ಸಾಯುತ್ತಿದ್ದ ಎಲೆ ಬಳ್ಳಿ 1 ತಿಂಗಳಲ್ಲಿ ಮತ್ತೆ ಚಿಗುರಿತು..!
ದಶಕದ ಹಿಂದೆ ವೀಳ್ಯದೆಲೆ ಬೆಳೆಯೋಕೆ ಪೈಪೋಟಿಗೆ ಬಿದ್ದಿದ್ದ ರೈತರು ಈಗ, ಶೇಂಗಾ, ಹತ್ತಿ, ಇತರ ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳತ್ತ ಮುಖಮಾಡಿದ್ದಾರೆ. ವೀಳ್ಯದೆಲೆ ಸೂಕ್ಷ್ಮ ಬೆಳೆಯಾಗಿದ್ದರಿಂದ ನಿರ್ವಹಣೆಯಲ್ಲಿ ರೈತರು ಎಡುವುದು ಹೆಚ್ಚು. ಇತ್ತೀಚೆಗೆ ರೋಗಗಳು ಹೆಚ್ಚಾಗಿದ್ದು, ವೀಳ್ಯದೆಲೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಎಲೆಚುಕ್ಕೆ ರೋಗ, ಎಲೆ ಮುಟುರು ರೋಗ, ಸೊರಗು ರೋಗ, ಬುಡ ಕೊಳೆಯುವ ರೋಗಗಳಿಂದ ಹೆಚ್ಚಿನ ವೀಳ್ಯದೆಲೆ ಬೇಸಾಯಗಾರರು ನಷ್ಟ ಅನುಭವಿಸುತ್ತಿದ್ದಾರೆ.
|
ಸಾಯುತ್ತಿದ್ದ ಎಲೆ ಬಳ್ಳಿ 1 ತಿಂಗಳಲ್ಲಿ ಮತ್ತೆ ಚಿಗುರಿತು..!
ದಶಕದ ಹಿಂದೆ ವೀಳ್ಯದೆಲೆ ಬೆಳೆಯೋಕೆ ಪೈಪೋಟಿಗೆ ಬಿದ್ದಿದ್ದ ರೈತರು ಈಗ, ಶೇಂಗಾ, ಹತ್ತಿ, ಇತರ ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳತ್ತ ಮುಖಮಾಡಿದ್ದಾರೆ. ವೀಳ್ಯದೆಲೆ ಸೂಕ್ಷ್ಮ ಬೆಳೆಯಾಗಿದ್ದರಿಂದ ನಿರ್ವಹಣೆಯಲ್ಲಿ ರೈತರು ಎಡುವುದು ಹೆಚ್ಚು. ಇತ್ತೀಚೆಗೆ ರೋಗಗಳು ಹೆಚ್ಚಾಗಿದ್ದು, ವೀಳ್ಯದೆಲೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಎಲೆಚುಕ್ಕೆ ರೋಗ, ಎಲೆ ಮುಟುರು ರೋಗ, ಸೊರಗು ರೋಗ, ಬುಡ ಕೊಳೆಯುವ ರೋಗಗಳಿಂದ ಹೆಚ್ಚಿನ ವೀಳ್ಯದೆಲೆ ಬೇಸಾಯಗಾರರು ನಷ್ಟ ಅನುಭವಿಸುತ್ತಿದ್ದಾರೆ.
|
ಸಾಯುತ್ತಿದ್ದ ಎಲೆ ಬಳ್ಳಿ 1 ತಿಂಗಳಲ್ಲಿ ಮತ್ತೆ ಚಿಗುರಿತು..!
ದಶಕದ ಹಿಂದೆ ವೀಳ್ಯದೆಲೆ ಬೆಳೆಯೋಕೆ ಪೈಪೋಟಿಗೆ ಬಿದ್ದಿದ್ದ ರೈತರು ಈಗ, ಶೇಂಗಾ, ಹತ್ತಿ, ಇತರ ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳತ್ತ ಮುಖಮಾಡಿದ್ದಾರೆ. ವೀಳ್ಯದೆಲೆ ಸೂಕ್ಷ್ಮ ಬೆಳೆಯಾಗಿದ್ದರಿಂದ ನಿರ್ವಹಣೆಯಲ್ಲಿ ರೈತರು ಎಡುವುದು ಹೆಚ್ಚು. ಇತ್ತೀಚೆಗೆ ರೋಗಗಳು ಹೆಚ್ಚಾಗಿದ್ದು, ವೀಳ್ಯದೆಲೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಎಲೆಚುಕ್ಕೆ ರೋಗ, ಎಲೆ ಮುಟುರು ರೋಗ, ಸೊರಗು ರೋಗ, ಬುಡ ಕೊಳೆಯುವ ರೋಗಗಳಿಂದ ಹೆಚ್ಚಿನ ವೀಳ್ಯದೆಲೆ ಬೇಸಾಯಗಾರರು ನಷ್ಟ ಅನುಭವಿಸುತ್ತಿದ್ದಾರೆ.
|
ಸಾಯುತ್ತಿದ್ದ ಎಲೆ ಬಳ್ಳಿ 1 ತಿಂಗಳಲ್ಲಿ ಮತ್ತೆ ಚಿಗುರಿತು..!
ದಶಕದ ಹಿಂದೆ ವೀಳ್ಯದೆಲೆ ಬೆಳೆಯೋಕೆ ಪೈಪೋಟಿಗೆ ಬಿದ್ದಿದ್ದ ರೈತರು ಈಗ, ಶೇಂಗಾ, ಹತ್ತಿ, ಇತರ ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳತ್ತ ಮುಖಮಾಡಿದ್ದಾರೆ. ವೀಳ್ಯದೆಲೆ ಸೂಕ್ಷ್ಮ ಬೆಳೆಯಾಗಿದ್ದರಿಂದ ನಿರ್ವಹಣೆಯಲ್ಲಿ ರೈತರು ಎಡುವುದು ಹೆಚ್ಚು. ಇತ್ತೀಚೆಗೆ ರೋಗಗಳು ಹೆಚ್ಚಾಗಿದ್ದು, ವೀಳ್ಯದೆಲೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಎಲೆಚುಕ್ಕೆ ರೋಗ, ಎಲೆ ಮುಟುರು ರೋಗ, ಸೊರಗು ರೋಗ, ಬುಡ ಕೊಳೆಯುವ ರೋಗಗಳಿಂದ ಹೆಚ್ಚಿನ ವೀಳ್ಯದೆಲೆ ಬೇಸಾಯಗಾರರು ನಷ್ಟ ಅನುಭವಿಸುತ್ತಿದ್ದಾರೆ.
|
ಸಾಯುತ್ತಿದ್ದ ಎಲೆ ಬಳ್ಳಿ 1 ತಿಂಗಳಲ್ಲಿ ಮತ್ತೆ ಚಿಗುರಿತು..!
ದಶಕದ ಹಿಂದೆ ವೀಳ್ಯದೆಲೆ ಬೆಳೆಯೋಕೆ ಪೈಪೋಟಿಗೆ ಬಿದ್ದಿದ್ದ ರೈತರು ಈಗ, ಶೇಂಗಾ, ಹತ್ತಿ, ಇತರ ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳತ್ತ ಮುಖಮಾಡಿದ್ದಾರೆ. ವೀಳ್ಯದೆಲೆ ಸೂಕ್ಷ್ಮ ಬೆಳೆಯಾಗಿದ್ದರಿಂದ ನಿರ್ವಹಣೆಯಲ್ಲಿ ರೈತರು ಎಡುವುದು ಹೆಚ್ಚು. ಇತ್ತೀಚೆಗೆ ರೋಗಗಳು ಹೆಚ್ಚಾಗಿದ್ದು, ವೀಳ್ಯದೆಲೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಎಲೆಚುಕ್ಕೆ ರೋಗ, ಎಲೆ ಮುಟುರು ರೋಗ, ಸೊರಗು ರೋಗ, ಬುಡ ಕೊಳೆಯುವ ರೋಗಗಳಿಂದ ಹೆಚ್ಚಿನ ವೀಳ್ಯದೆಲೆ ಬೇಸಾಯಗಾರರು ನಷ್ಟ ಅನುಭವಿಸುತ್ತಿದ್ದಾರೆ.
|
ಸೆಡ್ಡು ಹೊಡೆದು ಮಾಡಿದ ಸಾವಯವ ಕೃಷಿ ಯುವ ಕೃಷಿಕನಿಗೆ ಬೆಳಕಾಯ್ತು..!
ಮೊದಲು ಸಾವಯವ ಕೃಷಿ ಎಂದ್ರೆ ಮೂಗು ಮುರಿಯುವ ಜನರು ಹೆಚ್ಚಾಗಿದ್ದರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿಯ ಮಹತ್ವವನ್ನು ಅರಿಯುತ್ತಿರುವುದರಿಂದ ಬೆಳೆ, ಭೂಮಿ ಉಳಿಸಿಕೊಳ್ಳಲು ಸಾವಯವ ಕೃಷಿ ಅನಿವಾರ್ಯ ಎಂಬುದನ್ನು ಮನಗಾಣುತ್ತಿದ್ದಾರೆ.
|
ಉಳ್ಳಾಗಡ್ಡಿಯಲ್ಲಿ ಸಾಹುಕಾರರಾಗುವುದು ಹೇಗೆ..?
