Blog
ಅಲೋವೆರಾ(ಲೋಳೆರಸ): ಕಡಿಮೆ ಖರ್ಚು,ಆದಾಯ ಹೆಚ್ಚು

       ಅಲೋವೆರಾ(ಲೋಳೆರಸ) ಒಂದು ಕ್ಯಾಕ್ಟಸ್(ಕಳ್ಳಿ) ತರಹದ ಸಸ್ಯ. ಅಲೋವೆರಾ ಒಂದು ಚಮತ್ಕಾರಿ ಸಸ್ಯ ಎಂದರೆ ತಪ್ಪಾಗಲಾರದು. ಅನೇಕ ಔಷಧೀಯ ಗುಣಗಳಿರುವ ಇದನ್ನು ಪಾನೀಯಗಳು, ಚರ್ಮದ ಲೋಷನ್, ಸೌಂದರ್ಯವರ್ಧಕಗಳು, ಮುಲಾಮುಗಳು ಅಥವಾ ಸಣ್ಣ ಸುಟ್ಟಗಾಯಗಳಿಗೆ ಜೆಲ್ ರೂಪದಲ್ಲಿ ಸೇರಿದಂತೆ ಅನೇಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಆದರೆ ಎಷ್ಟೋ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ, ಇದನ್ನು ಬೆಳೆಯಾಗಿ ಬೆಳೆಯಬಹುದು ಮತ್ತು ಆದಾಯ ಗಳಿಸಬಹುದು ಎಂಬುದು. ಇದೊಂದು ನಿರ್ಲಕ್ಷ್ಯಕ್ಕೊಳಗಾದ ಬೆಳೆ. ಕಡಿಮೆ ನಿರ್ವಹಣೆಯಲ್ಲಿ ಬೆಳೆಯಬಹುದಾದರೂ ತಿಳುವಳಿಕೆಯ ಆಭಾವದಿಂದ ನಿರ್ಲಕ್ಷ್ಯಕ್ಕೊಳಗಾಗಿದೆ.

4ನೇ ಕುಳೆಯಲ್ಲಿಯೂ ಎಕರೆಗೆ 65 ಟನ್ ಕಬ್ಬು..?

       ಕಬ್ಬು ಒಂದು ವಾಣಿಜ್ಯ ಬೆಳೆಯಾಗಿದೆ. ರಾಜ್ಯಾದ್ಯಂತ ಹಲವಾರು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಸಕ್ಕರೆನಾಡು ಎಂದೇ ಖ್ಯಾತಿ ಪಡೆದಿರುವ ಮಂಡ್ಯದಲ್ಲಿ ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಸಕ್ಕರೆ ಕಾರ್ಖಾನೆಗಳಿಗೆ ಕಳಿಸಲಾಗುವ ಈ ಕಬ್ಬಿನಲ್ಲಿ ಇಳುವರಿ ಉತ್ತಮವಾದರೆ ರೈತನಿಗೆ ಉತ್ತಮ ಆದಾಯ. ಇಲ್ಲವಾದಲ್ಲಿ ನಷ್ಟ ಅನುಭವಿಸಬೇಕಾದಂತಹ ಸ್ಥಿತಿ. ಕಬ್ಬಿನಲ್ಲಿ ಲಾಭ ಗಳಿಸಲು ಏನು ಮಾಡಬೇಕು?

ಕಾಳುಮೆಣಸು ಬೆಳೆಯಲ್ಲಿ ವಿಲ್ಟ್ ಬಾರದಿರಲು ಹೀಗೆ ಮಾಡಿ..!

ಚಿಕ್ಕಮಗಳೂರು: ವಿಲ್ಟ್ ರೋಗಕ್ಕೆ ತುತ್ತಾಗಿ ನರಳುತಿದ್ದ 300 ಕಾಳು ಮೆಣಸು ಬಳ್ಳಿಗಳು ಈಗ, ಕೇವಲ 4 ತಿಂಗಳಲ್ಲಿ ಸುಧಾರಿಸಿದ್ದು, ಹಚ್ಚ ಹಸಿರಿನೊಂದಿಗೆ ಹೆಚ್ಚು ಇಳುವರಿಯನ್ನು ನೀಡುತ್ತಿವೆ.

ಪ್ರತಿ ವರ್ಷ ಅಡಿಕೆಗೆ ಕೊಳೆ ರೋಗ ಬರ್ತಿತ್ತು, ಈಗ ಆ ಚಿಂತೆಯಿಲ್ಲ..!

ಮಳೆಯ ಆವಾಂತರದಿಂದಾಗಿ ಮಲೆನಾಡು ಭಾಗ ಪ್ರತಿವರ್ಷ ತತ್ತರಿಸುತ್ತದೆ. ಅಡಿಕೆ ಬೆಳೆಗಾರರ ಗೋಳು ಕೇಳುವಂತಿಲ್ಲ. ಒಂದು ಕಡೆ ಮಳೆಯ ರಭಸಕ್ಕೆ ಮಣ್ಣು ಸವಕಳಿಯಾಗ್ತಿದ್ರೆ, ಮತ್ತೊಂದು ಕಡೆ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ನಲುಗುತ್ತಿವೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕೃಷಿಕ ಅನ್ನಪ್ಪ ಅವರ ಅಡಿಕೆ ಬೆಳೆಗೂ ಸಹಿತ, ಇದೇ ರೀತಿ ಪ್ರತಿ ವರ್ಷ ಕೊಳೆ ರೋಗ ಬಾಧಿಸುತ್ತಿತ್ತು. ಆದ್ರೆ ಈಗ ಮಾತ್ರ ಅದರ ಚಿಂತೆಯಿಲ್ಲ.

ಗುಂಪುಬಾಳೆ: ಕಡಿಮೆ ಜಾಗ, ಅಧಿಕ ಇಳುವರಿ

       ಒಂದಷ್ಟು ವರ್ಷಗಳ ಹಿಂದೆ ಹೋದರೆ ಹಳ್ಳಿಗಳಲ್ಲಿ ಮನೆಮುಂದೆ, ಹಿತ್ತಲಲ್ಲಿ ಒಂದು ಬಾಳೆ ಗಿಡ ಇರುತ್ತಿತ್ತು. ಅದರ ಸುತ್ತಾ ಇನ್ನಷ್ಟು ಬಾಳೆ ಗಿಡಗಳು. ಅದರ ನೆರಳಲ್ಲಿ ಪಾತ್ರೆ ತೊಳೆಯೋದು, ಬಟ್ಟೆ ತೊಳೆಯೋದು ನಡೀತಿತ್ತು. ಎಷ್ಟೋ ವರ್ಷಗಳ ತನಕ ಗೊನೆಗಳು ಬಿಡುತ್ತಿದ್ದವು. ಇದೇ ಫಾರ್ಮುಲಾವನ್ನು ಕೃಷಿಯಲ್ಲಿ ಅಳವಡಿಸಿಕಂಡರೆ ಹೇಗೆ? ಇದನ್ನೇ ಗುಂಪುಬಾಳೆ ಪದ್ಧತಿ ಎನ್ನುತ್ತಾರೆ. ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಪಡೆಯುವ ಸರಳ ಸೂತ್ರ.

ಅಡಿಕೆ ಜತೆ ಈ ಬೆಳೆ ಬೆಳೆದರೆ ಫ್ರೀ ಗೊಬ್ಬರ ಸಿಗುತ್ತೆ..!

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೃಷಿಕ ರಂಗಯ್ಯ ಸತತವಾಗಿ ಸಾವಯವ ಕೃಷಿಯನ್ನೇ  ಮಾಡುತ್ತಾ ಬಂದಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡದೆ, ಕೊಟ್ಟಿಗೆ ಗೊಬ್ಬರ ಮಾತ್ರ ತೋಟಕ್ಕೆ ಬಳಸುತ್ತಾ ಬಂದಿದ್ದರೂ ಸಹಿತ, ಗಿಡಗಳು ಮಾತ್ರ ಹಳದಿಯಾಗಿ ಸೊರಗುತ್ತಿದ್ದವು. ಹಾಗಾಗಿ ಕೃಷಿಕ ಕೊಟ್ಟಿಗೆ ಗೊಬ್ಬರದ ಜತೆ ಈಗ ಜೈವಿಕ ಗೊಬ್ಬರವನ್ನು ಬಳಸುತ್ತಿದ್ದಾರೆ.

