Contact
Contact Us

Chinna Complex, 1st Floor, BSF & Reva Circle, Kattigenahalli, Bagaluru Main Road, Yelahanka, Bangalore-560063

9 ತಿಂಗಳಲ್ಲಿ 11 ಕೊಳವೆ ಬಾವಿ ಕೊರೆದರೂ ನೀರು ಸಿಗಲಿಲ್ಲ, 5 ಎಕರೆ ಅಡಿಕೆ ತೋಟ ನೆಲಸಮ..!

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ನೀರಿನ ಹಾಹಾಕಾರ ದಿನೇದಿನೇ ಹೆಚ್ಚಾಗ್ತಿದೆ. ಎಷ್ಟೇ ಬೋರ್ ವೆಲ್ ಕೊರೆದರೂ ನೀರು ಸಿಗ್ತಾಯಿಲ್ಲ, ಅಡಿಕೆ ಬೆಳೆಗಳಾರರ ಕಣ್ಣೀರು ತಪ್ಪುತ್ತಿಲ್ಲ. ಉದ್ಯಮಿ ಮತ್ತು ಕೃಷಿಕರೂ ಆಗಿರುವ ಶ್ರೀಧರ್ ಅವರು ತಮ್ಮ ಬಾಯಾರಿದ ಅಡಿಕೆ ಬೆಳೆಗೆ ನೀರು ಉಣಿಸಲು 9 ತಿಂಗಳದಲ್ಲಿ 11 ಬೋರ್ ವೆಲ್ ಕೊರೆಸಿದರು. ಆದ್ರೆ ನೀರು ಮಾತ್ರ ಸಿಗಲೇ ಇಲ್ಲ. ಆಗ ನೀರಿಲ್ಲದೆ ಸೊರಗುತ್ತಿದ್ದ ಅಡಿಕೆ ಮರಗಳನ್ನ ನೋಡಿ ಮನನೊಂದ ಕೃಷಿಕ ಶ್ರೀಧರ್, ತಮ್ಮ ಐದು ಎಕರೆ ಅಡಿಕೆ ತೋಟವನ್ನ ಕತ್ತರಿಸಿ ನೆಲಸಮ ಮಾಡೇ ಬಿಟ್ರು.

ಸಾವಯವ ಕೃಷಿಯಿಂದ ಜೇನುಹುಳಗಳು ಬಂದವು, ಎರೆಹುಳುಗಳೂ ಪ್ರತ್ಯಕ್ಷವಾದವು..!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಕೃಷಿಕ ಜೈ ಕುಮಾರ್ ಅವರು, ಕ್ಯಾಪ್ಸಿಕಮ್ ಬೆಳೆ ಬೆಳೆಯುತ್ತಿದ್ದಾರೆ. ಇವರು ತಮ್ಮ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿದ್ದಾರೆ. ಇದರಿಂದ ಕೃಷಿ ಭೂಮಿಯಲ್ಲಿ ಎರೆಹುಳುಗಳು ಯಥೇಚ್ಛವಾಗಿ ಅಭಿವೃದ್ಧಿಯಾಗಿವೆ.

ಬಾಳೆಯಲ್ಲಿ ಆದಾಯ ಹೆಚ್ಚಿಲು ಈ ಪದ್ಧತಿ ಬೇಕು..!