ಈರುಳ್ಳಿ ಇಲ್ಲ ಎಂದ್ರೆ, ಬಹುತೇಕರ ಮನೆಯಲ್ಲಿ ಅಡುಗೆಯೇ ಅಪೂರ್ಣವಾಗಿಬಿಡುತ್ತದೆ. ಯಾವುದೇ ಅಡುಗೆಯ ರುಚಿಯೂ ಇಲ್ಲಾ ಎಂದರ್ಥ. ಈರುಳ್ಳಿಯ ಒಗ್ಗರಣೆ ಚುರ್ ಎನ್ನಲಿಲ್ಲಾ ಎಂದರೆ ಅಡುಗೆ ಮನೆಗೆ ಕಳೇನೆ ಇರುವುದಿಲ್ಲ. ಆದರೆ ಒಗ್ಗರಣಗೆ ಮಾತ್ರವಲ್ಲ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿಯೂ ಈರುಳ್ಳಿ ಪ್ರಮುಖ ಪಾತ್ರ ವಹಿಸುತ್ತೆ.
|
ಕಲ್ಲಂಗಡಿ ಕೃಷಿ ಹೇಗೆ ಮಾಡಬೇಕು ಗೊತ್ತಾ?
ಕಲ್ಲಂಗಡಿ ರಾಜ್ಯದ ಬೇಸಿಗೆ ಕಾಲದ ಪ್ರಮುಖ ಬೆಳೆ. ಆದರೆ ಇತ್ತೀಚಿನ ದಿನಗಳಲ್ಲಿ ವರ್ಷಪೂರ್ತಿ ಇದಕ್ಕೆ ಬೇಡಿಕೆ ಸೃಷ್ಟಿಯಾಗಿದೆ. ಇದರ ವೈಜ್ಞಾನಿಕ ಹೆಸರು ಸಿಟ್ರುಲಸ್ ಲನಾಟಸ್. ಇದು ಕುಕುರ್ಬೆಟಿಸ್ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದನ್ನು ಬಚ್ಚಲಕಾಯಿ ಎಂದೂ ಕರೆಯುವುದುಂಟು. ಬೇಸಿಗೆ ಕಾಲ ಕಲ್ಲಂಗಡಿ ಹಣ್ಣು ಬೆಳೆಗೆ ಸೂಕ್ತ ಹವಾಗುಣ ಅಂತ ಹೇಳಬಹುದು. ಒಣಹವೆ ಇದ್ದರೆ ಸಕ್ಕರೆಯ ಅಂಶ ಚೆನ್ನಾಗಿ ಬರುತ್ತದೆ.
|
ಎಲ್ಲಾ ರೈತರೂ ಉದ್ಧಾರವಾಗಲಿ ಎಂದು ಬಯಸಿದರು. ಆಮೇಲೆ?
ಸಾವಯವ ಕೃಷಿ ಸಾವಿಲ್ಲದ ಕೃಷಿ, ಸನಾತನ ಕೃಷಿ. ಒಂದು ಕಾಲದಲ್ಲಿ ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕವಾಗಿ ಬೆಳೆದ ಆಹಾರ ತಿಂದು ಜನ ಸದೃಢವಾಗಿದ್ದರು. ಹಸಿರು ಕ್ರಾಂತಿಯ ನಂತರ ಹೆಚ್ಚಿದ ರಾಸಾಯನಿಕ ಬಳಕೆಯಿಂದ ಮಣ್ಣು ಮಲಿನವಾಗಿ ಆಹಾರದ ಪೌಷ್ಠಿಕತೆ ನಶಿಸಿಹೋಗಿದೆ. ಇದನ್ನು ಅರ್ಥ ಮಾಡಿಕೊಂಡಿರುವ ಜನರು ಈಗ ನಿಧಾನವಾಗಿ ಸಾವಯವ ಬೆಳೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಹೀಗಾಗಿ ರೈತರೂ ಕೂಡ ಸಾವಯವ ಕೃಷಿ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇಲ್ಲೊಬ್ಬ ರೈತ 7-8 ವರ್ಷಗಳಿಂದ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದು, ಇತರ ರೈತರಿಗೂ ಈ ಅಮೂಲ್ಯ ಜ್ಞಾನವನ್ನು ಹಂಚುತ್ತಿದ್ದಾರೆ.
|
ವಿಷಯುಕ್ತ ಶೇಂಗಾ ಬೇಡ, ವಿಷಮುಕ್ತ ಶೇಂಗಾ ಬೇಕು..!
ಶೇಂಗಾ ಬೀಜವನ್ನು ನಾವು ನೆಲಗಡಲೆ, ಕಡಲೆಕಾಯಿ, ಕಡ್ಲೆ ಬೀಜ ಸೇರಿದಂತೆ ಹಲವಾರು ಹೆಸರುಗಳಲ್ಲಿ ಕರೆಯುವುದುಂಟು. ಹೀಗಿರುವಾಗ ಶೇಂಗಾ ಬೀಜಕ್ಕೆ ಹೆಸರುಗಳು ಮಾತ್ರ ಹೆಚ್ಚಾಗಿಲ್ಲ ಶೇಂಗಾ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳು ಕೂಡ ಅಷ್ಟೇ ಅಧಿಕ.
|
ಕೃಷಿಯಲ್ಲಿ ರೈತನ ತಂತ್ರಜ್ಞಾನ ಹೆಚ್ಚುಇಳುವರಿಗೆ ಮಾರ್ಗ..!
ಕೃಷಿ ನಮ್ಮ ದೇಶದ ಆರ್ಥಿಕ ಬೆನ್ನೆಲುಬು. ಕೃಷಿ ಕ್ಷೇತ್ರದ ಏಳಿಗೆಯಲ್ಲಿ ನಮ್ಮ ದೇಶದ ಏಳಿಗೆ ಇದೆ ಅಂತ ಹೇಳಿದರೆ ತಪ್ಪಾಗಲಾರದು. ಸದ್ಯಕ್ಕೆ ಕೃಷಿಯ ಮೇಲೆ ನಮ್ಮ ಸರ್ಕಾರ ತೋರುತ್ತಿರುವ ಕಾಳಜಿ, ನೀಡುತ್ತಿರುವ ಸವಲತ್ತುಗಳನ್ನು ನೋಡ್ತಾಯಿದ್ರೆ ರೈತರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
|
ಶೇಂಗಾ ಅಥವಾ ಕಾಳು ಬೆಳೆಯನ್ನು ಬೆಳೆಯುವಾಗ..!
ಬಡವರ ಬಾದಾಮಿ ಶೇಂಗಾ ರಾಜ್ಯದ ಎಲ್ಲಾ ಭಾಗದಲ್ಲಿ ಬೆಳೆಯುವ ಬೆಳೆ. ಎಲ್ಲಾ ರೀತಿಯ ಹವಾಗುಣಕ್ಕೂ ಹೊಂದಿಕೊಳ್ಳುವುದರಿಂದ ಪ್ರಮುಖ ದ್ವಿದಳ ಎಣ್ಣೆಕಾಳು ಬೆಳೆ ಎಂದು ಕರೆಯುತ್ತಾರೆ.
|
ಒಂದೇ ಒಂದು ಬದಲಾವಣೆಯಿಂದ 100 ಟನ್ ಕಬ್ಬು ಇಳುವರಿ..!
ಮೈತುಂಬ ಸಿಹಿಯನ್ನು ತುಂಬಿಕೊಂಡು ಸಕ್ಕರೆ, ಬೆಲ್ಲ ಸೇರಿದಂತೆ ಹಲವಾರು ಪದಾರ್ಥಗಳಾಗಿ ಮಾರ್ಪಾಡಾಗುವ ಕಬ್ಬು ನಮ್ಮ ರಾಜ್ಯದ ಪ್ರಮುಖ ಬೆಳೆಗಳಲ್ಲಿ ಒಂದು. ಹಾಗಾಗಿ ಕಬ್ಬು ಬೆಳೆ ರೈತನ ಕೈಹಿಡಿಯಿತು ಅಂದರೆ ಖಜಾನೆ ತುಂಬಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ ಈಗಿನ ಕೃಷಿ ಪದ್ಧತಿಯಿಂದ ಕಬ್ಬು ಬೆಳೆಯಲ್ಲಿ ಎಕರೆಗೆ 30 ರಿಂದ 40 ಟನ್ ಪಡೆಯುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ತಾವು ಎಡುವುತ್ತಿರುವುದು ಎಲ್ಲಿ ಎಂಬುದು ಬಹುತೇಕ ರೈತರಿಗೂ ಅರಿವಿಲ್ಲ. ಇದನ್ನು ಮನಗಂಡಿರುವ ಮೈಕ್ರೋಬಿ ಸಂಸ್ಥೆ ರೈತರಿಗೆ ಅರಿವು ಮೂಡಿಸಿ ಎಕರೆಗೆ 80 ರಿಂದ 100 ಟನ್ ಇಳುವರಿ ಪಡೆಯಲು ರೈತರಿಗೆ ಬೆನ್ನೆಲುಬಾಗಿ ನಿಂತಿದೆ.