25 ವರ್ಷದಿಂದ ಬಾರದ ಬೆಳೆ ಒಂದೂವರೆ ತಿಂಗಳಿಗೆಲ್ಲಾ ಬಂತು..!

ರಾಯಚೂರು: ನಮ್ಮ ರೈತರು ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯಬೇಕೆಂಬ ಆಸೆಯಿಂದ, ಸಾಲಸೋಲ ಮಾಡಿ ಹೆಚ್ಚು ಹೆಚ್ಚು ಖರ್ಚಿನಿಂದ ರಾಸಾಯನಿಕ ಗೊಬ್ಬರವನ್ನು ತಂದು ಹಾಕುತ್ತಾರೆ. ಆದರೆ, ಕೊನೆಗೆ ರೈತರಿಗೆ ಸಿಗುವಂತಹ ಲಾಭ ಮಾತ್ರ ರೋಗಗಳು, ಕೀಟಗಳ ಬಾಧೆ .ಇದರಿಂದ ಬೆಳೆ ನಾಶವಾಗಿ ರೈತನನ್ನು ಕಷ್ಟಕ್ಕೆ ತಳ್ಳಿಬಿಡುತ್ತೆ. ಅದೇ ರೀತಿ ಇಲ್ಲೊಬ್ಬ ಕೃಷಿಕನ ತೋಟದಲ್ಲಿ 25 ವರ್ಷದಿಂದ ಯಾವ ಬೆಳೆ ಬೆಳೆದರೂ, ಉತ್ತಮ ಇಳುವರಿ ಸಿಗುತ್ತಿರಲಿಲ್ಲವಂತೆ. ಆದರೀಗ..!

20 ಗುಂಟೆಯಲ್ಲಿ 35 ಟನ್, 2 ಎಕರೆಯಲ್ಲಿ 60 ಟನ್ ಯಾಕೆ..?

ಇಲ್ಲಿ ರಾಸಾಯನಿಕ ಕೃಷಿಯ ಕಬ್ಬು, ಸಾವಯವ ಕೃಷಿಯ ಕಬ್ಬು, ಎರಡು ತರಹದ ಕಬ್ಬು ಬೆಳೆ ಇದೆ. ಮೂಡಲಗಿ ತಾಲೂಕು, ಹಳ್ಳೂರು ಗ್ರಾಮದ ಕೃಷಿಕ ಪರಶುರಾಮ್ ಅವರು  2.2 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. 20 ಗುಂಟೆಯಲ್ಲಿ ಸಾವಯವ ಕೃಷಿ ಅನುಸರಿಸಿ ಕಬ್ಬು , 2 ಎಕರೆಯಲ್ಲಿ ರಾಸಾಯನಿಕ ಕೃಷಿ ಅನುಸರಿಸಿ ಕಬ್ಬು ಬೆಳೆದಿದ್ದಾರೆ. ಸಾವಯವ ಕಬ್ಬು ಹಚ್ಚ ಹಸಿರಿನಿಂದ ಆರೋಗ್ಯವಾಗಿದ್ದು 20 ಗುಂಟೆಯಲ್ಲಿ 35 ಟನ್ ಇಳುವರಿ ನಿರೀಕ್ಷೆ ಹುಟ್ಟಿಸಿದರೆ, ರಾಸಾಯನಿಕ ಕಬ್ಬು ಒಣಗಿ ಹೋಗಿ ಸಾವು ಬದುಕಿನ ಮಧ್ಯ ನರಳುತ್ತಿದೆ. 2 ಎಕರೆಯಲ್ಲಿ ಕೇವಲ 60 ಟನ್ ಇಳುವರಿಯ ನಿರೀಕ್ಷೆ ಹುಟ್ಟಿಸಿದೆ.

ಅತ್ಯುತ್ತಮ ಆರೋಗ್ಯಕ್ಕೆ ತಪ್ಪದೆ ‘ಕಿವಿ’ ಕೊಡಿ

       ಕಿವಿ ಒಂದು ವಿದೇಶಿ ಹಣ್ಣು. ಪೌಷ್ಟಿಕ ಹಣ್ಣು. ನ್ಯೂಜಿಲ್ಯಾಂಡ್ ದೇಶದ ಹಣ್ಣಾದ್ದರಿಂದ ಇದನ್ನು ಕಿವಿ ಹಣ್ಣೆಂದು ಕರೆಯುತ್ತಾರೆ. ಕೊರೋನ ಕಾರ್ಮೋಡ ನಂತರ ಜನರು ಆರೋಗ್ಯದ ಬಗ್ಗೆ ಜಾಗೃತರಾಗಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೊಸ ಉತ್ಪನ್ನಗಳು ತಲೆ ಎತ್ತಿವೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅತ್ಯುತ್ತಮ ಆಯ್ಕೆಗಳಲ್ಲಿ ಕಿವಿ ಹಣ್ಣು ಮುಂಚೂಣಿ ಎಂದರೆ ತಪ್ಪಾಗಲಾರದು. ರುಚಿ, ಬೇಡಿಕೆ ಮತ್ತು ಆರೊಗ್ಯದ ಪ್ರಯೋಜನಗಳಿಂದ ಮಾರುಕಟ್ಟೆಯಲ್ಲಿ ಇದರ ಬೆಲೆ ತುಸು ಹೆಚ್ಚೇ ಎನ್ನಬಹುದು.

5 ವರ್ಷದ ಅಡಿಕೆ ತೋಟ 8 ಲಕ್ಷಕ್ಕೆ ಖೇಣಿ..!

ಅಡಿಕೆಗೆ ಬಂಗಾರದ ಬೆಲೆ ಇದೆ ನಿಜ. ಆದರೆ ಆ ಬಂಗಾರದ ಬೆಲೆಯನ್ನು ತೆಗೆದುಕೊಳ್ಳುವುದರಲ್ಲಿ ಕೃಷಿಕರು ವಿಫಲವಾಗುತ್ತಿದ್ದಾರೆ. ಕಾರಣ, ರೈತ ಮಾಡುತ್ತಿರುವಂತಹ ರಾಸಾಯನಿಕ ಕೃಷಿ.ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಅಡಿಕೆ ಬೆಳೆಗೆ ಇಲ್ಲಸಲ್ಲದ ರೋಗಗಳು ಅಂಟಿಕೊಂಡು ಲಾಭದ ಬದಲು ನಷ್ಟವನ್ನು ತಂದೊಡ್ಡುತ್ತಿದೆ. ಆದರೆ ಕೃಷಿಕ ನಾಗರಾಜ್ ಅವರ ತೋಟದಲ್ಲಿ, ಈ ತರಹದ ಯಾವುದೇ ಸಮಸ್ಯೆಇಲ್ಲ. ಕಾರಣ ಸಾವಯವ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದು, ಡಾ.ಸಾಯಿಲ್ ಅರೇಕಾ ಜೈವಿಕ ಗೊಬ್ಬರ ಬಳಸುತ್ತಿದ್ದಾರೆ.   

ಕಬ್ಬು ಬೆಳೆಯಲ್ಲಿ ಎಕರೆಗೆ 100 ಟನ್ ಪಡೆಯುವ ಸೂತ್ರ

ವಾರ್ಷಿಕ ಬೆಳೆಯಾದ ಕಬ್ಬು ಬೆಳೆಯಲ್ಲಿ ಮರಿಸಂಖ್ಯೆ ಕಡಿಮೆಯಾಯ್ತು, ಗಣಿಕೆಗಳು ಹೆಚ್ಚಾಗಲಿಲ್ಲ. ಗೊಣ್ಣೆ ಹುಳುಗಳ ಕಾಟ ಹೆಚ್ಚಾಯ್ತು. ಕಬ್ಬು ಬೆಳೆದಂತೆಲ್ಲ ಮರಿಸಂಖ್ಯೆಗಳು ನಶಿಸಿಹೋಗುತ್ತವೆ ಎಂಬುದು ಬಹುತೇಕ ಕಬ್ಬು ಬೆಳೆಗಾರರ ಸಮಸ್ಯೆಗಳು. ಇವುಗಳಿಂದ ಕೃಷಿಕನಿಗೆ ಸಿಗಬೇಕಾದ ಇಳುವರಿ ಕೈಗೆಟುಕುವುದಿಲ್ಲ

ಬಿತ್ತುವ ಮುನ್ನ ಮನೆಯಲ್ಲಿಯೇ ಸುಲಭವಾಗಿ ಮಾಡಿ ಬೀಜಗಳ ಪರೀಕ್ಷೆ..!

