Blog
ಸವಾಲಿನಲ್ಲಿ ವಿಜಯ ಸಾಧಿಸಿದ ಸಾವಯವ ಸರದಾರ..!

ಅವೈಜ್ಞಾನಿಕ ಕೃಷಿ ಪದ್ಧತಿ ತುಂಬಿ ತುಳುಕುತ್ತಿರುವ ಹಿನ್ನೆಲೆ, ಕೃಷಿ ಚಟುವಟಿಕೆ ರಾಸಾಯನಿಕ ಕೃಷಿಯಲ್ಲಿ ಮಿಂದೇಳುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷಿಕನೋರ್ವನಿಗೆ ಕೃಷಿ ಭೂಮಿ ಮತ್ತು ಬೆಳೆಗಳನ್ನ ಕಳೆದುಕೊಳ್ಳುವ ಆತಂಕ ಸೃಷ್ಟಿಯಾಯಿತು. ಕೃಷಿಕ ಸಾವಯವ ಕೃಷಿಯ ಮಾಹಿತಿ ಪಡೆದು ಸಾವಯವಕ್ಕೆ ಎಂಟ್ರಿ ಕೊಡಲು ಸಜ್ಜಾದ್ರು, ಆಗ ಅವರಿಗೆ ಕಾಡಿದ ವಿಘ್ನಗಳು ನೂರೆಂಟು.

ಭೋಪಾಲ್ ಅನಿಲ ದುರಂತ: ಸಾವಿಲ್ಲದ ಕೀಟನಾಶಕ ತಯಾರಿಕೆಯ ಕರಾಳ ಮುಖ

       ಡಿಸೆಂಬರ್ 2-3-1984 ರ ಮಧ್ಯರಾತ್ರಿ. ವಿಶ್ವ ಕಂಡ ಅತ್ಯಂತ ಭೀಕರ ಕೈಗಾರಿಕಾ ದುರಂತಗಳಲ್ಲೊಂದಾದ ಭೋಪಾಲ್ ಅನಿಲ ದುರಂತ ನಡೆದ ದಿನ. ನಿದ್ದೆಯಲ್ಲಿದ್ದ ಎಷ್ಟೋ ಜನ ಚಿರನಿದ್ರೆಗೆ ಜಾರಿದ ಕರಾಳ ರಾತ್ರಿ. ಸಾವಿರಾರು ಜನ ಉಸಿರುಕಟ್ಟಿ ಪ್ರಾಣ ಬಿಟ್ಟ ದಿನ. ಕೆಲವರ ದುರಾಸೆ, ಬೇಜವಾಬ್ದಾರಿತನಕ್ಕೆ ಹಸುಗೂಸು, ಮಕ್ಕಳು, ವೃದ್ಧರು ಉಸಿರುಕಟ್ಟಿ ನರಳಿ ನರಳಿ ಪ್ರಾಣತೆತ್ತ ದಿನ. ‘ದಿ ಅಟ್ಲಾಂಟಿಕ್’ ಎಂಬ ಅಮೇರಿಕಾದ ಮ್ಯಾಗಜಿನ್ ಇದನ್ನು “world’s worst industrial disaster” ಎಂದು ಬರೆದಿದೆ.

ನುಗ್ಗೆ: ತಿಳಿದುಕೊಳ್ಳಲೇ ಬೇಕು ಇದರ ಬಗ್ಗೆ

       ಹಳ್ಳಿಗಳಿಗೆ ಹೋದರೆ ಸಾಕು ಒಂದು ಮರ ಸರ್ವೇಸಾಮಾನ್ಯವಾಗಿ ಕಾಣಸಿಗುತ್ತದೆ. ಮನೆಯ ಹಿತ್ತಲಲ್ಲಿ, ಹೊಲದ ಯಾವುದೋ ಒಂದು ಮೂಲೆಯಲ್ಲಿ ನುಗ್ಗೆಮರ ನೋಡಬಹುದು. ಹಳೇ ಕಾಲದವ್ರು ತಿನ್ನೋ ಈ ಸೊಪ್ಪನ್ನ ಇವಾಗ ಯಾರ್ ತಿಂತಾರೆ ಅಂದುಕೊಂಡಿದ್ರೆ ಅದು ತಪ್ಪು. ನುಗ್ಗೆಯಿಂದ ಹಲವು ಉಪಯೋಗಗಳಿವೆ.

10 ಅಡಿ ಕಬ್ಬು-100 ಟನ್ ಇಳುವರಿಯ ಸೂತ್ರ

       ಒಂದು ಬೆಳೆ ಸಮೃದ್ಧವಾಗಿ ಬೆಳೆಯಲು ಗಾಳಿ, ಬೆಳಕು, ನೀರು ಮತ್ತು ಆಹಾರ ತುಂಬಾ ಮುಖ್ಯ. ಆದರೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಇವುಗಳ ಸದ್ಬಳಕೆಯಾಗುತ್ತಿಲ್ಲ. ಆದ ಕಾರಣ ಎಕರೆಗೆ ಕೇವಲ 40 ರಿಂದ 50 ಟನ್ ಮಾತ್ರ ಇಳುವರಿ ಪಡೆಯುತ್ತಿದ್ದಾರೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಿದರೆ, ಕಬ್ಬಿನಲ್ಲಿ 100 ಟನ್  ಇಳುವರಿಯನ್ನು ಸುಲಭವಾಗಿ ಪಡೆಯಬಹುದು. ಇಳುವರಿ ಹೆಚ್ಚಿಸಲು, ಉತ್ತಮ ಗುಣಮಟ್ಟದ ಕಬ್ಬನ್ನು ಬೆಳೆಯಲು, ಅಂತರ ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಆರ್. ಹುಲ್ಲುನಾಚೇಗೌಡರವರು ಹುಟ್ಟು ಹಾಕಿರುವ ಪದ್ಧತಿಯೇ 10 x 10 ಜೋಡಿ ಸಾಲು ಪದ್ಧತಿ.

ಶುಂಠಿ ಬೆಳೆಯನ್ನ ರಾಸಾಯನಿಕ ಬಂಧನದಿಂದ ಪಾರು ಮಾಡಿ..!

ಮಸಾಲೆ ಪದಾರ್ಥದಲ್ಲಿ ಒಂದಾಗಿರುವ ಶುಂಠಿ ಬೆಳೆಯಿಂದ ರೈತರು ಹೆಚ್ಚು ಆದಾಯ ಪಡೆಯುವ ಸಲುವಾಗಿ,ಶುಂಠಿ ಬಯಸುವ ಹೆಚ್ಚು ಪೋಷಕಾಂಶವನ್ನ ಸಾವಯವದಲ್ಲಿ ನೀಡದೆ, ರಾಸಾಯನಿಕ ಗೊಬ್ಬರ ನೀಡುತ್ತಾರೆ. ಇದರಿಂದ ಬೆಳೆ ವಿಷವಾಗುತ್ತೆ, ಕೃಷಿ ಭೂಮಿ ಬರಡಾಗುತ್ತದೆ. ಇಲ್ಲೊಬ್ರು ಕೃಷಿಕರು, ಒಂದು ಕಡೆ ರಾಸಾಯನಿಕ ಗೊಬ್ಬರ, ಮತ್ತೊಂದೆಡೆ ಪರೀಕ್ಷಾರ್ಥವಾಗಿ ಸಾವಯವದಲ್ಲಿ ಶುಂಠಿ ಬೆಳೆದಿದ್ದಾರೆ.

ಕಳೆಗೆ ಕಳೆನಾಶಕ ಬೇಡ, ಸಾವಯವ ಕೃಷಿ ಬೇಕು..!