|
ಆರೋಗ್ಯಕರ ಅರಿಶಿನ ಬೆಳೆಯಲು ಸರಳ ಮಾರ್ಗ
ಅರಿಶಿನ ಕೇವಲ ಅಡುಗೆಗೆ ಮಾತ್ರ ಬಳಸುವಂತಹ ಪದಾರ್ಥವ ಲ್ಲ. ಸಾಕಷ್ಟು ರೋಗಗಳಿಗೆ ಅರಿಶಿನ ರಾಮಬಾಣವಾಗಿದೆ.ಅರಿಶಿನದಲ್ಲಿ ಕಂಡು ಬರುವ ಕರ್ಕುಮಿನ್ ಎಂಬ ಪೋಷಕಾಂಶವೇ ಈ ಹೆಗ್ಗಳಿಕೆಗೆ ಪ್ರಮುಖ ಕಾರಣ. ಅಷ್ಟೇ ಅಲ್ಲ ಸೌಂದರ್ಯವರ್ಧಕಗಳಲ್ಲಿಯೂ ಸಹಿತ ಅರಿಶಿನದ ಪ್ರಾಮುಖ್ಯತೆ ಹೆಚ್ಚು. ಅರಿಶಿನದಲ್ಲಿ ಕರ್ಕುಮಿನ್ ಪೋಷಕಾಂಶ ಹೆಚ್ಚು ಆದ್ಯತೆ ಪಡೆದಿರುವುದರಿಂದ ಅರಿಶಿನ ಖರೀದಿ ಮಾಡುವಾಗ, ಮಾರ್ಕೆಟ್ ನಲ್ಲಿ ಕರ್ಕುಮಿನ್ ಕಂಟೆಂಟ್ ಎಷ್ಟಿದೆ ಎಂಬುದನ್ನು ನೋಡಿ ಖರೀದಿಸುತ್ತಾರೆ. ಅದು ಅಗತ್ಯ ಪ್ರಮಾಣದಲ್ಲಿದ್ದರೆ ಮಾತ್ರ ಹೆಚ್ಚು ಬೇಡಿಕೆ. ಹೀಗಿರುವಾಗ ರೈತರು ಅರಿಶಿನವನ್ನು ಬೆಳೆಯುವಾಗ ಗುಣಮಟ್ಟದ ಬೆಳೆ ಬರುವ ಹಾಗೆ ಜೈವಿಕ ಗೊಬ್ಬರಗಳನ್ನು ಬಳಸಿ ಬೆಳೆದರೆ ಒಳ್ಳೆಯದು.
|
120 ಎಕರೆಯ ಕಡಲೆಯಲ್ಲಿ ನೋಡಿ ಚಮತ್ಕಾರ..!
ಕಡಲೆ ಬೆಳೆ ಉತ್ಪಾದನೆ ಹಾಗೂ ಬೆಳವಣಿಗೆಯಲ್ಲಿ ಭಾರತ ದೇಶ ಅಗ್ರಸ್ಥಾನದಲ್ಲಿದೆ. ಕಡಲೆ ಬೆಳೆಯಲ್ಲಿ ಉತ್ತಮ ಪೋಷಕಾಂಶಗಳಿರುವುದರಿಂದ ಹೆಚ್ಚು ಬಳಸಲಾಗುತ್ತದೆ. 3 ತಿಂಗಳ ಬೆಳೆಯಾಗಿರುವ ಕಡಲೆ ಬೆಳೆಯನ್ನು ವಿವಿಧ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದು. ಮರಳು ಮಿಶ್ರಿತ ಕಲಸು ಮಣ್ಣು, ಜೇಡಿ ಮಣ್ಣು ಇದಕ್ಕೆ ಸೂಕ್ತವಾಗಿರುತ್ತದೆ. ಮಣ್ಣಿನಲ್ಲಿ 5.5 ರಿಂದ 7.0 ರವರೆಗಿನ ಪಿಎಚ್ ಮಟ್ಟ ಸೂಕ್ತ. ತೇವಾಂಶ ಭರಿತವಾದ ಹವಾಗುಣದಲ್ಲಿ ಕಡಲೆ ಚೆನ್ನಾಗಿ ಬೆಳೆಯುತ್ತದೆ.
|
ಕಬ್ಬು ಬೆಳೆಗಾರರೇ… ನೀವು ಮಾಡಬೇಕಾದ ಮುಖ್ಯ ಕೆಲಸವಿದು..!
ಕಬ್ಬು ಬೆಳೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಸಿಹಿಯ ರಾಜಾ ಅಂದ್ರೆ ಅದು ಕಬ್ಬು ಬೆಳೆ. ಇನ್ನು ನಮ್ಮ ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳು ಎಂದರೆ, ಮಧ್ಯಪ್ರದೇಶ, ಗುಜರಾತ್, ಬಿಹಾರ್, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ.
|
ಈ 6 ಪರೀಕ್ಷೆ ಮಾಡಿದರೆ ನಿಮ್ಮ ತೋಟದ ಹಣೆಬರಹ ಗೊತ್ತಾಗುತ್ತೆ..!
ತೋಟಗಾರಿಕೆ ಬೆಳೆಯಾದ ಅಡಿಕೆ, ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಮಲೇಷ್ಯಾ ದೇಶದ ಮೂಲವಾದ ಅಡಿಕೆಗೆ ಹೆಚ್ಚಿನ ಬೇಡಿಕೆ. ಹೀಗಾಗಿ ಸಾಕಷ್ಟು ರೈತರು ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಮಲೆನಾಡು, ಕರಾವಳಿ ಸೇರಿದಂತೆ ಬಯಲು ಸೀಮೆಯಲ್ಲಿಯೂ ವ್ಯಾಪಕವಾಗಿ ಬೆಳೆಯುತ್ತಾರೆ.
|
ಕಬ್ಬಿನ ರವದಿ ಸುಡುತ್ತಿದ್ದೀರಾ? ಹಾಗಾದರೆ...!
ಕಬ್ಬು ಬೆಳೆಗಾರರು ಕಬ್ಬು ಕಟಾವು ಮಾಡಿದ ಮೇಲೆ ಉಳಿದ ಸೋಗು ಅಥವಾ ರವದಿ, ತ್ಯಾಜ್ಯಗಳನ್ನು ಸುಟ್ಟು ಹಾಕುತ್ತಾರೆ. ಇದು ಕೇವಲ ಕಬ್ಬಿಗಲ್ಲದೇ ಎಲ್ಲಾ ಬೆಳೆಗಳಲ್ಲೂ ಕಟಾವಿನ ನಂತರ ತ್ಯಾಜ್ಯಗಳನ್ನು ಸುಡುವುದು ಅಥವಾ ಜಮೀನಿನ ಹೊರಗೆ ಬಿಸಾಡುವುದು ಬಹುತೇಕ ರೈತರ ಹವ್ಯಾಸವಾಗಿದೆ. ಇದರಿಂದ ಗಾಳಿಯೂ ಮಲಿನವಾಗುತ್ತದೆ. ಆದರೆ ಇವುಗಳ ಉಪಯೋಗಗಳನ್ನು ತಿಳಿದರೆ ಬಹುಶಃ ಯಾವ ರೈತನೂ ತ್ಯಾಜ್ಯವನ್ನು ಸುಡುವುದಿಲ್ಲ. ಕೃಷಿಯಲ್ಲಿ ಯಾವುದೇ ತ್ಯಾಜ್ಯವಾಗಲಿ ಸರಿಯಾಗಿ ಉಪಯೋಗಿಸಿಕೊಂಡರೆ ಅನೇಕ ಲಾಭಗಳಿವೆ.
|
ಕಬ್ಬಿನಲ್ಲಿ ಸಕ್ಕರೆ ಅಂಶ ಕಂಡುಹಿಡಿಯಲು ಇಲ್ಲಿದೆ ಸಾಧನ?
ರಾಜ್ಯದ ಎಷ್ಟೋ ರೈತರು ಕಬ್ಬಿನ ಮೇಲೆ ಅವಲಂಬಿತರಾಗಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಬಹಳಷ್ಟು ರೈತರು ಕಬ್ಬನ್ನು ತಲತಲಾಂತರದಿಂದ ಬೆಳೆದುಕೊಂಡು ಬಂದಿದ್ದಾರೆ. ಹಾಗಾಗಿ ಇವರ ಆದಾಯ ಕಬ್ಬಿನ ಬೆಳೆ ಹಾಗೂ ಬೆಲೆಯ ಮೇಲೆ ನಿಂತಿದೆ. ಹೆಚ್ಚು ಟನ್ ಬೆಳೆದರೆ ಹೆಚ್ಚು ಆದಾಯ. ಕರ್ನಾಟಕದಲ್ಲಿ ಇಂದು ಟನ್ ಕಬ್ಬಿಗೆ 3000 ರೂ ಆಸುಪಾಸಿನಲ್ಲಿ ಬೆಲೆ ಇದೆ. ಆದರೆ ಕೇವಲ ಇಳುವರಿಯ ಮೇಲೆ ಬೆಲೆ ನಿಗದಿ ಮಾಡುವುದು ಎಷ್ಟು ಸರಿ? ಇದರ ಬದಲಿಗೆ ಗುಣಮಟ್ಟದ ಮೇಲೆ, ಸಕ್ಕರೆ ಪ್ರಮಾಣದ ಮೇಲೆ ಬೆಲೆ ನಿಗದಿ ಮಾಡಿದರೆ, ಉತ್ತಮ ಬೆಳೆಗೆ ಬೆಲೆ ಸಿಕ್ಕಿ ಕಡಿಮೆ ಇಳುವರಿ ಪಡೆದರೂ ಗುಣಮಟ್ಟದ ಮೇಲೆ ಉತ್ತಮ ಆದಾಯವನ್ನು ರೈತರು ಗಳಿಸಬಹುದು. ಸಕ್ಕರೆ ಅಂಶವನ್ನು ಅಳತೆ ಮಾಡಲು ಒಂದು ಸಾಧನ ಇದೆ. ಬ್ರಿಕ್ಸ್ ರಿಫ್ರಾಕ್ಟೋಮೀಟರ್(brix refractometer).
|
ಕೃಷಿ ಭೂಮಿಗೆ ನಾಟಿ ಔಷಧಿ ಕೆಲಸ ಮಾಡುತ್ತಾ?