ಇದು ಎಲ್ಲಾ ರೈತರು ಗಮನದಲ್ಲಿಟ್ಟುಕೊಳ್ಳಬೇಕಾದ ವಿಚಾರ. ಕೃಷಿ  ಭೂಮಿ ಉಳುಮೆ ಮಾಡಿದ್ದೆ, ಕೆ.ಜಿ ಕೆ.ಜಿ ಗೊಬ್ಬರ ಹಾಕಿದ್ದೆ, ಸರಿಯಾದ ಸಮಯದಲ್ಲಿ ಬಿತ್ತನೆ ಮಾಡಿದರೂ ಕೂಡ, ಇಳುವರಿ ಮಾತ್ರ ಬರಲೇ ಲ್ಲ ಎಂದು ತಲೆ ಮೇಲೆ ಕೈಹೊತ್ತು  ಕುಳಿತುಕೊಳ್ಳಬಾರದು. ಬದಲಿಗೆ, ಬಿತ್ತನೆಗೂ ಮುನ್ನ ರೈತರು ವೈಜ್ಞಾನಿಕ ವಿಚಾರಗಳನ್ನು ತಿಳಿದುಕೊಂಡು ನಂತರ ಬಿತ್ತನೆ ಮಾಡುವುದು ಸೂಕ್ತ. ಬೆಳೆಯಲ್ಲಿ ಮುಂದೆ ಆಗುವ ನಷ್ಟಗಳನ್ನು ತಡೆಯಬಹುದು.

ಬಿತ್ತನೆಗೂ ಮುನ್ನ ವೈಜ್ಞಾನಿಕ ಭೂಮಿ ಸಿದ್ಧತೆ ಹೇಗಿರಬೇಕು..?

ಭೂಮಿ ಸಿದ್ಧತೆ ಎಂದಾಗ ಟ್ ಅಂತಾ ತಲೆಗೆ ಬರೋದು ಉಳುಮೆ.ಉಳುಮೆಯೊಂದು ಮಾಡಿ ಬಿಟ್ಟರೆ ಸಾಕು, ಬಿತ್ತನೆ ಮಾಡುವುದಕ್ಕೆ ಭೂಮಿ ಸಿದ್ಧವಾಗಿರುತ್ತೆ ಎಂದುಕೊಂಡಿರುತ್ತಾರೆಬಹುತೇಕ ಕೃಷಿಕರು. ಆದರೆ ಈ ವಿಚಾರ ತಪ್ಪು, ಉಳುಮೆ ಮಾತ್ರ ಮಾಡುವುದಲ್ಲ ಜತೆಗೆ ಸಾವಯವ ತ್ಯಾಜ್ಯಗಳನ್ನು ಭೂಮಿಗೆ ಸೇರಿಸುವುದು ಅತ್ಯಶ್ಯಕವಾಗಿರುತ್ತೆ.

ವೈಜ್ಞಾನಿಕವಾಗಿ ತಿಪ್ಪೆ ಎಲ್ಲಿರಬೇಕು, ಹೇಗಿರಬೇಕು..?

ಕೃಷಿ ಭೂಮಿಯಲ್ಲಿ ತಿಪ್ಪೆ ಇದ್ದರೆ, ಅದರಲ್ಲಿ ಎರೆಹುಳು ಗೊಬ್ಬರದ ಕಾರ್ಖಾನೆಯನ್ನೇ ಸೃಷ್ಟಿ ಮಾಡಬಹುದು. ಆದರೆ ತಿಪ್ಪೆಯನ್ನು ನಿರ್ಮಾಣ ಮಾಡುವ ಹಂತದಲ್ಲಿ ಕೃಷಿಕರು ಕೆಲವೊಂದು ವೈಜ್ಞಾನಿಕ ವಿಚಾರಗಳನ್ನು ತಿಳಿಯಬೇಕಾಗುತ್ತೆ.

ಸಾವಯವ ಕೃಷಿಕರಿಗೆ 50 ಸಾವಿರ ಸಬ್ಸಿಡಿ & ಸಾವಯವ ಪ್ರಮಾಣ ಪತ್ರ

       ರಾಸಾಯನಿಕ ಕೃಷಿಯ ಮೂಲಕ ಕೇವಲ ವಿಷಯುಕ್ತ ಆಹಾರವನ್ನಷ್ಟೆ ಜನರಿಗೆ ಕೊಡಬಹುದೆ ಹೊರತು, ಆರೋಗ್ಯಕರ ಆಹಾರವನ್ನಲ್ಲ. ದೇಶದಾದ್ಯಂತ ಸಾವಯವ ಉತ್ಪನ್ನಗಳ ಮಹತ್ವ ಮತ್ತು ಬೇಡಿಕೆ ಹೆಚ್ಚುತ್ತಿದೆ. ರಾಸಾಯನಿಕ ಬಳಕೆಯಿಂದ ಪರಿಸರ ಮತ್ತು ಜನರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳನ್ನು ಕಂಡ ಸರ್ಕಾರ, ರೈತರು ಸಾವಯವ ಕೃಷಿಗೆ ಬರುವಂತೆ ಪ್ರೇರೇಪಿಸಲು 2015ರಲ್ಲಿ ಯೋಜನೆ ಜಾರಿಗೆ ತಂದಿದೆ. "ಪರಂಪರಾಗತ್ ಕೃಷಿ ವಿಕಾಸ್ ಯೋಜನೆ" (PKVY) ಎಂಬ ಯೋಜನೆಯ ಮುಖಾಂತರ ರೈತರಿಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಿದೆ.

ಗುಲಾಬಿ ತೋಟಕ್ಕೆ ಚುಕ್ಕೆ ರೋಗ ಬರಲು ರೈತನೇ ಕಾರಣ..!

ಮಾರ್ಕೆಟ್ ನಲ್ಲಿ  ಸದಾ ಬೇಡಿಕೆಯಲ್ಲಿರುವ ಹೂಗಳನ್ನು ಬೆಳೆಯುವ ರೈತರು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತೆ. ಸಾಮಾನ್ಯವಾಗಿ ಹೂಬೆಳೆ ಅಂದ್ರೆ ಕೀಟಗಳ ಹಾವಳಿ ಹೆಚ್ಚು, ಹೀಗಿರುವಾಗ ರೈತರು ಬೇಸಾಯ ಕ್ರಮಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಬೇಕು ,  ಅದರಲ್ಲೂ ಎಲ್ಲಾ ಸೀಸನ್ ಗಳಲ್ಲಿಯೂ ಪೂಜೆ, ಹಬ್ಬ ಹರಿದಿನ, ಮದುವೆ ಶುಭಕಾರ್ಯಗಳಲ್ಲಿ ಮುಂದೆ ಇರುವ ಗುಲಾಬಿ ಹೂವನ್ನು ಬೆಳೆಯುವಾಗ ಬೆಳೆಗಾರರು ಕೆಲವೊಂದು ವೈಜ್ಞಾನಿಕ ವಿಚಾರಗಳನ್ನು ತಿಳಿಯಬೇಕು. ಹೂ ಬೆಳೆಯಲ್ಲಿ ಕೀಟಬಾಧೆ, ರೋಗಬಾಧೆ, ಬೆಳೆ ಒಣಗುವಿಕೆ ಹೀಗೆ ಇನ್ನಿತರ ಸಮಸ್ಯೆಗಳನ್ನು ತಡೆಗಟ್ಟಬೇಕು ಎಂದರೆ ಸಾವಯವ ಕೃಷಿ ಅತ್ಯವಶ್ಯಕ.