ಆಷಾ ಕಳೆದು ಶ್ರಾವಣ ಮಾಸ ಬರುತ್ತಿದ್ದಂತೆ ಬಾಳೆ ಹಣ್ಣಿನ ಬೇಡಿಕೆ ಹೆಚ್ಚುತ್ತಾ ಹೋಗುತ್ತೆ. ಸಾಂಪ್ರದಾಯಿಕ ಸ್ಥಾನದಲ್ಲಿ ಮುಂದೆಯಿರುವ ಬಾಳೆಗೆ ಮಾರುಕಟ್ಟೆಯಲ್ಲಿಯೂ ಡಿಮ್ಯಾಂಡ್ ಹೆಚ್ಚು. ಹೀಗಿರುವ ಬಾಳೆ ಬೆಳೆಯಲ್ಲಿ ಹೆಚ್ಚಾಗಿ ಇಳುವರಿ ಪಡೆಯುವ ಮಾರ್ಗಗಳು ಎಷ್ಟೋ ರೈತರಿಗೆ ತಿಳಿದಿಲ್ಲ. ನಾವು ಸಾಮಾನ್ಯವಾಗಿ ಏಕ ಬಾಳೆ ಪದ್ಧತಿಯನ್ನೇ ಹೆಚ್ಚಾಗಿ ನೋಡಿರುತ್ತೆವೆ.ಅಜ್ಜ ಹಾಕಿದ ಆಲದ ಮರ ಎನ್ನುವ ಹಾಗೆ ಏಕ ಬಾಳೆ ಪದ್ಧತಿಯೇ ರೂಢಿಯಾಗಿ ಬಿಟ್ಟಿದೆ. ಆದರೆ ವೈಜ್ಞಾನಿಕವಾಗಿ ನೋಡಿದಾಗ ಗುಂಪು ಬಾಳೆಯ ಪದ್ಧತಿಯಲ್ಲಿ ಹೆಚ್ಚಿನ ಆದಾಯ ಪಡೆಯ ಬಹುದಾಗಿದೆ.

ಹೆಸರು, ಹತ್ತಿ ಬೆಳೆ ಸೊಗಸಾಗಿ ಬರಲು ಈ ರೈತ ಮಾಡಿದ ಸರಳ ಉಪಾಯ..!

       ಸಾವಯವ ಪದ್ಧತಿಯಲ್ಲಿ ಬೆಳೆದ ಹತ್ತಿ ಬೆಳೆಗೂ ರಾಸಾಯನಿಕ ಪದ್ಧತಿಯಲ್ಲಿ ಬೆಳೆದ ಬೆಳೆಗೂ ವ್ಯತ್ಯಾಸ ನೋಡಿದ್ದೀರಾ? ಪದವೀಧರರಾದ ಇವರು ಕೃಷಿಯನ್ನೇ ಬದುಕಾಗಿ ಕಟ್ಟಿಕೊಳ್ಳುತ್ತಿದ್ದಾರೆ. ಈಗ ರೈತನಾಗಿ ಸಾವಯವ ಕೃಷಿ ಮಾಡುತ್ತಿದ್ದಾರೆ.

ಕೇವಲ 700 ರೂಪಾಯಿಗೆ 1 ಎಕರೆಗೆ ಗೊಬ್ಬರ. ಹೀಗೆ ಮಾಡಿದರೆ ಹೆಚ್ಚು ಇಳುವರಿ

       ರಾಸಾಯನಿಕ ಕೃಷಿಯ ಆಪತ್ತು, ಅದರಿಂದ ರೈತರು ಮತ್ತು ಜಗತ್ತು ಅನುಭವಿಸುತ್ತಿರುವ ದುಷ್ಪರಿಣಾಮಗಳು ಇಂದು ಎಲ್ಲರಿಗೂ ಅರಿವಾಗುತ್ತಾ ಸಾಗಿದೆ. ಹಾಗಾಗಿ ಎಷ್ಟೋ ರೈತರು ಸಾವಯವ ಕೃಷಿಯ ಕಡೆ ವಾಲಿದ್ದಾರೆ. ಸಾವಯವ ಕೃಷಿ ಉತ್ತಮ ಪರ್ಯಾಯವಾದರೂ ಸರಿಯಾದ ನಿರ್ವಹಣೆ ಕ್ರಮಗಳು ಮತ್ತು ಗೊಬ್ಬರ ಪೂರೈಕೆಯಲ್ಲಿ ಎಡವುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರದ ಮೇಲೆ ಅತಿ ಹೆಚ್ಚು ಅವಲಂಬಿತರಾಗಿರುವುದು ಕೂಡ ಒಂದು. ಮೊದಲನೆಯದಾಗಿ ಕೊಟ್ಟಿಗೆ ಗೊಬ್ಬರ ಹೊರಗಿನಿಂದ ತರುವುದು ದುಬಾರಿ. ತಂದರೂ ಅದರ ಗುಣಮಟ್ಟ ಹೇಳುವುದು ಕಷ್ಟ. ಇದರಲ್ಲೂ ಕಲಬೆರಕೆಯಾಗುವುದರಿಂದ ಗುಣಮಟ್ಟದ ಗೊಬ್ಬರ ಒದಗಿಸುವುದು ಸಾವಯವ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಕೊಟ್ಟಿಗೆ ಗೊಬ್ಬರ ಕೊಡಲೇಬೇಕು ಆದರೆ ಇದರ ಪ್ರಮಾಣ ಕಡಿಮೆ ಮಾಡಿಕೊಳ್ಳಬಹುದು. ಇದು ಹೇಗೆ ಅಂತೀರಾ..? ಇಲ್ಲಿದೆ ಉತ್ತರ.