ಕೋಟಿ ವಿದ್ಯೆಗಿಂತ ನಾಟಿ ವಿದ್ಯೆ ಮೇಲು. ಗುಡ್ಡಗಾಡುಗಳಲ್ಲಿ ಸಿಗುವ ಎಲೆ, ಬೇರು, ಕಾಯಿಗಳಿಂದ ಔಷಧಿ ತಯಾರಿಸಿ ನಾನಾ ವ್ಯಾಧಿಗಳಿಗೆ ಚಿಕಿತ್ಸೆ ನೀಡುತ್ತಾರೆ ನಾಟಿ ವೈದ್ಯರು. ನಾಟಿ ವೈದ್ಯ ಪದ್ಧತಿಗೆ ಶತಶತಮಾನಗಳ ಇತಿಹಾಸವಿದ್ದು, ಭವ್ಯ ಭಾರತದ ಶ್ರೇಷ್ಠ ಪರಂಪರೆಯ ಭಾಗವಾಗಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದು ಸಾವಿರಾರು ಜನರು ಈ ವೃತ್ತಿಯಲ್ಲಿದ್ದರೂ ಸಹಿತ ಎಲೆಮರೆಯ ಕಾಯಿಗಳಂತೆ ಕೆಲಸ ಮಾಡುತ್ತಿದ್ದಾರೆ.
|
ಬಾಂಗ್ಲಾದೇಶದಲ್ಲಿ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಡಾ. ಸಾಯಿಲ್ ಜೈವಿಕ ಗೊಬ್ಬರಗಳ ಸದ್ದು
ಕಳೆದ 1 ದಶಕದಿಂದ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರು ಮತ್ತು ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಕೆ.ಆರ್.ಹುಲ್ಲುನಾಚೇಗೌಡರ ನೇತೃತ್ವದ ತಂಡ ರಾಜ್ಯದಾದ್ಯಂತ ಸಂಚರಿಸಿ ರೈತರ ಜಮೀನು, ತೋಟಗಳಿಗೆ ಭೇಟಿ ನೀಡಿ ಮಣ್ಣಿನ ಫಲವತ್ತತೆ, ಬೆಳೆಗಳ ಇಳುವರಿ ಹೆಚ್ಚಿಸುವ ಸಾವಯವ ಕೃಷಿಯ ಬಗ್ಗೆ ಪಾಠ ಮಾಡಿದೆ. ನಾಡಿನಾದ್ಯಂತ ಸಾವಯವ ಕೃಷಿಯ ಮಹತ್ವವನ್ನು ರೈತರಿಗೆ ತಿಳಿಸುತ್ತಾ, ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನು ಸಾವಯವ ಕೃಷಿಗೆ ಬದಲಾಯಿಸಿದ ಮೈಕ್ರೋಬಿ ಸಂಸ್ಥೆಯ ಉತ್ಪನ್ನವಾದ ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಯಶೋಗಾಥೆ ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿ ಪ್ರತಿಧ್ವನಿಸಿದೆ.
|
ಕೃಷಿ ಭೂಮಿಯಿಲ್ಲದಿದ್ದರು ಕೃಷಿಮಾಡುವ ವಿಧಾನದ ಬಗ್ಗೆ ನಿಮಗೆಷ್ಟು ಗೊತ್ತು?
ತಂತ್ರಜ್ಞಾನ, ವಿಜ್ಞಾನ, ಶಿಕ್ಷಣ ಸೇರಿದಂತೆ ಎಲ್ಲದರಲ್ಲೂ ನಾವು ಮುಂದೆ ಸಾಗುತ್ತಿರುವುದು ಹೆಮ್ಮೆಯ ವಿಚಾರವೇ. ಅದರಂತೆ ಕೃಷಿ ಕ್ಷೇತ್ರದಲ್ಲಿಯೂ ಒಂದಲ್ಲಾ ಒಂದು ಬೆಳವಣಿಗೆ, ಪ್ರಯೋಗ ನಿತ್ಯವೂ ಸಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗಿರುವ ಹೈಡ್ರೋಪೋನಿಕ್ಸ್ ಕೃಷಿ ಎಲ್ಲರ ಗಮನ ಸೆಳೆಯುತ್ತಿದೆ. ಕೃಷಿಗೆ ಮಣ್ಣೇ ಜೀವಾಳ. ಆದರೆ ಈ ಹೊಸ ಮಾದರಿಯ ಕೃಷಿಗೆ ಮಣ್ಣು ಬೇಡವೇ ಬೇಡ. ಮಣ್ಣಿಲ್ಲದೆ ಕೃಷಿ ಮಾಡಿ ಅಧಿಕ ಆದಾಯ ಗಳಿಸಬಹುದು. ಹೈಡ್ರೋಪೋನಿಕ್ಸ್ ತಂತ್ರಜ್ಞಾನವೆಂದು ಕರೆಯಲ್ಪಡುವ ಈ ವಿಧಾನವನ್ನು 1940ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ವ್ಯವಸ್ಥೆಯಲ್ಲಿ ಬೆಳೆಯುವ ಬೆಳವಣಿಗೆಗೆ ಬೇಕಾಗುವ ಪೋಷಕಾಂಶ ದ್ರಾವಣವನ್ನು ಅಭಿವೃದ್ಧಿಪಡಿಸಿದರು. ನಂತರ 1960 ಮತ್ತು 70ರ ದಶಕದಲ್ಲಿ ಕೆಲವೊಂದು ದೇಶಗಳಲ್ಲಿ ಹೈಡ್ರೋಪೋನಿಕ್ಸ್ ಫಾರ್ಮ್ ಗಳು ತಲೆ ಎತ್ತಿದವು.
|
40 ವರ್ಷದಿಂದ ಕಂಡಿರದ ಅರಿಶಿನ ಬೆಳೆ ಇದು..!
ಅರಿಶಿನವಿಲ್ಲದೆ ಅಡುಗೆಯೂ ಇಲ್ಲ, ಧಾರ್ಮಿಕ ಆಚರಣೆಯೂ ಇಲ್ಲ. ಅಷ್ಟೇ ಅಲ್ಲ ಆಯುರ್ವೇದದಲ್ಲೂ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹೀಗಾಗಿ ಅರಿಶಿನಕ್ಕೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆಯಿರುವುದರಿಂದ ರೈತರು ಅರಿಶಿನ ಬೆಳೆಯೋಕೆ ಉತ್ಸುಕರಾಗಿರುತ್ತಾರೆ.
|
ಆಲೂಗಡ್ಡೆ ಕೃಷಿ ಮಾಡುವ ಮುನ್ನ ತಿಳಿಯಬೇಕಾದ ವಿಷಯಗಳು
ತರಕಾರಿ ಬೆಳೆಗಳ ರಾಜ ಎಂದು ಕರೆಯುವ ಆಲೂಗಡ್ಡೆ ಉತ್ತಮ ಪೌಷ್ಠಿಕಾಂಶಗಳ ಆಗರ. ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಲೂಗಡ್ಡೆ ತಿನ್ನುವುದು ಒಳ್ಳೆಯದು ಎನ್ನುತ್ತಾರೆ. ಸಾಕಷ್ಟು ತಿಂಡಿಗಳಲ್ಲಿ ಆಲೂಗಡ್ಡೆಯನ್ನು ಬಳಕೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೆ ಸದಾ ಬೇಡಿಕೆ ಇದ್ದೇ ಇರುತ್ತದೆ ಹಾಗಾಗಿ ರೈತರು ಆಲೂಗಡ್ಡೆಯನ್ನ ಬೆಳೆದರೆ ಉತ್ತಮ ಆದಾಯ ಪಡೆಯಬಹುದು.
|
ಆಲೂಗಡ್ಡೆ ಕೃಷಿ ಮಾಡುವ ಮುನ್ನ ತಿಳಿಯಬೇಕಾದ ವಿಷಯಗಳು
ತರಕಾರಿ ಬೆಳೆಗಳ ರಾಜ ಎಂದು ಕರೆಯುವ ಆಲೂಗಡ್ಡೆ ಉತ್ತಮ ಪೌಷ್ಠಿಕಾಂಶಗಳ ಆಗರ. ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಲೂಗಡ್ಡೆ ತಿನ್ನುವುದು ಒಳ್ಳೆಯದು ಎನ್ನುತ್ತಾರೆ. ಸಾಕಷ್ಟು ತಿಂಡಿಗಳಲ್ಲಿ ಆಲೂಗಡ್ಡೆಯನ್ನು ಬಳಕೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೆ ಸದಾ ಬೇಡಿಕೆ ಇದ್ದೇ ಇರುತ್ತದೆ ಹಾಗಾಗಿ ರೈತರು ಆಲೂಗಡ್ಡೆಯನ್ನ ಬೆಳೆದರೆ ಉತ್ತಮ ಆದಾಯ ಪಡೆಯಬಹುದು.
|
ಕಲ್ಲಂಗಡಿ ಕೃಷಿ ಮಾಡುವವರಿಗೆ ಕಿವಿಮಾತು…!