ಧಾತು ಆಪ್ ನಿಂದ ರೈತರ ಕಲ್ಯಾಣ – ODP ಮೆಚ್ಚುಗೆ

       ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ Organisation for the Development of People (ODP) ಸಂಸ್ಥೆಯು. ಈ ಬಾರಿ ಪರಿಸರ ದಿನಾಚರಣೆಯ ಅಂಗವಾಗಿ ಮಣ್ಣಿನ ಉಳಿವಿಗಾಗಿ ಕಾರ್ಯಕ್ರಮ ಆಯೋಜಿಸಿತ್ತು.

ಮಣ್ಣು ಮತ್ತು ಮಾನವನ ಉಳಿವಿಗಾಗಿ ಮಣ್ಣು ಜೀವಿಸಲಿ ಕ್ರಾಂತಿ..!

        ಅನ್ನದಾತರಿಗೆ ಮಣ್ಣಿನ ಮಹತ್ವ ತಿಳಿಸಲು ಮೈಕ್ರೋಬಿ ಫೌಂಡೇಶನ್ 9 ತಿಂಗಳ ನಿರಂತರ ಅಭಿಯಾನ ನಡೆಸುತ್ತಿದೆ. ಇದರ ಅಂಗವಾಗಿ ನಾಡಿನಾದ್ಯಂತ ವಿವಿಧ ಹಳ್ಳಿಗಳಿಗೆ ಸಂಚರಿಸಿ ಅಭಿಯಾನ ನಡೆಸುತ್ತಿದೆ.

ಮಣ್ಣಿನ ಆರೋಗ್ಯ ಸರಿಯಾದರೆ ಮಾತ್ರ ಮನುಷ್ಯನ ಆರೋಗ್ಯ ಸರಿಯಾಗುತ್ತೆ-ಡಾ.ಕೆ.ಆರ್.ಹೆಚ್

       ಮಣ್ಣು ಜೀವಿಸಲಿ ಘೋಷವಾಕ್ಯದೊಂದಿಗೆ ನಾಡಿನ ಉದ್ದಗಲಕ್ಕೂ ಜಾಗೃತಿ ಜಾಥಾ ನಡೆಸುತ್ತಿರುವ ಮೈಕ್ರೋಬಿ ಫೌಂಡೇಶನ್ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಮಣ್ಣಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಮಣ್ಣು ಜೀವಿಸಲಿ ಅಭಿಯಾನದಲ್ಲಿ ಜೋನಲ್ ಹೆಡ್ ಗಳು, ದಾಸ್ತಾನುಗಾರರು, ವಿತರಕರು ಮತ್ತು ಮೈಕ್ರೋಬಿ ಆಗ್ರೋಟೆಕ್ ನ ಸಿಬ್ಬಂದಿ ಹಾಜರಿದ್ದರು.

ಮಣ್ಣು ಜೀವಿಸಲಿ-ಮೈಕ್ರೋಬಿ ಫೌಂಡೇಶನ್ ವತಿಯಿಂದ ನಿರಂತರ ಅಭಿಯಾನ

ಮಂಗನಿಂದ ಮಾನವ ಎನ್ನುವುದಕ್ಕಿಂತ, ಮಣ್ಣಿನಿಂದ ಮಾನವ ಎನ್ನುವುದೇ ಹೆಚ್ಚು ಸೂಕ್ತ. ಪಂಚಭೂತಗಳಲ್ಲಿ ಒಂದಾದ ಈ ಮಣ್ಣು ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ. ರಾಸಾಯನಿಕ ಗೊಬ್ಬರಗಳ ಯಥೇಚ್ಚ ಬಳಕೆಯಿಂದ ಜೀವ ಕಳೆದುಕೊಳ್ಳುತ್ತಿರುವ ಮಣ್ಣಿಗೆ ಮರುಜೀವ ಕೊಡಲು ಪ್ರಯತ್ನಿಸುತ್ತಿದೆ ಮೈಕ್ರೋಬಿ ಫೌಂಡೇಶನ್ ನ ಮಣ್ಣು ಜೀವಿಸಲಿ ಅಭಿಯಾನ.

ಕೃಷಿ ತ್ಯಾಜ್ಯ ಹೆಚ್ಚಾದರೆ ಭೂಮಿಯ ಫಲವತ್ತತೆ ಹೆಚ್ಚುತ್ತೆ-ಸಾವಯವ ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲುನಾಚೆಗೌಡರ ಅಭಿಮತ

       “ಮಣ್ಣು ಜೀವಿಸಲಿ” ಅಭಿಯಾನದಡಿ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ತಮಿಳುನಾಡಿನ ಈರೋಡು ಜಿಲ್ಲೆಗಳ ರೈತರಿಗೆ ಸಮಗ್ರ ಸುಸ್ಥಿರ ಸಾವಯವ ಕೃಷಿ ಕುರಿತು ಮೈಕ್ರೋಬಿ ಫೌಂಡೇಶನ್ ವತಿಯಿಂದ 1 ದಿನದ ಉಚಿತ ಕಾರ್ಯಾಗಾರವನ್ನು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಗ್ರಾಮೀಣ ಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಮೈಕ್ರೋಬಿ ಫೌಂಡೇಶನ್ ಮುನ್ನುಡಿ

       ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಹೆಮ್ಮೆಯ ಕೊಡುಗೆ ಡಾ.ಸಾಯಿಲ್ ನ ಯಶೋಗಾಥೆ ಹಳ್ಳಿ ಹಳ್ಳಿಯನ್ನೂ ತಲುಪಿದೆ. ರೈತರ ಬಾಳಿನ ಸಂಜೀವಿನಿಯಾಗಿ ಸಮಾಜವನ್ನು ಬೆಳಗುತ್ತಿದೆ. ಹಳ್ಳಿಗಳ ಉದ್ಧಾರವೇ ದೇಶದ ಅಭಿವೃದ್ಧಿ…!” ಎಂಬ ಮಹಾತ್ಮ ಗಾಂಧೀಜಿಯವರ ಮಾತನ್ನು ಸಾಕಾರಗೊಳಿಸಲು ಈಗ ಮೈಕ್ರೋಬಿ ಫೌಂಡೇಶನ್ಮುನ್ನುಡಿ ಬರೆದಿದೆ.

ದಾವಣಗೆರೆಯಲ್ಲಿ ಮಣ್ಣಿನ ಮಕ್ಕಳ ಕಣ್ಣು ತೆರೆಸಿದ ಮಣ್ಣಿನ ಮಗ ಡಾ.ಕೆ.ಆರ್.ಹುಲ್ಲುನಾಚೆಗೌಡರು

ದಾವಣಗೆರೆಮೈಕ್ರೋಬಿ ಫೌಂಡೇಶನ್ ವತಿಯಿಂದ ಮಣ್ಣು ಜೀವಿಸಲಿ ಅಭಿಯಾನದಡಿ ಹಮ್ಮಿಕೊಳ್ಳಲಾಗಿದ್ದ ಸಾವಯವ ಕೃಷಿಕರ ಸಮಾವೇಶದಲ್ಲಿ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು ಕೃಷಿಕ ವರ್ಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ತೋರಿದರು.


ಖ್ಯಾತ ಸಾವಯವ ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲುನಾಚೆಗೌಡರಿಗೆ ರೈತ ಚಕ್ಷು ಬಿರುದು ಪ್ರದಾನ

ದಾವಣಗೆರೆ: ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರಿಗೆ ರೈತ ಚಕ್ಷು ಬಿರುದು ಪ್ರದಾನ ಮಾಡಲಾಯಿತು.

ತಮಿಳುನಾಡಿನ ಸತ್ಯಮಂಗಲಂನಲ್ಲಿ ಡಾ.ಸಾಯಿಲ್ ಪ್ರಾಂತೀಯ ಕಚೇರಿ ಆರಂಭ

ತಮಿಳುನಾಡಿನ ಸತ್ಯಮಂಗಲಂನಲ್ಲಿ ಡಾ.ಸಾಯಿಲ್ ಪ್ರಾಂತೀಯ ಕಚೇರಿ ವಿಧ್ಯುಕ್ತವಾಗಿ ಆರಂಭಗೊಂಡಿತು. 