ಕೃಷಿ ಕಾಯಕದ ಸವಾಲುಗಳಲ್ಲಿ ಕಳೆ ಕೂಡ ಒಂದು ದೊಡ್ಡ ಸವಾಲು. ಬೆಳೆಗಳ ಜತೆಗೆ ಬೆಳೆದು ಬೇಡ ಎಂದರೂ ಹೊಲಗಳಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತವೆ. ಇವುಗಳನ್ನು ಹೇಗಾದರು ಜಮೀನಿನಿಂದ ಡಿಸಲೇ ಬೇಕು ಎಂದು ನಮ್ಮ ರೈತರು, ಕಳೆನಾಶಕಗಳನ್ನು ಬಳಸಿ, ಕಳೆ ನಾಶಮಾಡುವ ಅವಸರದಲ್ಲಿ  ಬೆಳೆಯನ್ನೇ ನಾಶಮಾಡಿಕೊಳ್ಳುತ್ತಾರೆ.

ಮಳೆಯಾಶ್ರಯ ಶಾಪವಲ್ಲ.. ಜಲಸಂಪನ್ಮೂಲಗಳಿಗೆ ಜೀವನಾಡಿ

ಸಾಂಪ್ರದಾಯಿಕ ಕೃಷಿ ವಿಧಾನದಲ್ಲಿ ಬಾವಿ, ಕೆರೆ, ಕೃಷಿಹೊಂಡ, ನೀರು ಹರಿದು ಹೋಗದಂತೆ ತಡೆಗಟ್ಟುವ ಬದುಗಳನ್ನ ಇಂದು ಮರೆಯಲಾಗಿದೆ. ಇದರಿಂದ ಭೂತಾಯಿ ದಾಹ ನೀಗಿಸಿಕೊಳ್ಳಲು ವರ್ಷಪೂರ್ತಿ ಮಳೆರಾಯನಿಗೆ ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಮಳೆಯಾಶ್ರಿತ ರೈತರು ಉತ್ತಮ ಇಳುವರಿ ಪಡೆಯುವುದು ಕನಸಾಗಿದೆ.

ಶೀತ ತಡೆದುಕೊಂಡು, ರೈತನನ್ನ ಬೆಚ್ಚಗಿರಿಸಿದ ಬಜ್ಜಿ ಮೆಣಸಿನಕಾಯಿ..!

ಡಿಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿಕ ಶ್ರಿನಿವಾಸ್ ರೆಡ್ಡಿ ಅವರು, ತಮ್ಮ ಕೃಷಿ ಭೂಮಿಯಲ್ಲಿ ಪ್ರಪ್ರಥಮ ಬಾರಿಗೆ ಸಾವಯವ ಕೃಷಿ ಅಳವಡಿಸಿಕೊಂಡು ಕೃಷಿಯಲ್ಲಿ ಮೇಲುಗೈ ಸಾಧಿಸಿದ್ದಾರೆ.

ಡ್ರ್ಯಾಗನ್ ಫ್ರೂಟ್: ಒಣಭೂಮಿ ಬೇಸಾಯಗಾರರ ನಿಧಿ

     ನೀರಾವರಿ ಇರೋ ಜಮೀನಿನಲ್ಲಿ ಹೇಗೆ ಕೃಷಿ ಮಾಡಬೇಕು ಎಂದು ನಾವು ಮಾತನಾಡುತ್ತೇವೆ. ಆದರೆ ಕೃಷಿ ಭೂಮಿಯಲ್ಲಿ ನೀರಿಲ್ಲದಿದ್ದರೆ? “ಬೋರ್ ವೆಲ್ ತೆಗೆಸಿ ಸಾಕಾಗೋಗಿದೆ ಸರ್”, “1000 ಅಡಿ ಹೊಡೆದ್ರು ನೀರೆ ಸಿಕ್ಕಲ್ಲ”, “ಇಲ್ಲಿ ನೀರೇ ಇಲ್ಲ ಸರ್ಇವು ರೈತರು ಹತಾಶೆಯಿಂದ ಹೇಳೋ ಮಾತುಗಳು. ಹಾಗಾದರೆ ಏನು ಬೆಳೆಯೋದು? ಡ್ರ್ಯಾಗನ್ ಫ್ರೂಟ್..!

ಡಾ. ಸಾಯಿಲ್ ಉಪಯೋಗಿಸುತ್ತಿರುವ ರೈತ ಉದ್ಯಮಿಯ ಯಶೋಗಾಥೆ

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ದಬ್ಬೆಘಟ್ಟ ಹೋಬಳಿಯ ಕೆ. ಬೇವಿನಹಳ್ಳಿ ಗ್ರಾಮದ ರಾಮೇಗೌಡರ ಮಗ ವಿಶ್ವನಾಥ್, ಕಳೆದ ಎರಡು ವರ್ಷಗಳಿಂದ ರೈತರ ಸಂಜೀವಿನಿಯಾದ ಡಾ. ಸಾಯಿಲ್ ಜೈವಿಕ ಗೊಬ್ಬರವನ್ನು ತಮ್ಮ ತೆಂಗಿನ ತೋಟಕ್ಕೆ ಬಳಸಿ, ಅದ್ಭುತ ಫಸಲನ್ನು ಪಡೆಯುತ್ತಿದ್ದಾರೆ. ಹಾಗೆಯೇ ಉದ್ಯಮಿಯಾಗಿಯೂ ಬದಲಾಗಿದ್ದಾರೆ. ತಮ್ಮ ತೋಟದಲ್ಲಿ ಬೆಳೆದ ತೆಂಗಿನ ಕಾಯಿಗಳಿಂದ ಶುದ್ಧ ತೆಂಗಿನ ಎಣ್ಣೆ ಉತ್ಪಾದಿಸುತ್ತಿದ್ದಾರೆ. ಸಾಂಪ್ರಾದಾಯಿಕವಾದ ಎಣ್ಣೆ ಗಾಣಗಳನ್ನು ಅಳವಡಿಸಿ "ಶ್ರೀ ರಾಮಾಂಜನೆಯ ಕೋಕನಟ್ ಆಯಿಲ್ ಮಿಲ್" ಸ್ಥಾಪಿಸಿದ್ದಾರೆ.

ಬೆಳೆಯಲ್ಲಿ ಬೆಳವಣಿಗೆಗೆ ಬೇಕು ಸ್ಲರಿ ಎನ್ರಿಚರ್-ಸಮಗ್ರ ಮಾಹಿತಿ

ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಭೂಮಿಯಲ್ಲಿ ಫಲವತ್ತತೆ ನಶಿಸಿ ಹೋಗುತ್ತಿದ್ದು, ಭೂಮಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಭೂಮಿಯನ್ನು ನಾವು ಕಾಪಾಡಿಕೊಳ್ಳಬೇಕು, ಭೂಮಿ ನಮ್ಮ ಮುಂದಿನ ಪೀಳಿಗೆಗೂ ಆಧಾರವಾಗಿರಬೇಕು, ಬೆಳೆಗಳಿಗೆ ಪೋಷಕಾಂಶಗಳು ಸಿಗಬೇಕು ಎಂದರೆ, ಸಾವಯವ ಕೃಷಿ ಪದ್ಧತಿಯಲ್ಲಿ ಜೈವಿಕ ಪೋಷಕಾಂಶಗಳನ್ನು ನೀಡುವುದು ತುಂಬಾ ಅವಶ್ಯಕವಾಗಿದೆ.