ರಾಜ್ಯದ ಪ್ರಮುಖ ಬೇಸಿಗೆ ಬೆಳೆಯಾಗಿರುವ ಕಲ್ಲಂಗಡಿ ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿರುತ್ತದೆ. ಇದನ್ನು ಬಚ್ಚಲಗಾಯಿ, ವಾಟರ್ ಮೆಲನ್ ಎಂಬ ಹೆಸರುಗಳಿಂದ ಕರೆಯುತ್ತೇವೆ. ಕಲ್ಲಂಗಡಿ ಬೇಸಿಗೆ ಕಾಲದ ಮುಖ್ಯವಾದ ಬೆಳೆ, ಕಾಯಿ ಹಣ್ಣಾಗುವಾಗ ಒಣಹವೆ ಇದ್ದರೆ ಸಕ್ಕರೆ ಅಂಶ ಹೆಚ್ಚಾಗುತ್ತದೆ. ರಾಜ್ಯದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಈ ಬೆಳೆಯನ್ನು ಬೆಳೆಯಬಹುದು. ಹಣ್ಣಿನಲ್ಲಿ ಪ್ರತಿಶತ 78ರಷ್ಟು ಭಾಗವು ಸೇವನೆಗೆ ಯೋಗ್ಯವಾಗಿದ್ದು ಪ್ರೋಟಿನ್, ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ, ಕರೋಟಿನ್, ಥಯಾಮಿನ್, ರೈಬೋಪ್ಲೇವಿನ್, ನಯಾಸಿನ್ ಹಾಗೂ ವಿಟಾಮಿನ್ ‘ಸಿ’ ಅಂಶವನ್ನು ಸಹ ಹೊಂದಿರುತ್ತದೆ.
|
ಉತ್ಕೃಷ್ಟ ಇಳುವರಿಗೆ ಸುಲಭ ತಂತ್ರ ಇಲ್ಲಿದೆ..!
ಮಣ್ಣು ಇಲ್ಲದೇ ಜೀವಿಗಳು ಇಲ್ಲ. ಹಾಗಾಗಿಯೇ ಮಣ್ಣು ಸಕಲ ಸಂಪತ್ತಿನ ಆಗರ ಎನ್ನುವುದು. ಮಣ್ಣು ಫಲವತ್ತಾಗಿರದಿದ್ದರೆ ಯಾವುದೇ ಬೆಳೆಯಾಗಲಿ, ಯಾವುದೇ ಆಹಾರವಾಗಲಿ ಪೌಷ್ಠಿಕವಾಗಿರುವುದಿಲ್ಲ. ಮಣ್ಣಿನ ಫಲವತ್ತತೆ ಹಾಳಾಗಿದ್ದರ ಫಲವಾಗಿಯೇ ಇಂದು ಹಲವು ರೋಗ ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯಿಂದ ಮಣ್ಣು ಮತ್ತು ಆಹಾರ ಸತ್ವ ಕಳೆದುಕೊಂಡಿದೆ.
|
ಅತಿಯಾದ್ರೆ ಅಮೃತವೇ ವಿಷ. ಇನ್ನು ನೀರು ಏನಾಗುತ್ತೆ..?
ನೀರು ಸಕಲ ಜೀವರಾಶಿಗಳಿಗೆ ಅತ್ಯಗತ್ಯ. ಜತೆಗೆ ಕೃಷಿಯಲ್ಲಿಯೂ ಕೂಡ ನೀರಿನ ಪಾತ್ರ ಅತಿ ಮುಖ್ಯ. ನೀರು ಇಲ್ಲವೆಂದ್ರೆ ಬೆಳೆಯೇ ಇಲ್ಲ, ಹಾಗಂತ ನೀರನ್ನು ಹೆಚ್ಚಾಗಿ ಬಳಕೆ ಮಾಡುವಂತಿಲ್ಲ. ಅತಿಯಾದರೂ ಸಮಸ್ಯೆ, ಕಡಿಮೆಯಾದರೂ ಸಮಸ್ಯೆ. ಹಾಗಾಗಿ ಕೃಷಿ ಭೂಮಿಗೆ ನೀರನ್ನು ಹೇಗೆ ಬಳಸಬೇಕೆಂಬುದನ್ನು ರೈತರು ತಿಳಿಯಬೇಕು.
|
ಸಾವಯವ ಕೃಷಿ ಮೊದಲ ಯತ್ನದಲ್ಲೇ 100 ಟನ್ ಕಬ್ಬು ಇಳುವರಿ
ಸಾವಯವ ಕೃಷಿ ಮತ್ತು ವೈಜ್ಞಾನಿಕ ಕೃಷಿಯತ್ತ ರೈತರು ಚಿತ್ತ ಹರಿಸಿದರೆ ತಮ್ಮ ಭೂಮಿಯ ಆಯಸ್ಸನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ತಮ್ಮ ಕೃಷಿ ಭೂಮಿ ಮುಂದಿನ ಪೀಳಿಗೆಗೂ ಉಳಿಯಬೇಕೆಂದರೆ ರಾಸಾಯನಿಕಕ್ಕೆ ಮುಕ್ತಾಯ ಹೇಳುವುದು ಅನಿವಾರ್ಯವಾಗಿದೆ. ಅಷ್ಟೇ ಅಲ್ಲ ಮನುಷ್ಯನ ಆಯಸ್ಸು ಸಹಿತ ಕೃಷಿ ಪದ್ಧತಿಯ ಮೇಲೆಯೇ ಅವಲಂಬಿತವಾಗಿದೆ ಎಂದರೆ ತಪ್ಪಾಗದು. ಕಾರಣ ಮನುಷ್ಯ ಸೇವಿಸುವ ಆಹಾರ ಕೂಡ ವಿಷಯುಕ್ತವಾಗಿದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತಿಲ್ಲ. ಹೀಗಾಗಿ ಮನುಷ್ಯನ ಆರೋಗ್ಯ ಕೂಡ ದಿನೇ ದಿನೇ ಕ್ಷೀಣಿಸುತ್ತಿರುವುದು ವಿಪರ್ಯಾಸವೇ ಸರಿ.
|
ಇದು ZERO CHEMICAL ಸಾವಯವ ಕಬ್ಬು-160 ಟನ್ ಇಳುವರಿ..!
ಕಬ್ಬು ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಮಂಡ್ಯ, ಮೈಸೂರು, ಚಾಮರಾಜನಗರ, ಉತ್ತರ ಕರ್ನಾಟಕದ ಹಲವು ಭಾಗಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಎಷ್ಟೋ ರೈತರಿಗೆ ಕಬ್ಬು ಬೆಳೆಗೆ ನೀರು ನಿರ್ವಹಣೆ ಮಾಡುವುದೆ ದೊಡ್ಡ ತಲೆನೋವು. ಅದರ ಜತೆಗೆ ಗೊಣ್ಣೆ ಹುಳುವಿನ ತೊಂದರೆ, ಇನ್ನು ಹಲವಾರು ಸಮಸ್ಯೆಗಳನ್ನು ಅನುಭವಿಸಿ ಇಳುವರಿಯಲ್ಲಿ ಎಕರೆಗೆ ಕೇವಲ 30 ರಿಂದ 40 ಟನ್ ಪಡೆಯೋದು ಕಷ್ಟವಾಗಿರುತ್ತೆ. ಹೀಗಾಗಿ ನಿರೀಕ್ಷಿತ ಲಾಭ ಗಗನ ಕುಸುಮವಾಗಿದೆ.
|
ಸಾವಯವ ಕೃಷಿಯಲ್ಲಿ ಬದನೆ ಬೆಳೆ: ಏನು ಲಾಭ?
ಮೈಸೂರು ಜಿಲ್ಲೆ HD ಕೋಟೆ ತಾಲ್ಲೂಕಿನ ಕಂಚಮಳ್ಳಿ ಗ್ರಾಮದ ರೈತ ಮಧು 5 ಎಕರೆ ಜಮೀನಿನ ಮಾಲೀಕರು. 1 ಎಕರೆಯಲ್ಲಿ ಬದನೆಕಾಯಿ ಬೆಳೆದಿದ್ದಾರೆ. ವಿಶೇಷವೆಂದರೆ ಇವರು ಸಾವಯವ ಕೃಷಿ ಪದ್ಧತಿಯಲ್ಲಿ ಬದನೆ ಬೆಳೆದಿದ್ದಾರೆ. ಯಾವುದೇ ರಾಸಾಯನಿಕಗಳನ್ನು ಬಳಸದೇ ನಾಟಿ ಹಸುವಿನ ಗಂಜಲ ಮತ್ತು ಬೇವಿನೆಣ್ಣೆ ಬಳಸಿ ಕೀಟಗಳ ನಿರ್ವಹಣೆ ಮಾಡುತ್ತಿದ್ದಾರೆ.
|
ಇವರ ಕಡಲೆ ಬೆಳೆ ಕಂಡು 200 ಎಕರೆಯಲ್ಲಿ ರೈತರು ಮಾಡಿದ್ದೇನು ಗೊತ್ತಾ..?