ಮಂಡ್ಯದಲ್ಲಿ ಮೇ 24ರಂದು ಉಚಿತ ತರಬೇತಿ ಕಾರ್ಯಾಗಾರ

ಮೈಕ್ರೋಬಿ ಫೌಂಡೇಶನ್ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಮಣ್ಣು ಜೀವಿಸಲಿ ಅಭಿಯಾನದ ಬಗ್ಗೆ ಸಂಚಾಲಕರು, ಡಾ.ಸಾಯಿಲ್ ದಾಸ್ತಾನುದಾರರಾದ ಜೋಗಿಗೌಡ ಅವರು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ವಿಜಯಪುರ ಕೃಷಿ ಸಮಾವೇಶದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾದ ಡಾ.ಸಾಯಿಲ್ ಮಳಿಗೆ

ವಿಜಯಪುರದಲ್ಲಿ ನಡೆಯುತ್ತಿರುವ 5 ದಿನಗಳ ಕೃಷಿ ಸಮಾವೇಶದಲ್ಲಿ ಡಾ.ಸಾಯಿಲ್ ಮಳಿಗೆ ಅನ್ನದಾತರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 

ಮೈಕ್ರೋಬಿ ಫೌಂಡೇಶನ್ ಕಾರ್ಯಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೆಚ್ಚುಗೆ

ಮೈಕ್ರೋಬಿ ಫೌಂಡೇಷನ್ ನ ಅಧ್ಯಕ್ಷರು, ನಾಡಿನ ಖ್ಯಾತ ಸಾವಯವ ಕೃಷಿತಜ್ಞರಾದ ಡಾ. ಕೆ ಆರ್.ಹುಲ್ಲುನಾಚೆಗೌಡರು ಶ್ರೀನಿವಾಸಪುರದ ಶಾಸಕರು ಹಾಗೂ ಮಾಜಿ ವಿಧಾನಸಭಾಧ್ಯಕ್ಷರಾದ ರಮೇಶ್ ಕುಮಾರ್ ರವರನ್ನು ಭೇಟಿಯಾದರು.

ನಾಟಿಗೂ ಮುನ್ನ ಶುಂಠಿಗೆ ವೈಜ್ಞಾನಿಕ ಬೀಜೋಪಚಾರ..!

ಯಾವುದೇ ಬೆಳೆಯನ್ನು ನಾಟಿ ಅಥವಾ ಬಿತ್ತನೆ ಮಾಡುವ ಮುನ್ನ ಬೀಜೋಪಚರಿಸಿ ಬಿತ್ತಬೇಕು. ಇದರಿಂದಬೆಳೆ ಉತ್ತಮವಾಗಿ ಮೊಳಕೆಯೊಡೆದು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.

ಕಬ್ಬಿನ ತೋಟಕ್ಕೆ ಬೆಂಕಿ ಇಡುವುದನ್ನ ನಿಲ್ಲಿಸಿ… ಕಡಿಮೆ ಖರ್ಚಿನ ಗೊಬ್ಬರ ತಯಾರಿಸಿ..!

ವಿಜಯಪುರ ಜಿಲ್ಲೆ, ಇಂಡಿ ತಾಲೂಕಿನ ಕೃಷಿಕ ಸುಧಾಕರ್ ಅವರುಸಾವಯವ ಕೃಷಿಯ ಮೂಲಕ ಕಬ್ಬು ಬೆಳೆ ಬೆಳೆಯುತ್ತಿದ್ದಾರೆ. ಇವರು ತಮ್ಮ ಕಬ್ಬು ಬೆಳೆಗೆ ಡಾ.ಸಾಯಿಲ್ ಶುಗರ್ ಕೇನ್ ಸ್ಪೆಷಲ್ ಬಳಸಿದ್ದರಿಂದ, ಇಂದು ಕಬ್ಬು ಬೆಳೆ ಎಕರೆಗೆ 60 ಕ್ವಿಂಟಾಲ್ ಇಳುವರಿ ನೀಡಲು ಶಕ್ತವಾಗಿದೆ. ಹೌದು.. ಕಬ್ಬು ಬೆಳೆ ಸಾವಯವ ಕೃಪೆಯಿಂದ ಎಕರೆಗೆ 60 ಕ್ವಿಂಟಾಲ್ ಇಳುವರಿ ನಿಡ್ತಾಯಿರುವುದು ಸತ್ಯ. ಆದ್ರೆ ಕೃಷಿಕ ಮಾಡ್ತಾಯಿರುವ ಆ ಒಂದು ತಪ್ಪಿನಿಂದ ಇನ್ನೂ ಹೆಚ್ಚಿನ ಇಳುವರಿ ಕೈತಪ್ಪಿದೆ.

30 ಬೆಳೆಗಳು, ಕೃಷಿಕನಿಗೆ ವಾರ್ಷಿಕ 30 ಲಕ್ಷ ಆದಾಯ ..!

ಮಂಡ್ಯ ಜಿಲ್ಲೆ ಮಂಡ್ಯ ತಾಲೂಕಿನ ಪಟ್ಟಿಕೊಪ್ಳು ಗ್ರಾಮದ ಕೃಷಿಕ ಚಿಕ್ಕಣ್ಣ ಅವರು, ತಮ್ಮ 20 ಎಕರೆ ಕೃಷಿ ಭೂಮಿಯಲ್ಲಿ 30ಕ್ಕೂ ಹೆಚ್ಚು ಬೆಳೆ ಬೆಳೆದುಕೊಂಡು ತೋಟಕ್ಕೆ ಅರಣ್ಯದ ಳೆ ನೀಡಿದ್ದಾರೆ. ಕೃಷಿಕ ಚಿಕ್ಕಣ್ಣ ಅವರದ್ದು, ಒಟ್ಟಾರೆ 20 ಎಕರೆ ಕೃಷಿ ಭೂಮಿ. ಇವರು 5 ಎಕರೆ ಕೃಷಿ ಭೂಮಿಯಲ್ಲಿ ಅಲ್ಪಾವಧಿ ಬೆಳೆಗಳು, ದನಕರುಗಳಿಗೆ ಮೇವು ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಮಿಕ್ಕ 15 ಎಕರೆ ಕೃಷಿ ಭೂಮಿಯಲ್ಲಿ ಅಡಿಕೆ, ತೆಂಗು, ಟೀಕ್, ಕಿತ್ತಳೆ, ಪಪ್ಪಾಯ, ಪೇರಲ, ನುಗ್ಗೆ, ಕಾಡು ಬೇವು, ಕಾಫಿ( ಅರೇಬಿಕಾ ಮತ್ತು ರೋಬೊಸ್ಟಾ) ಹೀಗೆ 30ಕ್ಕೂ ಹೆಚ್ಚು ಬೆಳೆಗಳನ್ನ ಬೆಳೆದು ತೋಟವನ್ನ ಅರಣ್ಯದಂತೆ ಮಾಡಿದ್ದಾರೆ.

ತಿಪಟೂರು ತಾಲ್ಲೂಕಿನಲ್ಲೊಬ್ಬರು ಹಿರಿಯ ಸಾವಯವ ರಾಯಭಾರಿ..!

ಇವರು ಜನಮೆಚ್ಚಿದ ವಿಶ್ರಾಂತ ಪೋಸ್ಟ್ ಮನ್, ಈಗ ಹೆಮ್ಮೆಯ ಸಾವಯವ ಕೃಷಿಕರು. ಯಾರು ಎಷ್ಟೇ ಒತ್ತಡ ತಂದರೂ ತಮ್ಮ ಭೂಮಿಯನ್ನು ಉಳುಮೆ ಮಾಡಿಸಿಲ್ಲ! ಭೂಮಿಗೆ ಹಿಡಿ ರಾಸಾಯನಿಕ ಗೊಬ್ಬರ ತೋರಿಸಿಲ್ಲ. ಕೊನೆಗೆ ಇದರಿಂದ ಮಗ ಮುನಿಸಿಕೊಂಡರೂ, ಇವರ ಸಾವಯವ ಪ್ರೀತಿ ಕಡಿಮೆಯಾಗಿಲ್ಲ. ಭೂಮಿಯನ್ನು ವಿಷಮುಕ್ತ ಮಾಡುವ ಸಂಕಲ್ಪದೊಂದಿಗೆ ಹಲವಾರು ವರ್ಷಗಳಿಂದ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ.

