಬೆಳೆಯಾಗಿದ್ದು, ಉತ್ತಮ ತೇವಾಂಶದ ಪರಿಸ್ಥಿತಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕಡಲೆ ಬೆಳೆಯಲು ಸೂಕ್ತವಾದ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ನಿಂದ 30 ಡಿಗ್ರಿ ಸೆಲ್ಸಿಯಸ್. ಕಡಲೆ ಬೆಳೆಯನ್ನು ವಿವಿಧ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಆದರೆ ಮರಳು ಮಿಶ್ರಿತ ಕಲಸು ಮಣ್ಣು, ಜೇಡಿ ಮಣ್ಣು ಈ ಬೆಳೆಗೆ ಸೂಕ್ತವಾಗಿರುತ್ತೆ. ಮಣ್ಣಿನಲ್ಲಿ ರಸಸಾರ 5 ರಿಂದ 7ರಷ್ಟು ಇದ್ದರೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ.     

ಒಂದು ಮರದಿಂದ 400-500 ಎಳನೀರು: ಹೀಗೆ ಮಾಡಿದರೆ ನಿಮಗೂ ಸಾಧ್ಯ

       ಸಾವಯವ ಕೃಷಿಯನ್ನು ಅನುಸರಿಸಿದರೆ ಕೃಷಿಕರಿಗೆ ಹಲವು ಲಾಭಗಳಿವೆ. ಮಣ್ಣಿನ ಫಲವತ್ತತೆ ಹೆಚ್ಚುತ್ತೆ, ಅಧಿಕ ಇಳುವರಿ ಸಿಗುತ್ತೆ, ಹೀಗೆ ಇದರ ಪ್ರಯೋಜನಗಳು ಹಲವು. ಎಳನೀರು ವ್ಯಾಪಾರಿಯೂ ಆದ ಈ ಸಾವಯವ ಕೃಷಿಕರು, ತಮ್ಮ ತೆಂಗಿನ ತೋಟದಲ್ಲಿ ಬಹಳ ವ್ಯತ್ಯಾಸ ಕಂಡಿದ್ದಾರೆ. ರಾಸಾಯನಿಕ ಬಳಸುತ್ತಿದ್ದಾಗ ಇದ್ದ ಸಮಸ್ಯೆಗಳು ಕಾಣೆಯಾಗಿವೆ. ವರ್ಷಕ್ಕೆ ಒಂದು ಮರದಲ್ಲಿ 480 ರಿಂದ 500 ತೆಂಗಿನ ಕಾಯಿಯನ್ನು ಪಡೆಯುತ್ತಿದ್ದಾರೆ.

ತೆಂಗು, ಅಡಿಕೆ ಒಟ್ಟಿಗೆ ಬೆಳೆಯಬಹುದಾ?

       ಅಡಿಕೆ ಮತ್ತು ತೆಂಗು ಉತ್ತಮ ಆದಾಯ ಕೊಡುವ ಎರಡು ತೋಟಗಾರಿಕೆ ಬೆಳೆಗಳು. ಹಲವು ಕಡೆ ಇವನ್ನು ಒಟ್ಟಿಗೆ ಬೆಳೆಯುವುದನ್ನು ನೋಡಿದ್ದೇವೆ. ಇವೆರಡರಲ್ಲಿ ಒಂದನ್ನು ಮುಖ್ಯ ಬೆಳೆಯಾಗಿ, ಮತ್ತೊಂದನ್ನು ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತಾರೆ. ಹೀಗೆ ರೈತರು ಅಡಿಕೆ ಮತ್ತು ತೆಂಗು ಎರಡನ್ನೂ ಒಟ್ಟಿಗೆ ಬೆಳೆಯುವ ವಾಡಿಕೆ ಇದೆ. ಆದರೆ ಹೀಗೆ ಬೆಳೆಯಬಹುದಾ? ಇದರಿಂದ ಆಗುವ ಅಡ್ಡ ಪರಿಣಾಮಗಳೇನು? ತೆಂಗು, ಅಡಿಕೆ ಜೊತೆ ಯಾವ ಬೆಳೆಗಳನ್ನು ಬೆಳೆದರೆ ಉತ್ತಮ?