ಕಡಕ್ನಾಥ್ ಕೋಳಿ ಸಾಕಿದರೆ ಲಕ್ಷಗಳ ಸುರಿಮಳೆ

       ಕೋಳಿ ಸಾಕಾಣಿಕೆ ನಮ್ಮ ದೇಶದಲ್ಲಿ ಒಂದು ದೊಡ್ಡ ಉದ್ಯಮ. ಮೊಟ್ಟೆ, ಮಾಂಸಕ್ಕಾಗಿ ಇರುವ ಆಗಾಧ ಬೇಡಿಕೆಯಿಂದ, ಇಂದು ಈ ವಿಭಾಗದ ಉದ್ಯಮದಲ್ಲಿ ಹೊಸ ಪ್ರಯೋಗಗಳು, ಹೊಸ ತಳಿಗಳ ಪರಿಚಯವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ವಿಚಿತ್ರ ತಳಿ ಎಂದರೆ ಅದು ಕಡಕ್ನಾಥ್ ಕೋಳಿ. ಇದರ ದೇಹ, ಮಾಂಸ ಎಲ್ಲಾ ಕಡು ಕಪ್ಪು. ಇದರ ಕಪ್ಪು ಬಣ್ಣಕ್ಕೆ ಕಾರಣ ಮೆಲನಿನ್ ಎಂಬ ಪಿಗ್ಮೆಂಟ್. ಇದರ ಪರಿಚಯ ಮತ್ತು ಔದ್ಯಮಿಕ ಮೌಲ್ಯದ ಪರಿಚಯ ಇಲ್ಲಿದೆ.

400 ಅಡಿಕೆ ಗಿಡಗಳಿಂದ ಹಿಂದೆ 20 ಕ್ವಿಂಟಾಲ್, ಈಗ 60 ಕ್ವಿಂಟಾಲ್ ಹಸಿ ಅಡಿಕೆ

       ಮಲ್ಲಿಕಾರ್ಜುನ್ ಮತ್ತು ತಂದೆ ಪಂಚಾಕ್ಷರಿರವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬಿಸಲೇಹಳ್ಳಿಯವರು. ತಮ್ಮ ತೋಟದಲ್ಲಿ 400 ಅಡಿಕೆ ಮರಗಳನ್ನು ಬೆಳೆಸಿದ್ದಾರೆ. ತಂದೆ ಮಗನ ಜುಗಲ್ ಬಂದಿಯಾಗಿ ಶ್ರಮವಹಿಸಿ ದುಡಿಯುತ್ತಿದ್ದಾರೆ. ಹಿಂದೆ 20 ಕ್ವಿಂಟಾಲ್ ಹಸಿ ಅಡಿಕೆ ಇಳುವರಿ ತೆಗೆಯುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದ ಹಾಗೆ ಇಳುವರಿಯಲ್ಲಿ ಬದಲಾವಣೆ ಆಗಿದ್ದಾದರು ಹೇಗೆ? ಮುಂಚೆ ಇಲ್ಲಿ ಇದ್ದ ಸಮಸ್ಯೆಗಳು ಏನಾದವು? ಮುಂದೆ ಓದಿ.

 

ಹಸಿ ಅಡಿಕೆ

 

ಸಮಗ್ರ ಕೃಷಿ ಪದ್ಧತಿಯ ಸಮಗ್ರ ಮಾಹಿತಿ-ಬದುಕು ಬದಲಿಸುವ ದಾರಿ

      ಭಾರತ ಕೃಷಿ ಪ್ರಧಾನ ದೇಶ. ಸುಮಾರು ಶೇ.58 ರಷ್ಟು ಜನರು ಕೃಷಿಯ ಮೇಲೆ ಅವಲಂಬಿಸಿದ್ದಾರೆ. ಆದg,É ರೈತರು ವರ್ಷಪೂರ್ತಿ ದುಡಿದರೂ, ಎಲ್ಲಿಗೂ ಸಾಲದ ಸಂಪಾದನೆ. ಇದರ ಮೇಲೆ ಯೂರಿಯಾ ಮತ್ತಿತರ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು..... ಇತ್ಯಾದಿಗಳನ್ನು ಖರೀದಿಸಲು ಮಾಡುವ ಸಾಲಗಳು, ರೈತರನ್ನು ದಿಕ್ಕು ತೋಚದಂತೆÉ ಮಾಡಿರುವುದು ಸುಳ್ಳಲ್ಲ. ಹಾಗಾದರೆ ಇದಕ್ಕೆ ಪರಿಹಾರ..?

ಶುಂಠಿಗೆ ಸಾಕುಸಾಕಾಯಿತು ಆಹಾರ, ಇದು ಸಾವಯವ ಚಮತ್ಕಾರ..!

ಅನಾರೋಗ್ಯದ ಕಂಟಕಕ್ಕೆ ರಾಮಬಾಣವಾಗಿರುವ ಶುಂಠಿ ಬೆಳೆಯ ಮೇಲೆ ಒಂದು ಆರೋಪವಿದೆ. ಅದು ಏನಂದ್ರೆ, ಕೃಷಿಕರು ಶುಂಠಿ ಬೆಳೆಯಲು ಆಯ್ಕೆ ಮಾಡಿಕೊಂಡರೆ ಭೂತಾಯಿ ಬರಡಾಗುತ್ತಾಳೆ ಎಂದು. ಆದ್ದರಿಂದ ಬಹುತೇಕ ಕೃಷಿಕರು ಶುಂಠಿ ಬೆಳೆಯ ಸಹವಾಸಕ್ಕೆ ಅಂಜುತ್ತಾರೆ

ಒಂಟಿ ಬೆಳೆ ಎಡವಟ್ಟು, ಸಮಗ್ರ ಬೆಳೆ ಒಬ್ಬಟ್ಟು - ಗುರುವಿನ ಪಾಠ..!

ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಕೃಷಿಕ ಯೋಗೇಶ್ ಅವರು ಮೂಲತ: ಕೃಷಿ ಕುಟುಂಬದವರಾಗಿದ್ದು, ವೃತ್ತಿಯಲ್ಲಿ ಶಿಕ್ಷಕರು. ಆದ್ರೆ ಮೂಲ ಕಸುಬಾಗಿರುವ ಕೃಷಿಯನ್ನ ಕೈಬಿಡಬಾರದೆಂಬ ಇಚ್ಛೆಯಿಂದ, ವೃತ್ತಿಯೊಂದಿಗೆ ಕೃಷಿಯನ್ನೂ ಎದೆಗಪ್ಪಿದರು.

ಹಸಿರೆಲೆ ಗೊಬ್ಬರ-ಸಮರ್ಪಕ ಮಾಹಿತಿ ಇದ್ದರೆ ಪೋಷಕಾಂಶಗಳ ಆಗರ..!

ಕೃಷಿಗೆ ಹಸಿರೆಲೆ ಗೊಬ್ಬರ, ಪೂರ್ವಿಕರ ಕಾಲದಿಂದಲೂ ಪರಿಚಯವಿರುವ ಪದ್ಧತಿ. ಆದ್ರೆ ಇಂದು ಕೃಷಿಕರು ಹಸಿರೆಲೆ ಗೊಬ್ಬರಗಳನ್ನ ಮೂಲೆಗಿಟ್ಟು, ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಭೂತಾಯಿಯನ್ನ ಸೊರಗುವಂತೆ ಮಾಡುತ್ತಿರುವುದೇ ವಿಪರ್ಯಾಸ. ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗಿ, ಮಣ್ಣಿನ ರಚನೆ ಹಾಳಾಗುತ್ತಿದೆ. ಮಣ್ಣಿನಲ್ಲಿ ಪೋಷಕಾಂಶದ ಸುಸ್ಥಿರತೆ ಕಾಣದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಬೆಳೆ ಪಡೆಯುವುದು ಕಷ್ಟಕರವಾಗಿದೆ.

ಸಾವಯವ ಕೃಷಿ ಪದ್ಧತಿ ಅಗತ್ಯವೋ? ಅನಿವಾರ್ಯವೋ?