ಮೂರು ಎಕರೆ ಕಬ್ಬಿಗೆ 3.5 ಅಡಿ ಅಂತರ, ಎರಡು ಸಾಲು ಕಬ್ಬಿಗೆ 6 ಅಡಿ ಅಂತರ. ನಂತರ..?

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಾಬು ರಾಯ್ ಅವರುತಮ್ಮ ಮೂರು ಎಕರೆ ಕೃಷಿ ಭೂಮಿಯಲ್ಲಿ ಸಾವಯವ ಕೃಷಿಯ ಮೂಲಕ ಕಬ್ಬು ಬೆಳೆಯುತ್ತಿದ್ದಾರೆ. ಇಲ್ಲಿ ಕೃಷಿಕ 6 ಅಡಿ ಅಂತರ ಕೊಟ್ಟು, ಬೆಳೆಗೆ ಆಗುವ ಲಾಭದ ಬಗ್ಗೆ ಅನುಭವ ಪಡೆಯುವ ಯತ್ನ ಮಾಡಿದ್ದಾರೆ. 3.5 ಅಡಿ ಅಂತರದಿಂದ ಮೂರು ಎಕರೆ ಕಬ್ಬು ಬೆಳೆದರೆ, ಪರೀಕ್ಷಾರ್ಥ ದೃಷ್ಟಿಯಿಂದ 2 ಸಾಲೂ ಕಬ್ಬಿಗೆ 6 ಅಡಿ ಅಂತರ ನೀಡಿದ್ದಾರೆ.

ಪ್ರಿನ್ಸಿಪಾಲ್ ಸಾಹೇಬರ ಸಾವಯವ ಸವಾರಿ..!

ಇವರು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಪ್ರತಿಷ್ಠಿತ ಸರಸ್ವತಿ ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ಆಗಿದ್ದವರು.  ಚುಂಚನಗಿರಿ ಮಠದ ಅಧೀನದಲ್ಲಿ ಬರುವ ತಾಲ್ಲೂಕಿನ ವಿದ್ಯಾಸಂಸ್ಥೆಗಳಿಗೆ ಆಡಳಿತಾಧಿಕಾರಿಯಾಗಿದ್ದವರು. ಇವರ ಬಗ್ಗೆ ಇಡೀ ತಾಲ್ಲೂಕಿನಲ್ಲಿ ಗೌರವ ಭಾವವಿದೆ. ಇಂಥ ಉನ್ನತ ವ್ಯಕ್ತಿತ್ವದವರು ತಮ್ಮ ಭೂಮಿಯನ್ನು ವಿಷಮುಕ್ತ ಮಾಡುವ ಸಂಕಲ್ಪದೊಂದಿಗೆ ಕಳೆದ ಒಂದೂವರೆ ವರ್ಷದಿಂದ ಸಾವಯವ ಕೃಷಿಯನ್ನು ಮಾಡುತಿದ್ದಾರೆ.

ಜೇನುನೊಣಗಳು ಬದುಕಿದರಷ್ಟೇ ನಮ್ಮ ಬದುಕು..!

ಜೇನುನೊಣಗಳಿಲ್ಲದೆ ಮನುಷ್ಯನ ಜೀವನ ಊಹಿಸುವುದೇ ಕಷ್ಟ. ಯಾಕೆಂದರೆ, ಬರೀ ಜೇನು ಕೊಡುವ ಕೆಲಸವನ್ನು ಮಾತ್ರ ಈ ನೊಣಗಳು ಮಾಡುತ್ತಿಲ್ಲ. ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲೂ ಇವುಗಳದ್ದು ಬಹುದೊಡ್ಡ ಪಾತ್ರ. ಮನುಷ್ಯ ತಿನ್ನುವ ಬಹುತೇಕ ಹಣ್ಣು, ಹಂಫಲು, ತರಕಾರಿ ಸೇರಿದಂತೆ ಎಲ್ಲಾ ಆಹಾರಗಳ ಹಿಂದೆ ಇರುವುದು ಇದೇ ಜೇನುನೊಣಗಳ ಪರಾಗಸ್ಪರ್ಶದ ಪ್ರಯತ್ನ.

ಶೂನ್ಯ ಬಂಡವಾಳದಲ್ಲಿ ಕಬ್ಬು ಬೆಳೆಯುವ ಸೂತ್ರ..!

ಮೈಸೂರು ಜಿಲ್ಲೆಟಿ.ನರಸೀಪುರ ತಾಲೂಕಿನ ಬಣ್ಣಳ್ಳಿ ಗ್ರಾಮದ ಕೃಷಿಕ ರವಿ ಶಂಕರ್ ಅವರು, ತಮ್ಮ 4 ಎಕರೆ ಕಬ್ಬು ಬೆಳೆಯ ಮಧ್ಯೆ ಸೂಕ್ತವಾದ ಅಂತರ ಕಲ್ಪಿಸಿತಂತ್ರ ಹೂಡಿದ್ದಾರೆ.ಹಿಂದೆ ಕಬ್ಬು ಬೆಳೆಗೆ ಮಾಡಿದ ಖರ್ಚನ್ನ ಹಿಂದಿರುಗಿಸಿಕೊಂಡಿದ್ದಲ್ಲದೆ, ಮುಂದೆ ಆಗುವ ಖರ್ಚನ್ನೂ ನೀಗಿಸಲು ಉತ್ತಮ ಯೋಜನೆ ರೂಪಿಸಿದ್ದಾರೆ.

ಕೃಷಿ ಯಂತ್ರೋಪಕರಣಗಳ ಪಟ್ಟಿಗೆ ಡ್ರೋನ್ ಇನ್..!

ರಾಜ್ಯ ಸರ್ಕಾರದ ಕೃಷಿ ಇಲಾಖೆಯು ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಲೇ ಇರುತ್ತದೆ. ಆ ಪೈಕಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಯೋಜನೆಯೂ ಒಂದಾಗಿದೆ. 2014-15 ರಲ್ಲಿ ಆರಂಭವಾದ ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆ ಕೃಷಿಗೆ ಮತ್ತಷ್ಟು ಉತ್ತೇಜನ ನೀಡುತ್ತಿದೆ.

ತಿಪಟೂರಿನ ಪ್ರತಿಷ್ಠಿತ ಕಲ್ಪತರು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರ ತೋಟದಲ್ಲಿ ಡಾ. ಸಾಯಿಲ್ ತಂಡ..!

ಅವರದ್ದು ತಿಪಟೂರು ತಾಲ್ಲೂಕಿನ ಪ್ರತಿಷ್ಠಿತ ಕುಟುಂಬ…! ವ್ಯಾಪಾರ ವಹಿವಾಟಿನಲ್ಲಿ ಹೆಸರುವಾಸಿ ಮನೆತನ ಸಮಾಜ ಸೇವೆ ಮತ್ತು ಸೇವಾ ಕೈಂಕರ್ಯಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪರಿವಾರ ಅವರದ್ದು ಬರೋಬ್ಬರಿ 100 ಎಕರೆಯ ತೋಟ ಅವರು ಪ್ರತಿಷ್ಠಿತ ಕಲ್ಪತರು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಹೆಸರಾಂತ ಕೊಬ್ಬರಿ ವ್ಯಾಪಾರಿಗಳೂ ಆದ ದೀಪಕ್ ಅವರು, ದಿವಂಗತ ಕರಿಸಿದ್ಧಾರಾಧ್ಯರ ಮೊಮ್ಮಗ.