ಕಲ್ಲುಗಾಡಿನಂತಿರುವ ಪ್ರದೇಶದಲ್ಲಿ ಯಶಸ್ವಿ ಅಡಿಕೆ ತೋಟ

       ಸಾಮಾನ್ಯ ಜಮೀನಿನಲ್ಲೇ ಕೃಷಿ ಮಾಡಲು ಒದ್ದಾಡುವ ಈಗಿನ ರೈತರ ಮಧ್ಯೆ ಇಲ್ಲೊಬ್ಬ ರೈತರು ಕಲ್ಲುಗಾಡಿನಂತಿರುವ ಬೆಟ್ಟದ ಪ್ರದೇಶದಲ್ಲಿ ಅಡಿಕೆ, ಕಾಫಿ ಬೆಳೆದು ಕೃಷಿ ಮಾಡುತ್ತಿದ್ದಾರೆ. ರೋಗಗಳಿಂದ ಕಾಡಿದರೂ ಸಾವಯವ ಕೃಷಿ ಪದ್ಧತಿಯಿಂದ ತೋಟ ನಿರ್ವಹಣೆ ಮಾಡಿ ಯಶಸ್ವಿಯಾಗಿದ್ದಾರೆ. ಇಂತಹ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತ ಅನುಭವ ಏನು? ಇವರು ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ ಬನ್ನಿ ನೋಡೋಣ.

ಕೆ.ಜಿಗೆ 750-850 ರೂ. ಬೆಲೆ ಇರುವ ಲವಂಗ ಬೆಳೆಯುವುದು ಹೇಗೆ?

       ಲವಂಗವು ವಿಶ್ವದಾದ್ಯಂತ ಒಂದು ಪ್ರಖ್ಯಾತ ಮಸಾಲೆ ಪದಾರ್ಥವಾಗಿದ್ದು, ಶತಶತಮಾನಗಳಿಂದಲೂ ಅಡುಗೆ ಮತ್ತು ಸಾಂಪ್ರದಾಯಿಕ ಔಷಧದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಬೆಳೆ ಇಂಡೋನೇಷ್ಯಾದ ಮೊಲುಕ್ಕಾಸ್ ಅಥವಾ ಸ್ಪೈಸ್ ದ್ವೀಪಗಳಿಗೆ ಸ್ಥಳೀಯವಾಗಿದೆ. ಆದರೆ ಈಗ ಭಾರತ, ಶ್ರೀಲಂಕಾ, ಮಡಗಾಸ್ಕರ್ ಮತ್ತು ಜಾಂಜಿಬಾರ್ ಸೇರಿದಂತೆ ಉಷ್ಣವಲಯದ ಹಲವಾರು ದೇಶಗಳಲ್ಲಿ ಬೆಳೆಯಲಾಗುತ್ತದೆ. ಅಧಿಕ ಪರಿಮಳ ಮತ್ತು ರುಚಿಯಲ್ಲಿ ಗಾಢತೆಯನ್ನು ಹೊಂದಿರುವ ಲವಂಗವನ್ನು ಅನೇಕ ಆಹಾರಗಳಲ್ಲಿ, ವಿಶೇಷವಾಗಿ ಮಾಂಸ ಮತ್ತು ಬೇಕರಿ ಉತ್ಪನ್ನಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತದೆ. ಲವಂಗ ಬೆಳೆಯುವುದರಿಂದ ರೈತರು ಉತ್ತಮ ಆದಾಯ ಗಳಿಸುವ ಸಾಧ್ಯತೆ ಇದೆ. ಹಾಗಾದರೆ ಇದನ್ನು ಬೆಳೆಯುವ ರೀತಿ ಹೇಗೆ? ವಾತಾವರಣ ಹೇಗಿರಬೇಕು?

1234567
|< 1  2   3   4   5 ...>|
Home    |   About Us    |   Contact    |   
microbi.tv | Powered by Ocat Business Promotion Service in India