ಕಡಲೆ ದ್ವಿದಳ ಧಾನ್ಯಗಳ ಪೈಕಿ ಪ್ರಮುಖ ಬೆಳೆಯಾಗಿದ್ದು, ಉತ್ತಮ ತೇವಾಂಶದ ಪರಿಸ್ಥಿತಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕಡಲೆ ಬೆಳೆಯಲು ಸೂಕ್ತವಾದ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ನಿಂದ 30 ಡಿಗ್ರಿ ಸೆಲ್ಸಿಯಸ್. ಕಡಲೆ ಬೆಳೆಯನ್ನು ವಿವಿಧ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಆದರೆ ಮರಳು ಮಿಶ್ರಿತ ಕಲಸು ಮಣ್ಣು, ಜೇಡಿ ಮಣ್ಣು ಈ ಬೆಳೆಗೆ ಸೂಕ್ತವಾಗಿರುತ್ತೆ. ಮಣ್ಣಿನಲ್ಲಿ ರಸಸಾರ 5 ರಿಂದ 7ರಷ್ಟು ಇದ್ದರೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ.
|
ಒಂದು ಮರದಿಂದ 400-500 ಎಳನೀರು: ಹೀಗೆ ಮಾಡಿದರೆ ನಿಮಗೂ ಸಾಧ್ಯ
ಸಾವಯವ ಕೃಷಿಯನ್ನು ಅನುಸರಿಸಿದರೆ ಕೃಷಿಕರಿಗೆ ಹಲವು ಲಾಭಗಳಿವೆ. ಮಣ್ಣಿನ ಫಲವತ್ತತೆ ಹೆಚ್ಚುತ್ತೆ, ಅಧಿಕ ಇಳುವರಿ ಸಿಗುತ್ತೆ, ಹೀಗೆ ಇದರ ಪ್ರಯೋಜನಗಳು ಹಲವು. ಎಳನೀರು ವ್ಯಾಪಾರಿಯೂ ಆದ ಈ ಸಾವಯವ ಕೃಷಿಕರು, ತಮ್ಮ ತೆಂಗಿನ ತೋಟದಲ್ಲಿ ಬಹಳ ವ್ಯತ್ಯಾಸ ಕಂಡಿದ್ದಾರೆ. ರಾಸಾಯನಿಕ ಬಳಸುತ್ತಿದ್ದಾಗ ಇದ್ದ ಸಮಸ್ಯೆಗಳು ಕಾಣೆಯಾಗಿವೆ. ವರ್ಷಕ್ಕೆ ಒಂದು ಮರದಲ್ಲಿ 480 ರಿಂದ 500 ತೆಂಗಿನ ಕಾಯಿಯನ್ನು ಪಡೆಯುತ್ತಿದ್ದಾರೆ.
|
ತೆಂಗು, ಅಡಿಕೆ ಒಟ್ಟಿಗೆ ಬೆಳೆಯಬಹುದಾ?
ಅಡಿಕೆ ಮತ್ತು ತೆಂಗು ಉತ್ತಮ ಆದಾಯ ಕೊಡುವ ಎರಡು ತೋಟಗಾರಿಕೆ ಬೆಳೆಗಳು. ಹಲವು ಕಡೆ ಇವನ್ನು ಒಟ್ಟಿಗೆ ಬೆಳೆಯುವುದನ್ನು ನೋಡಿದ್ದೇವೆ. ಇವೆರಡರಲ್ಲಿ ಒಂದನ್ನು ಮುಖ್ಯ ಬೆಳೆಯಾಗಿ, ಮತ್ತೊಂದನ್ನು ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತಾರೆ. ಹೀಗೆ ರೈತರು ಅಡಿಕೆ ಮತ್ತು ತೆಂಗು ಎರಡನ್ನೂ ಒಟ್ಟಿಗೆ ಬೆಳೆಯುವ ವಾಡಿಕೆ ಇದೆ. ಆದರೆ ಹೀಗೆ ಬೆಳೆಯಬಹುದಾ? ಇದರಿಂದ ಆಗುವ ಅಡ್ಡ ಪರಿಣಾಮಗಳೇನು? ತೆಂಗು, ಅಡಿಕೆ ಜೊತೆ ಯಾವ ಬೆಳೆಗಳನ್ನು ಬೆಳೆದರೆ ಉತ್ತಮ?
|
ಕಲ್ಲುಗಾಡಿನಂತಿರುವ ಪ್ರದೇಶದಲ್ಲಿ ಯಶಸ್ವಿ ಅಡಿಕೆ ತೋಟ
ಸಾಮಾನ್ಯ ಜಮೀನಿನಲ್ಲೇ ಕೃಷಿ ಮಾಡಲು ಒದ್ದಾಡುವ ಈಗಿನ ರೈತರ ಮಧ್ಯೆ ಇಲ್ಲೊಬ್ಬ ರೈತರು ಕಲ್ಲುಗಾಡಿನಂತಿರುವ ಬೆಟ್ಟದ ಪ್ರದೇಶದಲ್ಲಿ ಅಡಿಕೆ, ಕಾಫಿ ಬೆಳೆದು ಕೃಷಿ ಮಾಡುತ್ತಿದ್ದಾರೆ. ರೋಗಗಳಿಂದ ಕಾಡಿದರೂ ಸಾವಯವ ಕೃಷಿ ಪದ್ಧತಿಯಿಂದ ತೋಟ ನಿರ್ವಹಣೆ ಮಾಡಿ ಯಶಸ್ವಿಯಾಗಿದ್ದಾರೆ. ಇಂತಹ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತರ ಅನುಭವ ಏನು? ಇವರು ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ ಬನ್ನಿ ನೋಡೋಣ.
|
ಕೆ.ಜಿಗೆ 750-850 ರೂ. ಬೆಲೆ ಇರುವ ಲವಂಗ ಬೆಳೆಯುವುದು ಹೇಗೆ?
ಲವಂಗವು ವಿಶ್ವದಾದ್ಯಂತ ಒಂದು ಪ್ರಖ್ಯಾತ ಮಸಾಲೆ ಪದಾರ್ಥವಾಗಿದ್ದು, ಶತಶತಮಾನಗಳಿಂದಲೂ ಅಡುಗೆ ಮತ್ತು ಸಾಂಪ್ರದಾಯಿಕ ಔಷಧದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಬೆಳೆ ಇಂಡೋನೇಷ್ಯಾದ ಮೊಲುಕ್ಕಾಸ್ ಅಥವಾ ಸ್ಪೈಸ್ ದ್ವೀಪಗಳಿಗೆ ಸ್ಥಳೀಯವಾಗಿದೆ. ಆದರೆ ಈಗ ಭಾರತ, ಶ್ರೀಲಂಕಾ, ಮಡಗಾಸ್ಕರ್ ಮತ್ತು ಜಾಂಜಿಬಾರ್ ಸೇರಿದಂತೆ ಉಷ್ಣವಲಯದ ಹಲವಾರು ದೇಶಗಳಲ್ಲಿ ಬೆಳೆಯಲಾಗುತ್ತದೆ. ಅಧಿಕ ಪರಿಮಳ ಮತ್ತು ರುಚಿಯಲ್ಲಿ ಗಾಢತೆಯನ್ನು ಹೊಂದಿರುವ ಲವಂಗವನ್ನು ಅನೇಕ ಆಹಾರಗಳಲ್ಲಿ, ವಿಶೇಷವಾಗಿ ಮಾಂಸ ಮತ್ತು ಬೇಕರಿ ಉತ್ಪನ್ನಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತದೆ. ಲವಂಗ ಬೆಳೆಯುವುದರಿಂದ ರೈತರು ಉತ್ತಮ ಆದಾಯ ಗಳಿಸುವ ಸಾಧ್ಯತೆ ಇದೆ. ಹಾಗಾದರೆ ಇದನ್ನು ಬೆಳೆಯುವ ರೀತಿ ಹೇಗೆ? ವಾತಾವರಣ ಹೇಗಿರಬೇಕು?
|
ಕೃಷಿ ಭೂಮಿಯ ವೈಜ್ಞಾನಿಕ, ನೈಸರ್ಗಿಕ ಸಿದ್ಧತೆ ಹೇಗೆ?
ಯಾವುದೇ ಬೆಳೆ ಬೆಳೆಯಲು ಭೂಮಿ ಸಿದ್ಧತೆ ತುಂಬಾ ಮುಖ್ಯ. ಕೃಷಿಯಲ್ಲಿ ಬೆಳೆಗಳ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಮತ್ತು ಇಳುವರಿಯನ್ನು ಹೆಚ್ಚಿಸಲು ಭೂಮಿಯನ್ನು ಸಿದ್ಧಪಡಿಸುವುದು ಒಂದು ಅತ್ಯಗತ್ಯ ಹಂತ. ಆದರೆ ಕೇವಲ ಉಳುಮೆ ಮಾಡಿ ಭೂಮಿ ಸಿದ್ಧತೆ ಎನ್ನುವುದು ತಪ್ಪು. ಭೂಮಿ ಸಿದ್ಧತೆ ಅಂದರೇನು? ಅದರ ಮಹತ್ವ ಏನು? ಭೂಮಿ ಸಿದ್ಧತೆ ಮಾಡುವ ರೀತಿ ಹೇಗೆ? ಭೂಮಿ ಸಿದ್ಧತೆ ಮಾಡುವುದರ ಬಗ್ಗೆ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ ಆರ್ ಹುಲ್ಲುನಾಚೇಗೌಡರು ಏನು ಹೇಳುತ್ತಾರೆ? ನೋಡೋಣ ಬನ್ನಿ.
|
ರೈತನ ಶತ್ರು ಗೊಣ್ಣೆ ಹುಳು(ಬೇರು ಹುಳು) ನಿಯಂತ್ರಣ ಹೀಗೆ ಮಾಡಿ?