ಅರಿಶಿನದಲ್ಲಿ ಕೊಳೆರೋಗ ಬಂದ್ರೆ ಕೆಮಿಕಲ್ ಬಳಸಬೇಡಿ..!

ಅರಿಶಿನ ಹಲವು ಮನೆಮದ್ದುಗಳ ಒಡೆಯಅಡುಗೆಗೂ ಬೇಕುಔಷಧಿಗೂ ಬೇಕುಆರೋಗ್ಯಕ್ಕೂ ಅರಿಶಿನಬೇಕೇಬೇಕುನಮ್ಮ ಹೆಣ್ಣು ಮಕ್ಕಳು ಮನೆಯಲ್ಲಿಯೇ ಮಾಡಿಕೊಳ್ಳುವ ಚರ್ಮದ ಆರೈಕೆಯಲ್ಲಿ ಅರಿಶಿನದ್ದು ದೊಡ್ಡ ಪಾಲುಭಾರತೀಯರ ಮನೆಯಲ್ಲಿ ಅರಿಶಿನಕ್ಕೆ ಬಹಳ ಪ್ರಾಧಾನ್ಯತೆ ಇದೆ ಮನೆ ಮದ್ದಿನ ರೂಪದಲ್ಲಿಯೂ ಅರಿಶಿನವನ್ನು ಬಳಸುತ್ತೇವೆ.

ಮೆಕ್ಕೆಜೋಳಕ್ಕೆ ಬೀಜೋಪಚಾರ ಏಕೆ ಮಾಡಬೇಕು..?

ಬೀಜೋಪಚಾರ ಎಂಬುದು ಬೀಜಗಳಿಗೆ ರಕ್ಷಾಕವಚ. ಬೀಜಗಳನ್ನು ಬಿತ್ತುವ ಮುನ್ನ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ, ಎಲ್ಲಾ ಬೀಜಗಳು ಉತ್ತಮವಾಗಿ ಮೊಳಕೆಯೊಡೆಯುವುದರ ಜತೆಗೆ ಆರೋಗ್ಯವಾದ ಬೆಳೆ ಪಡೆಯಬಹುದು. ಏಕದಳ ಧಾನ್ಯ, ದ್ವಿದಳ ಧಾನ್ಯ, ಸಸಿಗಳು ಹೀಗೆ ಆಯಾ ಬೆಳೆಗೆ ತಕ್ಕಂತಹ ಬೀಜೋಪಚಾರಗಳು ಲಭ್ಯ.ಆದರೆ ಆದಷ್ಟು ಸಾವಯವ ಕೃಷಿ ಪದ್ಧತಿಯಲ್ಲಿ ಜೈವಿಕ ಬೀಜೋಪಚಾರಗಳನ್ನು ಬಳಸುವುದು ಒಳ್ಳೆಯದು.

Home    |   About Us    |   Contact    |   
microbi.tv | Powered by Ocat Online Advertising Service in India