ಸಾವಯವ ಕೃಷಿ ಇಂದು ನಿನ್ನೆಯದ್ದಲ್ಲ, ಹಾಗೆ ನೋಡಿದ್ರೆ ಕೃಷಿ ಪದ್ಧತಿಯ ಹುಟ್ಟು ಸಾವಯವ ಆಧಾರವಾಗಿತ್ತು. ಆದ್ರೆ ಇಂದು ಕೃಷಿ ಚಟುವಟಿಕೆ, ಕೃತಕ ಗೊಬ್ಬರಗಳಿಲ್ಲದೆ ಸಾಗಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದೇ ವಿಪರ್ಯಾಸದ ಸಂಗತಿ. ಹಾಗಾದ್ರೆ ಸಾವಯವ ಕೃಷಿ ಎಂದರೇನು? ಮತ್ತು ರಾಸಾಯನಿಕ ಕೃಷಿ ಎಂದರೇನು? ರೈತರು ಈ ಎರಡರಲ್ಲಿ ಯಾವುದನ್ನ ಅಳವಡಿಸಿಕೊಂಡರೆ ಕೃಷಿಕ ಕೃಷಿಯಲ್ಲಿ ಸಾಧಿಸಬಹುದು ಎಂಬುದನ್ನ ತಿಳಿಯೋಣ.

ಹೆಚ್ಚು ಇಳುವರಿ ಬೇಕೆಂದರೆ ಬೆಳೆಗೆ ಸಮಗ್ರ ನೈಸರ್ಗಿಕ ಪೋಷಕಾಂಶ ಬೇಕು..!

ಬೆಳೆಗಳು ಆರೋಗ್ಯವಾಗಿರಬೇಕು ಎಂದರೆ, ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸಬೇಕಾಗುತ್ತದೆ. ಬೆಳೆ ಆರೋಗ್ಯವಾಗಿ ಬೆಳೆದರೆ ಮಾತ್ರ, ರೈತ ಬೆಳೆದ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಪೋಷಕಾಂಶಗಳನ್ನು ನೀಡುವ ಅವಸರದಲ್ಲಿ ನಮ್ಮ ರೈತರು ಕೃತಕ ಪೋಷಕಾಂಶಗಳಿಗೆ ಮೊರೆ ಹೋಗಿ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಬಳಸಿ, ಭೂಮಿ-ಬೆಳೆ ಎರಡನ್ನೂ ಹಾಳು ಮಾಡಿಕೊಳ್ತಾರೆ. ಕೃತಕ ಪೋಷಕಾಂಶಗಳನ್ನು ಬಿಟ್ಟರೆ ರೈತರಿಗೆ ಬೇರೆ ದಾರಿ ಇಲ್ಲವಾ ಎಂಬ ಪ್ರಶ್ನೆಗೆ ಎಲ್ಲ ರೈತರು ಉತ್ತರ ತಿಳಿದುಕೊಳ್ಳಬೇಕಾಗಿದೆ.

ಗುಲಾಬಿ ಬೆಳೆಯಲ್ಲಿ ಹೇಗೆ ಪಡೆಯುವುದು ಹೆಚ್ಚು ಇಳುವರಿ..?

ಸೌಂದರ್ಯದ ಪ್ರತೀಕ ಎಂದರೆ ಹೂಗಳು ಕಲರ್ ಫುಲ್ ಬಣ್ಣ,ಸುವಾಸನೆಗಳಿಂದ ಎಲ್ಲರ ಮೈಮನ ತಣಿಸುತ್ತವೆ.ಅದರಲ್ಲೂ ಹೂಗಳ ರಾಣಿ ಎಂದೇ ಖ್ಯಾತಿ ಪಡೆದಿರುವ ಗುಲಾಬಿ ಹೂ ನೋಡುತ್ತಿದ್ದರೆ, ಈ ಸೌಂದರ್ಯಕ್ಕೆ ಮತ್ಯಾವುದೂ ಸಾಟಿಯೇ ಇಲ್ಲ ಎನಿಸಿಬಿಡುತ್ತೆ.ಮಾರುಕಟ್ಟೆಯಲ್ಲಿಯೂ ಸದಾ ಬೇಡಿಕೆಯಲ್ಲಿರುವ ಗುಲಾಬಿಹೂ, ಸಾಕಷ್ಟು ಅಲಂಕಾರಿಕ ಜಾಗದಲ್ಲಿ ಬಳಸಲಾಗುತ್ತದೆ.

6 ತಿಂಗಳ ಕಬ್ಬು 12 ತಿಂಗಳ ಕಬ್ಬಿಗೆ ಸೆಡ್ಡು..! ಹೇಗೆ ಗೊತ್ತಾ?

ಕಬ್ಬು ಬೆಳೆಯುವಾಗ, ವರ್ಷ ತುಂಬಿದರೂ ಬೆಳೆಯ ಬೆಳವಣಿಗೆ ಹೇಳಿಕೊಳ್ಳುವಂತಿರಲ್ಲ. ಆದ್ರೆ ಕೆಲ ಕಬ್ಬು ಬೆಳೆ ಬರಿ 6 ತಿಂಗಳು ತಲಪುವಷ್ಟರಲ್ಲಿ ದಷ್ಟಪುಷ್ಟ ದೇಹ, ಉತ್ತಮ ಗಣಿಕೆ, ಮರಿಗಳನ್ನ ಹೊಂದಿರುತ್ತದೆ. ಇಂತಹ ಬದಲಾವಣೆಗೆ ನೇರ ಕಾರಣ ಕೃಷಿಕರೇ ಆಗಿರುತ್ತಾರೆ ಎಂಬುವುದನ್ನ ಇಲ್ಲೊಬ್ಬರು ಸಾಬೀತು ಪಡಿಸಿದ್ದಾರೆ.

ಅಡಿಕೆ ತೋಟದಲ್ಲಿ ಹೆಚ್ಚುವರಿ ಇಳುವರಿ ಪಡೆಯಲು ಪಂಚ ರಹಸ್ಯಗಳು..!

ತುರುವೇಕೆರೆ ತಾಲ್ಲೂಕಿನ ಕಾಚಿಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ನಟರಾಜ್ ರವರ ಅಡಿಕೆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದೆವು. ಅವರು ಒಮ್ಮೆ ಮಾತ್ರ ತಮ್ಮ ಅಡಿಕೆ ತೋಟಕ್ಕೆ ರೈತರ ಸಂಜೀವಿನಿಯಾದ ಡಾ. ಸಾಯಿಲ್ ಅರೇಕಾ ಸ್ಪೆಷಲ್ ಜೈವಿಕ ಗೊಬ್ಬರವನ್ನು ಕೊಟ್ಟಿದ್ದರು. ಅವರೇ ಹೇಳಿದಂತೆ ತೋಟ ಈಗ ಚೆನ್ನಾಗಿದೆ ಮತ್ತು ಈ ಬಾರಿ ಒಳ್ಳೆಯ ಇಳುವರಿಯೂ ಬಂದಿದೆ.

ನೆಮಟೋಡ್ (ಜಂತು ಹುಳ) ಬೆಳೆಗೆ ಎಷ್ಟು ಮಾರಕ ಗೊತ್ತೆ?

ನೆಮಟೊಡ್ ಇದೊಂದು ಗ್ರೀಕ್ ಭಾಷೆಯ ಪದ. ದಾರದಂತೆ ಕಂಡುಬರುವುದರಿಂದ ಇದನ್ನ ನೆಮಟೋಡ್ ಅಥವಾ ಜಂತು ಹುಳ ಎಂದು ಕರೆಯಲಾಗುತ್ತದೆ. ಇದು ಕಣ್ಣಿಗೆ ಕಾಣದಿರುವ ಸೂಕ್ಷ್ಮಾಣು ಜೀವಿಯಾಗಿದ್ದು, ಗಿಡದಲ್ಲಿನ ಪೋಷಕಾಂಶಗಳನ್ನ ಹೀರಿಕೊಳ್ಳಲು ನೇರವಾಗಿ ಬೇರುಗಳಿಗೆ ಮತ್ತು ಗಿಡದ ಮೆಲ್ಭಾಗವನ್ನ ಬಾಧಿಸುವ ಸೂಕ್ಷ್ಮ ಜೀವಿ.