ಸಾವಯವ ಭಾಗ್ಯ ಯೋಜನೆ ಪ್ರಾಮುಖ್ಯತೆ

ನಾಮ ಹಲವುಸತ್ಯ ಒಂದೇ ಎನ್ನುವ ಮಾತು ಸಾವಯವ ಕೃಷಿಸುಸ್ಥಿರ ಕೃಷಿನೈಸರ್ಗಿಕ ಕೃಷಿ ಹೀಗೆ ಹತ್ತು ಹಲವು ಪದಗಳಿಂದ ಕರೆಯುವ ಬೇಸಾಯ ಪದ್ಧತಿಗೂ ಅನ್ವಯಿಸುತ್ತದೆ. ಸಾವಯವ ಕೃಷಿ ಅನಾದಿ ಕಾಲದಿಂದ   ರೂಡಿಯಲ್ಲಿದ್ದರೂ,  ಪ್ರಸ್ತುತ  ಸಂದರ್ಭದಲ್ಲಿ ಹಲವಾರು ಮಾರ್ಪಾಡುಗಳನ್ನು ಅಳವಡಿಸಿಕೊಂಡಿದೆ. ಅತಿಯಾದ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣುನೀರು, ವಾತಾವರಣ, ಸಸ್ಯ ಮತ್ತು ಪ್ರಾಣಿಸಂಕುಲಗಳಿಗೆ ಕಂಟಕ ಎದುರಾಗಿದೆ.  ಭೂಮಿಯ ಭೌತಿಕರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳು ಕ್ಷೀಣಿಸುವುದಲ್ಲದೆ, ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಕುಂಠಿತಗೊಂಡಿದೆ.

 

ಪ್ರತಿ ವರ್ಷ ಅಡಿಕೆಗೆ ಕೊಳೆ ರೋಗ ಬರ್ತಿತ್ತು, ಈಗ ಅದರ ಚಿಂತೆಯಿಲ್ಲ..!

ಮಳೆಗಾಲದಲ್ಲಿ ಮಳೆಯ ಆವಾಂತರದಿಂದಾಗಿ ಮಲೆನಾಡು ಭಾಗ ತತ್ತರಿಸುತ್ತದೆ. ಅಡಿಕೆ ಬೆಳೆಗಾರರ ಗೋಳು ಕೇಳುವಂತಿಲ್ಲ. ಒಂದು ಕಡೆ ಮಳೆಯ ರಭಸಕ್ಕೆ ಮಣ್ಣು ಸವಕಳಿಯಾಗ್ತಿದ್ರೆಮತ್ತೊಂದು ಕಡೆ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ನಲುಗುತ್ತಿವೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕೃಷಿಕ ಅನ್ನಪ್ಪ ಅವರ ಅಡಿಕೆ ಬೆಳೆಗೂ ಸಹಿತ, ಇದೇ ಮಾದರಿಯಲ್ಲಿ ಪ್ರತಿ ವರ್ಷ ಕೊಳೆ ರೋಗ ಬಾಧಿಸುತ್ತಿತ್ತು. ಆದ್ರೆ ಈ ವರ್ಷ ಮಾತ್ರ ಕೊಳೆ ರೋಗಕ್ಕೆ ಬ್ರೇಕ್ ಬಿದ್ದಿದೆ.

ದೇಶದ ಕೃಷಿ ಅಭಿವೃದ್ಧಿಗೆ 6 ಸಂಕಲ್ಪಗಳು-ಖ್ಯಾತ ಸಾವಯವ ಕೃಷಿತಜ್ಞ ಡಾ.ಕೆ.ಆರ್.ಹುಲ್ಲುನಾಚೆಗೌಡರು

ಕೃಷಿಯನ್ನು ಪ್ರಯೋಗಾಲಯಗಳಿಂದ ಹೊರಗೆ ತರಬೇಕಿದೆ. ಪ್ರಕೃತಿಯ ಜೊತೆ ಮರುಜೋಡಿಸುವ ಕೆಲಸ ಆಗಬೇಕಿದೆ. ಸಾವಯವ ಮತ್ತು ಸಹಜ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ- ಪ್ರಧಾನಿ ಶ್ರೀ ನರೇಂದ್ರ ಮೋದಿ

ತೋಟಗಾರಿಕೆ ಕೃಷಿಗೆ ಸರ್ಕಾರದ 10 ಯೋಜನೆಗಳು..!

ಕೃಷಿ ಭೂಮಿ ಹೆಚ್ಚಾಗದಿದ್ದರೂ, ಇದ್ದ ಜಾಗದಲ್ಲೇ ರೈತರು ತೋಟಗಾರಿಕೆಯಿಂದ ಅಧಿಕ ಇಳುವರಿ ತೆಗೆದು ಉತ್ತಮ ಆದಾಯ ಪಡೆಯುತ್ತಿರುವುದು, ಕೃಷಿಯಿಂದ ವಿಮುಖರಾಬೇಕೆಂದಿದ್ದ ರೈತರಲ್ಲಿ ಭಯ ದೂರಮಾಡಿದೆ. ತೋಟಗಾರಿಕೆಯಿಂದ ಉತ್ತಮ ಆದಾಯ ಪಡೆಯುವುದರಿಂದ ರೈತರಿಗೆ ಒಕ್ಕಲುತನದ ಮೇಲಿನ ಅಭಿಮಾನ,  ಪ್ರೀತಿ ಮತ್ತಷ್ಟು ಹೆಚ್ಚಾಗಿದ್ದು, ಇದಕ್ಕೆ ಸರ್ಕಾರ ಕೂಡ ಕೈ ಜೋಡಿಸಿದೆ.

ಜಾಗತಿಕ ತಾಪಮಾನ: ರಾಸಾಯನಿಕ ಕೃಷಿಯ ಬಹುಮಾನ

ಜಾಗತಿಕ ತಾಪಮಾನ, ಇಂದು ಇಡೀ ಜಗತ್ತನ್ನೇ ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ. ಇಡೀ ಮನುಕುಲವನ್ನೇ ಸರ್ವನಾಶ ಮಾಡುವಂತಹ ಅಪಾಯ ತಂದಿಟ್ಟಿದೆ. ಪ್ರಪಂಚದ ತಾಪಮಾನವು 2 ಡಿಗ್ರಿಗಳಷ್ಟು ಏರಿದರೆ, ಹಿಮನದಿಗಳು ಮತ್ತು ನದಿಗಳು ಕಣ್ಮರೆಯಾಗಲು ಪ್ರಾರಂಭಿಸುತ್ತವೆ ಮತ್ತು ಪರ್ವತ ಪ್ರದೇಶಗಳು ಹೆಚ್ಚು ಭೂಕುಸಿತಗಳನ್ನು ಅನುಭವಿಸುತ್ತವೆ. 2100ರ ವೇಳೆಗೆ ಇದರ ಪರಿಣಾಮವಾಗಿ ವಿಶ್ವದ ಜನಸಂಖ್ಯೆಯ ಶೇ. 10ಷ್ಟು ಜನರನ್ನು ಸ್ಥಳಾಂತರಿಸಬೇಕಾಗುತ್ತದೆ.

ರೋಗನಿರೋಧಕ ಶಕ್ತಿಗೆ ಬೇಕು ಸಾವಯವ ಆಹಾರ..!