ಗೊಣ್ಣೆ ಹುಳು/ಬೇರು ಹುಳು ಮಣ್ಣಿನಲ್ಲಿ ಜೀವಿಸುವ ಒಂದು ಕೀಟ. ಇದೊಂದು ಲಾರ್ವಾ ಆಗಿದೆ. ಬೆಳೆಗಳ ಬೇರನ್ನು ತಿಂದು ಅವುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇದು ಎಲ್ಲಾ ಬೆಳೆಗಳನ್ನು ಆಕ್ರಮಿಸುವುದರಿಂದ ರೈತರಿಗೆ ಇನ್ನಿಲ್ಲದಂತೆ ಬಾಧಿಸಿ, ನಷ್ಟ ತರುವ ಕೀಟವಾಗಿದೆ. ಹಾಗಾದರೆ ಗೊಣ್ಣೆ ಹುಳುವನ್ನು ನಿಯಂತ್ರಣ ಮಾಡುವುದು ಹೇಗೆ? ರಾಸಾಯನಿಕ ಬಳಸದೇ ಸಾವಯವ ಪದ್ಧತಿಯಲ್ಲಿ ನಿಯಂತ್ರಣ ಹೇಗೆ?
|
ರೈತರು ಉತ್ತಮ ಆದಾಯಗಳಿಸುವ ಮಾರ್ಗ ಈ ಫಾರ್ಮುಲಾ
ಇಂದು ಕೃಷಿಯೆಂದರೆ ಲಾಸು, ರೈತ ಎಂದರೆ ಬಡವ ಅನ್ನುವಂತಾಗಿದೆ. ಇದಕ್ಕೆ ಕಾರಣ ಖರ್ಚು ಅಧಿಕ, ಆದಾಯ ಕಡಿಮೆಯಾಗಿರುವುದು. ಎಷ್ಟೇ ದುಡಿದರೂ ನಷ್ಟದಲ್ಲೇ ಬದುಕುವಂತಾಗಿದೆ. ಹಾಗಾದರೆ ರೈತರು ಆದಾಯ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?. ಸಾಲ, ನಷ್ಟದ ಸುಳಿಯಿಂದ ಹೊರಬರುವುದು ಹೇಗೆ? ಕೃಷಿ ಭೂಮಿಯನ್ನು ಕೃಷಿಕರು ಹೇಗೆ ಬಳಸಿಕೊಳ್ಳಬೇಕು? ಇದಕ್ಕೆ ಒಂದು ಸೂತ್ರ ಕೂಡ ಇದೆ. 33+33+33+1 ಕೃಷಿ ಸೂತ್ರ.
|
ಸಾವಯವದಲ್ಲಿ ಮೆಣಸಿನಕಾಯಿ ಕೃಷಿ: ಎಷ್ಟು ಲಾಭ..?
ಇಂದು ನಮ್ಮ ದೇಶದ ಪ್ರಮುಖ ಮಸಾಲೆ ಬೆಳೆಯಾಗಿರುವ ಮೆಣಸಿನಕಾಯಿ ಪೋರ್ಚುಗೀಸ್ ವ್ಯಾಪಾರಿಗಳ ಮೂಲಕ 1498ರಲ್ಲಿ ಭಾರತಕ್ಕೆ ಪರಿಚಯವಾಯಿತು. ಇದರ ಮಸಾಲೆಯುಕ್ತ ರುಚಿ, ಆಕರ್ಷಕವಾದ ಬಣ್ಣ ಮತ್ತು ಸುವಾಸನೆಯಿಂದಾಗಿ ಪ್ರತಿ ಭಾರತೀಯ ಪಾಕಪದ್ಧತಿಯಲ್ಲಿ ಮೆಣಸಿನಕಾಯಿ ಅನಿವಾರ್ಯ ಸ್ಥಾನ ಪಡೆದಿದೆ. ಮೆಣಸಿನಕಾಯಿಯು ಭಾರತದಲ್ಲಿ ಬೆಳೆಯುವ ಅತ್ಯಮೂಲ್ಯ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿ ಬೆಳೆಯುವ ಅತ್ಯಂತ ಸಾಮಾನ್ಯವಾದ ಮಸಾಲೆಯಾಗಿದೆ. ಇಂದು ಮೆಣಸಿನಕಾಯಿ ಭಾರತದ ಸಾರ್ವತ್ರಿಕ ಮಸಾಲೆಯಾಗಿದೆ. ಇದನ್ನು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಪ್ರಪಂಚದ ಒಟ್ಟು ಉತ್ಪಾದನೆಗೆ ಭಾರತವು ಸುಮಾರು 36% ಕೊಡುಗೆ ನೀಡುತ್ತದೆ.
|
ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ಪುತ್ರ S.S.ಗಣೇಶ್ ಅವರ ತೋಟದಲ್ಲಿ ಡಾ.ಸಾಯಿಲ್ ಕಮಾಲ್
ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರು ರಾಜ್ಯದ ಜನರಿಗೆ ಚಿರಪರಿಚಿತ. ಇವರ ಮಗ ಖ್ಯಾತ ಉದ್ಯಮಿ S.S ಗಣೇಶ್ ಅವರು ಉದ್ಯಮ ಜಗತ್ತಿನಲ್ಲಿ ಸಾಧನೆ ಮಾಡಿದವರು. ಇವರು ತಮ್ಮ 120 ಎಕರೆ ತೋಟದಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡುತ್ತಿದ್ದಾರೆ.
|
ಉತ್ತಮ ಆದಾಯ ಕೊಡುವ ಸಾವಯವ ಎಲೆಕೋಸು
ಎಲೆಕೋಸು ಒಂದು ಬಹುಮುಖ್ಯ ಬೆಳೆಯಾಗಿದ್ದು, ಅನೇಕ ಭಾಗಗಳಲ್ಲಿ ಪ್ರಧಾನವಾದ ಬೆಳೆಯಾಗಿದೆ. ಎಲೆಕೋಸು ಒಂದು ತಂಪಾದ ಋತುವಿನ ಬೆಳೆಯಾಗಿದ್ದು ಬೆಳೆಯಲು ಸುಲಭ ಮತ್ತು ನೆಟ್ಟ 90 ರಿಂದ 120 ದಿನಗಳಲ್ಲಿ ಕೊಯ್ಲು ಮಾಡಬಹುದು. ಎಲೆಕೋಸು ಯಾವಾಗಲು ಬೇಡಿಕೆಯಲ್ಲಿರುವ ಒಂದು ಬೆಳೆಯಾಗಿದೆ. ಹಾಗಾಗಿ ಮಾರುಕಟ್ಟೆ ಇರುವ ಕಡೆ ಬೆಳೆದರೆ ಉತ್ತಮ ಲಾಭ ಗಳಿಸಬಹದು. ಇದನ್ನು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ರೈತ ತಮ್ಮ ಜಮೀನಿನಲ್ಲಿ ಹಲವು ಲಾಭಗಳನ್ನು ಪಡೆದಿದ್ದಾರೆ.
|
ಕ್ಯಾಪ್ಸಿಕಂ ಬೆಳೆಗಾರನ ಸಂಕಷ್ಟ ಮಾಯ
ಕ್ಯಾಪ್ಸಿಕಂ ಅಥವಾ ದಪ್ಪ ಮೆಣಸಿನಕಾಯಿ ಒಂದು ಜನಪ್ರಿಯ ಬೆಳೆಯಾಗಿದೆ. ವಿವಿಧ ಬಣ್ಣಗಳು ಮತ್ತು ಗಾತ್ರಗಳಲ್ಲಿ ಬರುವ ಈ ದೊಡ್ಡ ಮೆಣಸಿನಕಾಯಿಯನ್ನು ಪ್ರಪಂಚದಾದ್ಯಂತದ ಅನೇಕ ಅಡುಗೆಗಳಲ್ಲಿ ಬಳಸಲಾಗುತ್ತದೆ. ಇದನ್ನು ಸಲಾಡ್ಗಳು ಮತ್ತು ಸ್ಯಾಂಡ್ವಿಚ್ಗಳಿಂದ ಹಿಡಿದು ಸೂಪ್ಗಳು ಮತ್ತು ಬಜ್ಜಿ, ಹೀಗೆ ವಿವಿಧ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದು ವಿಟಮಿನ್ ಸಿ ಮತ್ತು ಇತರ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಇಂತಹ ಬೆಳೆಯನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಇಲ್ಲೊಬ್ಬ ರೈತರು ಅದ್ಭುತವಾಗಿ ಬೆಳೆದಿದ್ದಾರೆ.
|
ಗುಂಪುಬಾಳೆ ಎಂದರೇನು? ಬೆಳೆಯುವುದು ಹೇಗೆ?