ಕಡಿಮೆ ಜಾಗದಲ್ಲಿ, ಟನ್ ಗಟ್ಟಲೇ ಚೆಂಡು ಹೂ ಇಳುವರಿ..!

ಅಲಂಕಾರ, ಮದುವೆ ಸಂಭ್ರಮ, ಹಬ್ಬ, ಜಾತ್ರಾ ಮಹೋತ್ಸವ… ಹೀಗೆ ಎಲ್ಲಾ ಕಾಲದಲ್ಲೂ ಸದಾ ಬೇಡಿಕೆಯಲ್ಲಿರುತ್ತದೆ ಚೆಂಡು ಹೂ. ಹೀಗಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಕಾರಣ, ಒಂದು ಕಡೆ ಖಾಸಗಿ ಕಂಪನಿಗಳು ರೈತರಿಗೆ ಖರ್ಚು ಕೊಟ್ಟು ಬೆಳೆಸಲು ಮುಂದಾದ್ರೆ, ಮತ್ತೊಂದು ಕಡೆ ರೈತರು ಹೆಚ್ಚು ಆದಾಯಗಳಿಸಲು ಚೆಂಡು ಹೂವನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಶೇಂಗಾ ಬೆಳೆಗಾರರು ಹೀಗೆ ಮಾಡಿದರೆ ಅಧಿಕ ಇಳುವರಿ..!

ವಿವಿಧ ರೀತಿಯ ಮಣ್ಣುಗಳಲ್ಲಿ ಬೆಳೆಯುವ ಪ್ರಧಾನ ಎಣ್ಣೆ ಕಾಳು ಬೆಳೆ ಅಂದರೆ ಶೇಂಗಾ ಬೆಳೆ. ಎಂತಹ ವಾತಾವರಣವಿದ್ದರೂ  ಎಲ್ಲವನ್ನು ಮೆಟ್ಟಿ ಬೆಳೆಯುತ್ತದೆ. ಬಡವರ ಬಾದಾಮಿ ಎಂದು ಕರೆಸಿಕೊಳ್ಳುವ ಶೇಂಗಾ ಬೆಳೆಯನ್ನು ವೈಜ್ಞಾನಿಕ ಕ್ರಮದಲ್ಲಿ ಬೆಳೆದರೆ, ಧಿಕ ಲಾಭವನ್ನು ಪಡೆಯಬಹುದಾಗಿದೆ.

ಸಾವಯವ ಕೃಷಿಗೆ ಅಸ್ತು… ಅಡಿಕೆ ಮತ್ತು ಬಾಳೆ ಬೆಳೆಗಳು ಮಸ್ತು..!

ಕೃಷಿಕ ಡಾಕ್ಷರಪ್ಪ ಅವರು ಬಿ.ಎಸ್.ಸಿ ಪಧವೀಧರ ಕೃಷಿಕರು. ರಾಸಾಯನಿಕದಿಂದ ಕೃಷಿ ಭೂಮಿಯ ಫಲವತ್ತತೆ ಹಾಳು ಮಾಡುವ ಬದಲು, ಸಾವಯವ ಕೃಷಿಯಲ್ಲಿ ಕೃಷಿ ಭೂಮಿಯನ್ನ ಉಳಿಸಿಕೊಳ್ಳೋಣ ಎಂದು ಆಲೋಚಿಸಿ, ಕಳೆದ ಎರಡು ವರ್ಷದಿಂದ ತಮ್ಮ ಬಾಳೆ ಮತ್ತು ಅಡಿಕೆ ಬೆಳೆಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಇಂತಹದೊಂದು ಬದಲಾವಣೆ ಕಂಡು ಬಂದಿದ್ದು, ಬೆಣ್ಣೆ ನಗರಿ ಎಂದೇ ಪ್ರಖ್ಯಾತಿ ಹೊಂದಿದ ದಾವಣಗೆರೆ ಜಿಲ್ಲೆಯಲ್ಲಿ.

ವರ್ಷದಿಂದ ವರ್ಷಕ್ಕೆ ಹೆಚ್ಚಾಯ್ತು ಕಬ್ಬು ಇಳುವರಿ…!

ರಾಜ್ಯದಲ್ಲಿ ಬೆಳೆಯಲಾಗುವ ಪ್ರಮುಖ ವಾಣಿಜ್ಯ ಬೆಳೆ ಅಂದರೆ ಕಬ್ಬು, ಕಬ್ಬು ಬೆಳೆಯನ್ನು ಬೆಳೆಯುವುದರಲ್ಲಿ ಎಲ್ಲಾ ರೈತರು ಯಶಸ್ವಿಯಾಗಿ ಬಿಡಲ್ಲ. ಕಬ್ಬು ಬೆಳೆಗೆ ಕಾಡುವ ರೋಗ, ಕೀಟ ಬಾಧೆಗಳಿಂದ ರೈತರು ಹೈರಾಣಾಗಿ ಹೋಗುತ್ತಾರೆ. ಸರಿಯಾದ ಇಳುವರಿ ರೈತರ ಕೈ ಸೇರುವುದು ವಿರಳವಾಗಿ ಬಿಡುತ್ತದೆ. ಹೀಗಿರುವಾಗ ರೈತರು ರಾಸಾಯನಿಕ ಸ್ಪ್ರೇಗಳು ಹಾಗೂ ಇನ್ನಿತರ ರಾಸಾಯನಿಕ ಗೊಬ್ಬರಗಳಿಗೆ ಮೊರೆ ಹೋಗಿ ರೋಗ, ಕೀಟ ಬಾಧೆಯನ್ನು ತಡೆಯುವ ಅವಸರದಲ್ಲಿ, ಬೆಳೆಗಳಿಗೆ ಉಚಿತವಾಗಿ ಮತ್ತಷ್ಟು ರೋಗಗಳನ್ನು ತಂದೊಡ್ಡಿಕೊಳ್ತಾರೆ. ಆದರೆ ಇಲ್ಲೊಬ್ಬ ರೈತರು ಮಾತ್ರ, ತಮ್ಮ ಕಬ್ಬು ಬೆಳೆಯಲ್ಲಿ ಸತತ 3 ವರ್ಷದಿಂದ ಅಧಿಕ ಇಳುವರಿಯನ್ನು ಪಡೆಯುತ್ತಾ ಬಂದಿದ್ದಾರೆ. 

ಮೂರು ಬೆಳೆಯಿಂದ ನೂರು ವರ್ಷ ಆಯಸ್ಸು ಹೆಚ್ಚಾಯಿತು..!

ಚಿಕ್ಕ ವಯಸ್ಸಿನ ಅಡಿಕೆ ಬೆಳೆ, ಮುಪ್ಪಿಗೂ ಮುನ್ನವೇ ಹಳದಿಯಾಗಿ ಅನಾರೋಗ್ಯದ ಸಮಸ್ಯೆ ಎದುರಿಸಿತ್ತು. ಕಾರಣ ಕೃಷಿಕರು ಅಡಿಕೆಗೆ ನೀಡಿದ ರಾಸಾಯನಿಕ ಗೊಬ್ಬರವೆಂಬ ಪಾಷಾಣ. ಹೀಗಾಗಿ ಕೃಷಿಕ, ಹೇಗಾದ್ರು ಮಾಡಿ ಅಡಿಕೆ ಬೆಳೆ ಉಳಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಸಾವಯವ ಕೃಷಿ ಅಳವಡಿಸಿಕೊಳ್ಳಲು ಶುರು ಮಾಡಿದ್ರು.