ಕೆಲವು  ವರ್ಷಗಳ ಹಿಂದೆ ನೋಡೋದಾದ್ರೆ ಯಾರಾದರು ಮರಣಹೊಂದಿದರೆ, ಅಯ್ಯೋ ಪಾಪ ಅಂತ ಕಣ್ಣೀರುಹಾಕಿ ಶವ ಸಂಸ್ಕಾರಕ್ಕೆ ಭಾಗಿಯಾಗಿ ದುಃಖ ವ್ಯಕ್ತಪಡಿಸುತ್ತಿದ್ದೆವು. ಆದರೆ ಈ 2 ವರ್ಷಗಳಿಂದ  ಸಾವು ಅಂದ್ರೆ ಅಬ್ಬಾ..! ಆಕಡೆ ಹೋಗೋದೆ ಬೇಡ, ಯಾರ ಸಹವಾಸವೂ ಬೇಡ ಎನ್ನುವ ಹಾಗೆ ಆಗಿದೆ, ರೇಷನ್ ಅಂಗಡಿ, ಬಟ್ಟೆ ಅಂಗಡಿಗಳ ಮುಂದೆಯೆಲ್ಲಾ ಸಾಲುಗಟ್ಟಿ ನಿಲ್ಲುತ್ತಿದ್ದ ಜನರು,  ಕೊರೊನಾ ಮಹಾಮಾರಿಯಿಂದ ಹೆಣಗಳನ್ನ ಇಟ್ಟುಕೊಂಡು ಸ್ಮಶಾನದ ಮುಂದೆ ಕ್ಯೂ ನಿಲ್ಲುವಂತಾಗಿತ್ತು. ಸಿನಿಮಾ ಥಿಯೇಟರ್ ಗಳ ಮುಂದೆ ನೋಡಿದ್ದ ಹೌಸ್ ಫುಲ್ ಬೋರ್ಡ್ ಗಳನ್ನ, ಸ್ಮಶಾನದ ಮುಂದೆ ನೋಡುವ ಪರಿಸ್ಥಿತಿ ಬಂದಿತ್ತು. ಹೆಣಗಳ ಅಂತ್ಯಸಂಸ್ಕಾರಕ್ಕೂ ಜಾಗ ಇಲ್ಲದಂತಾಗಿತ್ತು.

ಕಬ್ಬಿನಲ್ಲಿ 10 ಅಡಿ ಅಂತರವಿದ್ರೆ, ಬೆಳೆ ಮತ್ತು ರೈತನಿಗೆ ನೆಮ್ಮದಿ..!

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮದ ಕೃಷಿಕ ಹನುಮಂತ ಅವರು, ತಮ್ಮ ಒಂದು ಎಕರೆ ಕಬ್ಬಿನ ತೋಟದಲ್ಲಿ ಹತ್ತು ಅಡಿ ಅಂತರ ಕಾಯ್ದುಕೊಂಡು ಉತ್ತಮ ಕಬ್ಬು ಬೆಳೆ ಬೆಳೆಯುತ್ತಿದ್ದಾರೆ.

ಕೃಷಿ ಹೊಂಡ ನಿರ್ಮಾಣಕ್ಕೆ ಬ್ಯಾಂಕ್ ಗಳಿಂದ ಸಾಲ..!

ಮಳೆಯಾಶ್ರಿತ ರೈತರು ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಸರ್ಕಾರ ಸಾಕಷ್ಟು  ಅನುಕೂಲ ಮಾಡಿಕೊಟ್ಟಿದೆ. ಅದೆ ರೀತಿಯಾಗಿ ಕೆಲವು ಬ್ಯಾಂಕ್ ಗಳು ಸಹಿತ, ರೈತರಿಗೆ ಸಾಲದ ರೂಪದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಹೆಗಲು ಕೊಟ್ಟು ನಿಂತಿವೆ.

ಒಂದೊಂದು ಗಿಡದಲ್ಲಿ 45 ಕೆ.ಜಿ ಅಡಿಕೆ, ಒಟ್ಟು ಇಳುವರಿ ಎಷ್ಟು?

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೃಷಿಕರಾದ ಸಂಜಯ್ ಅವರು, ತಮ್ಮ ಅಡಿಕೆ ಬೆಳೆಗೆ ಹಿಂದೆ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ ಹಾಗೆಯೇ ರಾಸಾಯನಿಕ ಗೊಬ್ಬರ ಬಳಸಿ ನಿರ್ವಹಣೆ ಮಾಡುತ್ತಿದ್ದರು. ಹಾಗಾಗಿ ಬಿಟ್ಟು ಬಿಡದಂಗೆ ಹರಳು ಉದುರುವಿಕೆ ಸಮಸ್ಯೆ, ಹಿಡಿಮುಂಡಿಗೆ ರೋಗಗಳು ಆವರಿಸಿದ್ದವು. ಹೀಗಾಗಿ ರೋಗಗಳ ಸರಮಾಲೆಗಳಿಂದ ಅಡಿಕೆ ತೋಟವನ್ನ ಬಚಾವ್ ಮಾಡುವ ಸಲುವಾಗಿ ಕೃಷಿಕ ಸಾವಯವ ಕೃಷಿಯತ್ತ ಹೆಜ್ಜೆ ಹಾಕಿದ್ರು. 

ಮಳೆ ಆಸರೆ ಬೇಡದೆ ಬೆಳೆದು ನಿಂತ ಶೇಂಗಾ, ತೊಗರಿ..!

ಕೊಪ್ಪಳ ತಾಲೂಕಿನ ಕೃಷಿಕರಾದ ನಾಗರಾಜ ಅವರು, ತಮ್ಮ ಶೇಂಗಾ ಮತ್ತು ತೊಗರಿ ಬೆಳೆಯನ್ನ ಮಳೆಯಾಶ್ರಿತದಲ್ಲಿ ಬೆಳೆಯುತ್ತಿದ್ದಾರೆ. ಆದ್ರೆ ಇಲ್ಲಿ ಆಶ್ಚರ್ಯ ಮತ್ತು ದುರಂತದ ಸಂಗತಿ ಅಂದ್ರೆ, ಮಳೆರಾಯ ಮುನಿಸಿಕೊಂಡು, ಅಪರೂಪಕ್ಕೆ ದರ್ಶನ ನೀಡುತ್ತಿದ್ದ. ಇದಷ್ಟೆ ಅಲ್ಲದೆ ಬಿದ್ದ ಮಳೆ, ಬೆಳೆ ಮತ್ತು ಭೂಮಿಗೆ ಸಾಕಾಗುತ್ತಿರಲಿಲ್ಲ. ಆದ್ರೆ ನಾಗರಾಜ್ ಅವರ ಶೇಂಗಾ ಮತ್ತು ತೊಗರಿಗೆ ನೀರಿನ ಅಭಾವ ಆಗಲಿಲ್ಲ ಯಾಕೆ ಗೊತ್ತಾ?

ಎಣ್ಣೆ ಬಿದ್ದ ಕಡೆಯೆಲ್ಲಾ ಎರೆಹುಳುಗಳ ಸಾಮ್ರಾಜ್ಯ..!

ಲಾಭವಿಲ್ಲದ ಕಷ್ಟದಾಯಕ ಕಾರ್ಯ ಅಂದ್ರೆ, ಅದು ಕೃಷಿ ಎಂಬುದು ಇವತ್ತಿನ ಸಾಕಷ್ಟು ರೈತರ ವಾದವಾಗಿದೆ. ಆದ್ರೆ ವೈಜ್ಞಾನಿ ಕೃಷಿ ಪದ್ಧತಿ ಅನುಸರಿಸಿದರೆ, ಕೃಷಿ ಸರಳವಾಗಿ, ಲಾಭ ರೈತನನ್ನ ಹಿಂಬಾಲಿಸುತ್ತದೆ ಎಂಬುದನ್ನು ಇಲ್ಲೊಬ್ಬ ಯುವ ಕೃಷಿಕ ಸಾಬೀತು ಪಡಿಸಿದ್ದಾರೆ.

ಬರಡು ಭೂಮಿಯಲ್ಲಿ ಅರಳಿತು ಬಂಗಾರದಂತಹ ಸೂರ್ಯಕಾಂತಿ..!

ಬರಪೀಡಿತ ಕೃಷಿ ಭೂಮಿಯಲ್ಲಿ ಇಲ್ಲೊಬ್ಬ ಕೃಷಿಕ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಬೆಳೆದು ಅಚ್ಚರಿ ಮೂಡಿಸಿದ್ದಾರೆ. ಹಾಗಾದ್ರೆ ಬರಡಾಗಿದ್ದ ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ ಬೆಳೆಯಲು ಹೇಗೆ ಸಾಧ್ಯವಾಯಿತು ತಿಳಿಯೋಣವೆ.

1234567
|<  1   2   3   4  5 ...>|
Home    |   About Us    |   Contact    |   
microbi.tv | Powered by Ocat Online Advertising Service in India