ಬಾಳೆ ಒಂದು ಪ್ರಮುಖ ವಾಣಿಜ್ಯ ಬೆಳೆ. ಸರಿಯಾದ ನಿರ್ವಹಣೆ ಮಾಡಿದರೆ ಒಳ್ಳೆ ಲಾಭ ಮಾಡಬಹುದು. ಆದರೆ ರೈತರು ಇದರಲ್ಲಿ ಎಡವುತ್ತಿದ್ದಾರೆ. ಎಲ್ಲಾರು ಮಾಡುವಂತೆ ಕೃಷಿ ಮಾಡುತ್ತಾ ಇತರ ಪದ್ಧತಿಗಳ ಕಡೆ ಗಮನ ಕೊಡದೇ ನಷ್ಟವಾದರೂ ಹಳೇ ಪದ್ಧತಿ ಮುಂದುವರೆಸುತ್ತಿದ್ದಾರೆ. ಬಾಳೆ ಕೃಷಿಯಿಂದ ಉತ್ತಮ ಇಳುವರಿ ಮತ್ತು ಲಾಭಗಳಿಸಲು ಇರುವ ಒಂದು ಮಾರ್ಗ ಗುಂಪು ಬಾಳೆ.
|
ನಿಮ್ಮ ಜಮೀನಿನಲ್ಲಿ ಗ್ಲಿರಿಸಿಡಿಯಾ(ಗೊಬ್ಬರದ ಗಿಡ) ಇದ್ದರೆ..?
ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಬಳಕೆ ಜತೆ ನೈಸರ್ಗಿಕವಾಗಿ ಬೆಳೆಯುವ ಗಿಡಗಳನ್ನು ಬಳಸಿಕೊಂಡು ಪೋಷಕಾಂಶ ಪೂರೈಕೆ ಮಾಡಲಾಗುತ್ತದೆ. ಸಾವಯವ ಕೃಷಿಯಲ್ಲಿ ಖರ್ಚು ಕಡಿಮೆಯಾಗುತ್ತದೆ, ಇಳುವರಿ ಹೆಚ್ಚಾಗುತ್ತದೆ ಎಂದು ಎಷ್ಟೋ ಸಲ ಕೇಳಿದ್ದೇವೆ. ಅದರಲ್ಲಿ ಮುಖ್ಯವಾದ ಒಂದು ಸಸ್ಯ ಗ್ಲಿರಿಸಿಡಿಯಾ ಅಥವಾ ಗೊಬ್ಬರದ ಗಿಡ. ಇದರಿಂದ ಉಚಿತ ಪೋಷಕಾಂಶ ಹೇಗೆ ಸಿಗುತ್ತದೆ? ಉತ್ತಮ ಇಳುವರಿ ಪಡೆಯಲು ಗೊಬ್ಬರದ ಗಿಡದ ಪ್ರಯೋಜನ ಏನು? ಇವೆಲ್ಲವನ್ನು ಈ ಬ್ಲಾಗ್ ನಲ್ಲಿ ನೋಡೋಣ.
|
ಸಾವಯವ ಅರಿಶಿನ ಮತ್ತು ರಾಸಾಯನಿಕ ಅರಿಶಿನ-ದಂಗು ಬಡಿಸುತ್ತೆ ವ್ಯತ್ಯಾಸ..!
ಸಾಮಾನ್ಯವಾಗಿ ಸಾವಯವ ಕೃಷಿ ಅಳವಡಿಸಿಕೊಂಡರೆ ಉತ್ತಮ ಇಳುವರಿ ಪಡೆಯಲು 2-3 ವರ್ಷ ಬೇಕಾಗುತ್ತದೆ ಎಂಬುದು ಬಹುತೇಕ ಕೃಷಿಕರ ತಪ್ಪು ಕಲ್ಪನೆ. ಇಲ್ಲೊಬ್ಬ ರೈತರು ಮೊದಲನೇ ವರ್ಷದಲ್ಲೇ ಹೆಚ್ಚು ಇಳುವರಿ ಪಡೆದು, ಸತ್ಯ ಏನೆಂಬುದನ್ನು ಸಾಬೀತು ಪಡಿಸಿದ್ದಾರೆ.
|
ರಾಸಾಯನಿಕ ಕೃಷಿಗೆ ವಿದಾಯ ಹೇಳಿದ ಬಾಳೆ ಬೆಳೆಗಾರ ಮಾಡಿದ್ದೇನು?
ನೇಂದ್ರ ಬಾಳೆ ಕೇರಳದ ಒಂದು ಬಾಳೆ ತಳಿ. ದೊಡ್ಡ ಬಾಳೆಹಣ್ಣನ್ನು ಬಿಡುವ ಈ ತಳಿ, ಹೆಚ್ಚು ವಾಣಿಜ್ಯ ಬೆಲೆಯನ್ನು ಹೊಂದಿದೆ. ಈ ಬೆಳೆ ಹೆಚ್ಚು ಪೋಷಕಾಂಶಗಳನ್ನು ಕೇಳುವುದರಿಂದ ಮಣ್ಣಿನ ಫಲವತ್ತತೆ ತುಂಬಾ ಮೂಖ್ಯ. ಮೈಸೂರಿನ ರೈತರೊಬ್ಬರು ಯಶಸ್ವಿಯಾಗಿ ನೇಂದ್ರ ಬಾಳೆ ಬೆಳೆಯುತ್ತಿದ್ದಾರೆ. ಸಾವಯವ ಕೃಷಿ ಅಳವಡಿಸಿಕೊಂಡು ಬಾಳೆ ಬೆಳೆಯುತ್ತಿರುವ ಇವರು ನಿರ್ವಹಣೆಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
|
ಸಾವಯವ ಕೃಷಿ ಬಗೆಗಿನ ಅನುಮಾನಗಳಿಗೆ ಇಲ್ಲಿದೆ ಉತ್ತರ
ರಾಸಾಯನಿಕ ಗೊಬ್ಬರಗಳನ್ನು ಬಿಟ್ಟು ಕೃಷಿಯೇ ಇಲ್ಲ ಎನ್ನುವಂತಿರುವ ಇಂದಿನ ಎಷ್ಟೋ ರೈತರಿಗೆ ಸಾವಯವ ಕೃಷಿಯ ಬಗ್ಗೆ ತಿಳಿದೇ ಇಲ್ಲ. ಗೊತ್ತಿದ್ದವರಿಗೆ ಇದರಿಂದ ಇಳುವರಿ ಕಡಿಮೆ ಬರುತ್ತದೆ ಎಂಬ ಅಪನಂಬಿಕೆ. ಇನ್ನು ಕೆಲವರಿಗೆ ಸಾವಯವ ಕೃಷಿಗೆ ಬರಲು ಭಯ, ಭೂಮಿ ಒಗ್ಗಿಕೊಳ್ಳುವುದಕ್ಕೆ ತುಂಬಾ ಸಮಯ ಹಿಡಿಯುತ್ತದೆ ಎಂದು. ಬಳ್ಳಾರಿಯ ಈ ರೈತರು ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಜೋಳ ಬೆಳೆದಿದ್ದಾರೆ. ಈ ಕೃಷಿಕರ ಅನುಭವ ಹಲವಾರು ಕೃಷಿಕರ ಹತ್ತಾರು ಪ್ರಶ್ನೆಗಳಿಗೆ ಉತ್ತರ ನೀಡಲಿದೆ.
|
ಬೆಣ್ಣೆಹಣ್ಣು(Butter fruit) ಬೆಳೆಯುವುದರಿಂದ ರೈತರಿಗೆ ಏನು ಲಾಭ? ಸಂಪೂರ್ಣ ಮಾಹಿತಿ
ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುತ್ತಿರುವ ಕಾರಣ ಕೆಲವು ಹಣ್ಣು-ತರಕಾರಿಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಅದರಲ್ಲಿ ಪ್ರಮುಖವಾದ ಒಂದು ಹಣ್ಣು ಬೆಣ್ಣೆ ಹಣ್ಣು ಅಥವಾ ಬಟರ್ ಫ್ರೂಟ್. ನಮ್ಮ ದೇಶದ ಹಣ್ಣಲ್ಲವಾದರೂ ಇತ್ತೀಚೆಗೆ ಹೆಚ್ಚು ರೈತರು ಬೆಣ್ಣೆಹಣ್ಣು ಕೃಷಿಗೆ ಒಲವು ತೋರಿಸುತ್ತಿದ್ದಾರೆ. ಇದಕ್ಕೆ ಕಾರಣ ಬೇಡಿಕೆ ಮತ್ತು ಅದರಿಂದ ಬರುವ ಆದಾಯ. ನೀವು ಕೂಡ ಇದರ ಉಪಯೋಗ ಪಡೆಯಬಹುದು. ಇದರ ಮಾರುಕಟ್ಟೆ ಮತ್ತು ಇದರಿಂದ ರೈತರಿಗೆ ಆಗುವ ಲಾಭಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.
|
ಪ್ರತಿಯೊಬ್ಬ ರೈತರೂ ಈ ವೀಡಿಯೋ ನೋಡಲೇಬೇಕು..!
ಸಾವಯವ ಕೃಷಿ ಮಾಡಲು ಹಿಂಜರಿಯುವ ರೈತರಿಗೆ ಮಾದರಿ ಈ ಆಧುನಿಕ ರೈತ. ಉದ್ಯೋಗದಲ್ಲಿದ್ದರೂ ಕೃಷಿಯನ್ನೂ ಬಿಡದೆ ಸಾವಯವ ಕೃಷಿ ಮಾಡುತ್ತಿದ್ದಾರೆ. ತಮ್ಮ 2.5 ಎಕರೆ ಜಮೀನಿನಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಮೊದಲು ಅವಶ್ಯಕತೆ ಬಿದ್ದಾಗ ಸ್ವಲ್ಪ ರಾಸಾಯನಿಕ ಗೊಬ್ಬರ ಬಳಸಿದರು. ಈಗ ಸಂಪೂರ್ಣವಾಗಿ ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.
|
|