ಸಮಗ್ರ-ಸುಸ್ಥಿರ-ಸಾವಯವ ಅಭಿಯಾನ

"1 ತೆಂಗಿನ ಮರಕ್ಕೆ 250 ಕಾಯಿಗಳು ಮತ್ತು  1 ಅಡಿಕೆ ಮರಕ್ಕೆ 3 ಕೆ.ಜಿ ಒಣ ಅಡಿಕೆ ಇಳುವರಿ ಅಭಿಯಾನ" ದ ಅಂಗವಾಗಿ ಮೈಕ್ರೋಬಿ ಸಂಸ್ಥೆಯ ಸಾಯಿಲ್ ಡಾಕ್ಟರ್ ಶಿಲ್ಪ ಮತ್ತು ಪ್ರತಿನಿಧಿ ಶ್ರೀನಿವಾಸ್ ಅವರು ತುರುವೇಕೆರೆ ತಾಲೂಕಿನ ನೇರಲಕಟ್ಟೆ ಗೊಲ್ಲರಹಟ್ಟಿಗೆ ಭೇಟಿ ನೀಡಿದ್ದರು.

ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ ಭೂಮಿಗೂ, ಬೆಳೆಗೂ ಕಂಟಕ..!

ಕೃಷಿಯಲ್ಲಿ ಸೋಲು ಹೆಚ್ಚು, ಗೆಲುವು ಕಡಿಮೆ ಎಂಬ ಮಾತಿದೆ. ಆದ್ರೆ ಮಾತಿಗೆ ಪ್ರತಿವಾದವೆಂದರೆ ಅವೈಜ್ಞಾನಿಕ ಕೃಷಿ ತೊರೆದು, ವೈಜ್ಞಾನಿಕ ಕೃಷಿ ಪದ್ಧತಿ ತಮ್ಮದಾಗಿಸಿಕೊಂಡರೆ, ಕೃಷಿಕರಿಗೆ ಜಯಗಳಿಸುವುದು ಸುಲಭವಾಗುತ್ತದೆ ಎಂದು ಸಾಕಷ್ಟು ಸಾವಯವ ಕೃಷಿ ತಜ್ಞರು ಪ್ರತಿಪಾದಿಸುತ್ತಾರೆ. ಅದೆ ಮಾತಿನಂತೆ ಇಲ್ಲೊಬ್ಬ ಕೃಷಿಕ ಸಾವಯವ ಕೃಷಿಯ ಮಾಹಿತಿ ಪಡೆದು, ತಮ್ಮ ಆರು ಬೆಳೆಗಳಿಗೆ( ಈರುಳ್ಳಿ, ಹಲಸಂದಿ, ತೊಗರಿ, ರಾಗಿ, ಮೆಕ್ಕೆಜೋಳ, ಜೋಳ) ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ಸಾವಯವದಲ್ಲಿ ಯಶಸ್ಸು ಕಂಡ ಹಾಗಲಕಾಯಿ ಬೆಳೆಗಾರ

ಹಾಗಲಕಾಯಿಯ ರುಚಿ ಕಹಿಯಾಗಿದ್ದರೂ, ಆರೋಗ್ಯಕ್ಕೆ ಅಮೃತವಾಗಿದೆ. ಇಂತಹ ಬೆಳೆಯನ್ನ ಕೃಷಿಕರು ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಕೃಷಿಯಲ್ಲಿ ಬೆಳೆದರೆ ಎಲ್ಲರಿಗೂ ಹಿತ. ರೈತರಿಗೆ ಉತ್ತಮ ಇಳುವರಿ ಸಿಗುವುದರ ಜತೆಗೆ, ಜನ ಸಾಮಾನ್ಯರ ಆರೋಗ್ಯ ವೃದ್ಧಿಗೊಳ್ಳಲು ದಾರಿಯಾಗುತ್ತದೆ.

ತೆಂಗಿನ ತೋಟದಲ್ಲಿ ರೈತರಿಗೆ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ-ಸಾವಯವ ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲುನಾಚೆಗೌಡರ ಮಾರ್ಗದರ್ಶನ

ನಮ್ಮ ರಾಜ್ಯದವರೇ ಆದ, ಆದರೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಪ್ರಖ್ಯಾತಿ ಪಡೆದಿರುವ ಸಾವಯವ ಕೃಷಿತಜ್ಞರಾದ, ವಿಜ್ಞಾನಿ ಡಾ.ಕೆ.ಆರ್.ಹುಲ್ಲುನಾಚೆಗೌಡರು ಮತ್ತು ಡಾ. ವಿಕ್ರಮ್, ಸಾಯಿಲ್ ಡಾಕ್ಟರುಗಳಾದ ಚೇತನ್, ಶಿಲ್ಪ, ಹಾಸನ ಚೇತನ್, ಶ್ರೀನಿವಾಸ್ಗಿರೀಶ್ ತಂಡದೊಂದಿಗೆ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ರಾಯಸಂದ್ರ ಗ್ರಾಮದ ಸತೀಶ್ ಎಂಬುವರ ತೋಟದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ತಾಲೂಕಿನ ಸುಮಾರು 30 ರೈತರು ಈ ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ ಪಾಲ್ಗೊಂಡರು.

ಅಡಿಕೆ ತೋಟದಲ್ಲಿ ರೈತರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ-ಡಾ.ಕೆ.ಆರ್.ಹುಲ್ಲುನಾಚೆಗೌಡರ ಸಾರಥ್ಯ

ವಿಷಮುಕ್ತ ಭೂಮಿ, ವಿಷಮುಕ್ತ ಆಹಾರ, ವಿಷಮುಕ್ತ ಗಾಳಿ ಮತ್ತು ವಿಷಮುಕ್ತ ನೀರು ಎಂಬ ಸಂಕಲ್ಪದೊಂದಿಗೆ ಡಾ. ಸಾಯಿಲ್ ಖ್ಯಾತಿಯ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯು  ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಕೆಲಸಮಾಡುತ್ತಿದೆ ಎಂದು ಪ್ರಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಹುಲ್ಲುನಾಚೆಗೌಡರು ತಿಳಿಸಿದರು.

MNC ಉದ್ಯೋಗಿ ಸಾವಯವದಲ್ಲಿ ಯಶಸ್ಸುಗಳಿಸಲು ಮಾಡಿದ್ದೇನು ಗೊತ್ತಾ?

ಬಾಳೆ ಬೆಳೆ ಬೆಳೆಯುವ ಮೊದಲು, ನಿರ್ವಹಣಾ ಕ್ರಮಗಳನ್ನ ಅರಿತು ಬೆಳೆಯಲು ಮುಂದಾದ್ರೆ, ಬೆಳೆ ನಿರೀಕ್ಷೆಗಿಂತ ಹೆಚ್ಚು ಇಳುವರಿ ನೀಡುವುದಕ್ಕೆ ಮುಂದಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೃಷಿಕ ವಿಜಯಕುಮಾರ ಅವರು, ತಮ್ಮ ಬಾಳೆ ಬೆಳೆಗೆ ವೈಜ್ಞಾನಿಕ ನಿರ್ವಹಣಾ ಕ್ರಮಗಳನ್ನ ಪಾಲಿಸಿದ್ದರಿಂದ, ಬೆಳೆ ಇಂದು ಗೊನೆ ತೂಗುವ ಹಂತದಲ್ಲಿಯೂ ಸಹಿತ ಹಸಿರುತನವನ್ನ ಕಳೆದುಕೊಂಡಿಲ್ಲ.

ಸೂರ್ಯಕಾಂತಿಯಲ್ಲಿ ಸಮೃದ್ಧ ಕಾಳು, ಸಂತೃಪ್ತಿಯಾಯಿತು ರೈತನ ಬಾಳು..!

ಸೂರ್ಯಕಾಂತಿ ಬೆಳೆ, ಅದ್ಭುತ ಗುಣಗಳನ್ನ ಹೊಂದಿರುವ ಕಾರಣ, ಹೆಚ್ಚು ಹೆಚ್ಚು ಮೌಲ್ಯವರ್ಧನೆಗಳಿಂದ ಇಂದು ಮಾರುಕಟ್ಟೆಯಲ್ಲಿ ಬೇಡಿಕೆಗಳಿಸಿಕೊಳ್ಳುತ್ತಿದೆ. ಇಂತಹ ಬೆಳೆಯನ್ನ ರೈತರು, ಬೆಳೆಯಲು ಮುಂದಾದಾಗಲೆಲ್ಲ, ಸೋಲು ಸಾಮಾನ್ಯವಾಗುತ್ತಿದೆ, ಗೆಲವು ವಿರಳವಾಗುತ್ತಿದೆ. ಏಕೆಂದರೆ ರೈತರು ಕೃಷಿ ಭೂಮಿಗೆ ಆಗುತ್ತಿರುವ ತೊಂದರೆಗಳನ್ನ ಲೆಕ್ಕಿಸದೆ, ರಾಸಾಯನಿಕ ಗೊಬ್ಬರವನ್ನ ಸುರಿಯುತ್ತಿದ್ದರೆ ಬೆಳೆಯಲ್ಲಿ ಬಲವಿಲ್ಲದೆ, ಸಾಕಷ್ಟು ಸಮಸ್ಯೆಗಳಿಗೆ ತುತ್ತಾಗುತ್ತಿದೆ.

         ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಸೊಣ್ಣ ಗ್ರಾಮದ ಕೃಷಿಕ ಕೊಟ್ರೇಶ್ ಅವರು, ತಮ್ಮ ಸೂರ್ಯಕಾಂತಿ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ, ಸಾವಯವ ಕೃಷಿ ಪದ್ಧತಿ ಅನುಸರಿಸಿಕೊಂಡಿದ್ದರಿಂದ ಬೆಳೆ ಇಂದು ಕಾಳುಗಳನ್ನ ಹೊತ್ತು ರೈತನಿಗೆ ಉತ್ತಮ ಇಳುವರಿಯ ವಿಶ್ವಾಸ ನೀಡುತ್ತಿದೆ. ಸಾವಯವ ಕೃಷಿಯಲ್ಲಿ ಹೇಗೆ ನಿರ್ವಹಣೆ ಮಾಡಿಕೊಂಡರು ಎಂಬುವುದು ಇಲ್ಲಿ ಅತ್ಯಂತ ಮುಖ್ಯ. ಕೃಷಿಕ ಕೊಟ್ರೇಶ್ ಅವರು, ಹಿಂದೆ ಅಲಸಂದಿ  ಬೆಳೆ ಬೆಳೆದಿದ್ದರು. ಆ ಬೆಳೆ ಕಟಾವಾದ ನಂತರ ತ್ಯಾಜ್ಯವನ್ನ ಸುಡದೆ,  ಭೂಮಿಯಲ್ಲೇ ಬಿಟ್ಟು ಉಳುಮೆ ಮಾಡಿದರು.

 ಸೂರ್ಯಕಾಂತಿಗೆ ಬೀಜೋಪಚಾರ:

 ಭೂ ಸಿದ್ಧತೆಯಾದ ನಂತರ ಕೃಷಿಕ ಬೀಜಗಳನ್ನ ನೇರವಾಗಿ ಬಿತ್ತಲಿಲ್ಲ, ಬದಲಿಗೆ ಆರೋಗ್ಯಕರ ಬೆಳವಣಿಗೆಗಾಗಿ ಬೀಜೋಪಚಾರ ಕ್ರಮ ಕೈಗೊಂಡರು. ಆನಂತರ ಸೂರ್ಯಕಾಂತಿ ಬೀಜಗಳನ್ನ ಬಿತ್ತಲು ಮುಂದಾದ್ರು. ಇದರಿಂದ ಬಿಳಿ ಬೇರುಗಳು ಅಭಿವೃದ್ಧಿಯಾದವು, ಎರೆಹುಳುಗಳ ಸಂತತಿ ಅಭಿವೃದ್ಧಿಯಾಯಿತು, ಮಣ್ಣು ಸಡಿಲವಾಯಿತು.

  ಬೆಳೆಗೆ ಪೋಷಕಾಂಶ:

 ಬೆಳೆಗೆ ಪೋಷಕಾಂಶ ನೀಡಲು ಕೃಷಿಕ ರಾಸಾಯನಿಕ ಗೊಬ್ಬರದ ಸಹವಾಸಕ್ಕೆ ಹೋಗದೆಸಾವಯವ ಕೃಷಿಯ ಮೂಲಕ ಸಮಗ್ರ ಪೋಷಕಾಂಶಗಳನ್ನ ಒದಗಿಸಿದ್ರು. ಇದರಿಂದ ಬೆಳೆ ಬಲಗೊಂಡು, ಸಮೃದ್ಧವಾಗಿ ಕಾಳುಗಳನ್ನ ಹೊತ್ತು ಕೃಷಿಕನ ನೆಮ್ಮದಿಗೆ ಕಾರಣವಾಗಿದೆ.

            ಒಟ್ಟಿನಲ್ಲಿ ಕೃಷಿಕ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದರ ಫಲವಾಗಿ, ಅಂದುಕೊಂಡ ಇಳುವರಿ ಪಡೆಯಲು ಸಾಧ್ಯವಾಯಿತು

 

ವರದಿ: ಶ್ವೇತಾ ಕಲಕಣಿ

 

 ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://www.youtube.com/watch?v=1mmi_EscQE8

ಈ ಕೃಷಿಕ ಬೆಳೆದ ಸೇವಂತಿಗೆ ಮತ್ತು ಗುಲಾಬಿಗೆ ಫುಲ್ ಡಿಮ್ಯಾಂಡ್..!

ಹಬ್ಬ, ಪೂಜೆ, ಸಾಂಪ್ರದಾಯಿಕ ಕಾರ್ಯಕ್ರಮ, ಯಾವುದೇ ಅಲಂಕಾರವಾಗಿರಲಿ ಹೂವಿಲ್ಲದೆ ಪರಿಪೂರ್ಣತೆ ಪಡೆಯುವುದಿಲ್ಲ. ಹಾಗಾಗಿ ಹೂಗಳಿಗೆ ಸರ್ವೇಸಾಮಾನ್ಯವಾಗಿ ಹೆಚ್ಚು ಬೇಡಿಕೆ ಇರುತ್ತದೆ. ಹೀಗಿರುವಾಗ ರೈತರು ತೋಟಗಾರಿಕೆ ಬೆಳೆ, ತರಕಾರಿ ಬೆಳೆ ಬೆಳೆಯುದರ ಜತೆಗೆ ಪುಷ್ಪ ಕೃಷಿಯತ್ತಲೂ ಸ್ವಲ್ಪ ಗಮನ ಹರಿಸಿದ್ರೆ ಹೆಚ್ಚು ಆದಾಯ ಪಡೆಯಲು ಸಾಧ್ಯ.

ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗಿಲ್ಲ, ಹೆಚ್ಚಾಯಿತು..!

ಕೃಷಿಕರು ಹೆಚ್ಚಿನ ಆದಾಯ ಪಡೆಯುವ ಸಲುವಾಗಿ, ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಯಲು ಮುಂದಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿಕರು ಬೆಳೆಗೆ ಉತ್ತಮ ಆಹಾರ, ಸರಿಯಾದ ಅಂತರ, ವೈಜ್ಞಾನಿಕ ನಿರ್ವಹಣೆ ಪದ್ಧತಿ ಅಳವಡಿಸಿಕೊಂಡರೆ ಕಬ್ಬು ಬೆಳೆಯಿಂದ ಉತ್ತಮ ಆದಾಯ ಪಡೆಯಲು ಸಾಧ್ಯ.

ರಾಷ್ಟ್ರೀಯ ಬೆಳೆ ವಿಮೆ-ಆಪತ್ಕಾಲದಲ್ಲಿ ಕಾಯುವ ಜಮೆ

ಭಾರತ ಒಂದು ಕೃಷಿ ಪ್ರಧಾನವಾದ ದೇಶ. ರೈತರ ವಿವಿಧ ಸಮಸ್ಯೆಗಳನ್ನು ಪರಿಹಾರ ಮಾಡಲು ಕೇಂದ್ರ ಸರ್ಕಾರವು ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ಜಾರಿಗೊಳಿಸಿದ ಮಹತ್ವದ ಯೋಜನೆಯೇ ರಾಷ್ಟ್ರೀಯ ಬೆಳೆ ವಿಮಾ ಯೋಜನೆ.

ರಾಸಾಯಿಕ ಗೊಬ್ಬರ-ಮನುಕುಲದ ಅಸ್ತಿತ್ವಕ್ಕೆ ಸಂಚಕಾರ..!

ಆಧುನಿಕ ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರ ಅವಿಭಾಜ್ಯ ಅಂಗವೇನೊ ಎಂಬಂತಹ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ರಾಸಾಯನಿಕ ಕೃಷಿ ಪದ್ಧತಿ ಅಳವಡಿಕೆಯಿಂದ ಕೃಷಿ ಭೂಮಿಯು ದಿನ ಕಳೆದಂತೆಲ್ಲ ಬರಡಾಗುತ್ತಿದೆ. ಭೂತಾಯಿ ತನ್ನ ಒಡಲಿನಟ್ಟುಕೊಂಡ ಸಕಲ ಜೈವಿಕ ಸಂಪತ್ತುಗಳು ರಾಸಾಯನಿಕದ ವಿಷದ ಜಂತುವಿನಿಂದ ನಶಿಸುತ್ತಿವೆ. ಹೀಗಾಗಿ ಕೃಷಿಕರು ಬೆವರು ಸುರಿಸಿ ಬೆಳೆದ ಬೆಳೆ ಸರಿಯಾಗಿ ಕೈಗೆ ಸಿಗುತ್ತಿಲ್ಲ.

ಬಡವರ ಬಾದಾಮಿ ಶೇಂಗಾಗೆ ಬೀಜೋಪಚಾರದ ಶ್ರೀಮಂತಿಕೆ..!

ಶೇಂಗಾ(ನೆಲಗಡಲೆ) ಬೀಜ ಬಿತ್ತುವ ಪೂರ್ವದಲ್ಲಿ ಬೀಜಗಳನ್ನ ಬೀಜೋಪಚರಿಸಿ ಬಿತ್ತುವುದರಿಂದ ಬೀಜಗಳಿಗೆ ಹೆಚ್ಚಿನ ರಕ್ಷಣೆ ಒದಗುತ್ತದೆ. ಮಣ್ಣಿನಲ್ಲಿ ಅಪಕಾರಿ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ಅವು ಬೀಜಗಳನ್ನ ಸರಿಯಾಗಿ ಮೊಳಕೆ ಒಡೆಯಲು ಬಿಡದೆ ನಿಷ್ಕ್ರಿಯಗೊಳಿಸುತ್ತವೆ. ಇದರಿಂದ ಬಿತ್ತನೆಗೆ ಮಾಡಿದ್ದ ಖರ್ಚು, ಶ್ರಮ ಎಲ್ಲವೂ ವ್ಯರ್ಥವಾಗುತ್ತೆ. ಇದರಿಂದ ಪಾರಾಗಲು ಇರುವ ಶ್ರೇಷ್ಠ ಮಾರ್ಗವೇ ಬೀಜೋಪಚಾರ.

ಕಬ್ಬಿಗೆ ತಿಂಗಳು ಎಂಟು-ಸಾವಯವ ನಂಟು ನೂರೆಂಟು..!

ಬರಿ 8 ತಿಂಗಳ ಕಬ್ಬು ಬೆಳೆ, ವರ್ಷದ ಕಬ್ಬಿನಂತೆ ಹೊಳೆಯುತ್ತಿರುವುದು ಸಾವಯವ ಕೃಷಿಯ ಚಮತ್ಕಾರಕ್ಕೆ ಹಿಡಿದ ಕನ್ನಡಿಯಾಗಿದೆ. ಇಂತಹದೊಂದು ಮೋಹಕ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆ ಬಿಳಗಿ ತಾಲೂಕಿನ ಕೃಷಿಕ ಮಲ್ಲು ಮೆಳ್ಳಗೆರಿ ಅವರ ತೋಟದಲ್ಲಿ.

ಬಾಳೆ ಹೀಗೆ ಬೆಳೆದರೆ ಬಂಗಾರ..! ಇಲ್ಲವಾದರೆ..?

ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಬಾಳೆ ಹಣ್ಣು, ಮಾರುಕಟ್ಟೆಯಲ್ಲಿಯೂ ಸದಾ ಬೇಡಿಕೆಯಲ್ಲಿರುತ್ತದೆ.  ಆರೋಗ್ಯಕ್ಕೆ ಉಪಕಾರಿಯಾಗಿರುವ ಮತ್ತು ಬೆಳೆಗಾರರಿಗೆ ವರದಾನವಾಗಿರುವ ಬಾಳೆ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆದರೆ, ರೈತರು ಹೆಚ್ಚಿನ ಲಾಭ ಪಡೆಯಬಹುದಾಗಿದೆ.

ಈ ಹಸುವಿನ ವೈಶಿಷ್ಟ್ಯಗಳನ್ನು ಕೇಳಿದರೆ ತಲೆ ‘ಗಿರ್’ ಅನ್ನುತ್ತೆ..!

ಕೃಷಿ ರಂಗದಲ್ಲಿ ರೈತರು ಬೆಳೆ ಬೆಳೆಯುವುದಕ್ಕಷ್ಟೇ ಸೀಮಿತವಾಗದೆಉಪಕಸಬುಗಳತ್ತಲೂ ಚಿತ್ತ ಹರಿಸಿದರೆ ಮಾತ್ರ ಯಶಸ್ಸುಗಳಿಸಲು ಸಾಧ್ಯಉಪ ಕಸುಬುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಹಲವಾರು ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಬೇಕಾಗುತ್ತದೆಆದರೆ ಬಹುತೇಕ ರೈತರ ಅಚ್ಚುಮೆಚ್ಚು ಎಂದರೆ ಹೈನುಗಾರಿಕೆಅದರಲ್ಲೂ ಗಿರ್ ತಳಿ ಹಸುಗಳನ್ನು ಸಾಕುವುದು ಪ್ರಾಶಸ್ತ್ಯವೂ ಹೌದುಪ್ರತಿಷ್ಠೆಯೂ ಹೌದು.

ಸಮಗ್ರ ಕೃಷಿ ಪದ್ಧತಿ-ಕೃಷಿಕರ ಪಾಲಿಗೆ ವರದಾನ

ಸಮಗ್ರ ಬೆಳೆ ಬೆಳೆಯುವುದರಿಂದ ರೈತರಿಗೆ ಸಾಕಷ್ಟು ಅನುಕೂಲಗಳಿವೆ. ಹಲವು ಬೆಳೆ ಬೆಳೆಯುವುದರಿಂದ, ಒಂದು ಬೆಳೆಯಲ್ಲಿ ನಷ್ಟವಾದರೂ, ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಮತ್ತೊಂದೆಡೆ ನಿರಂತರ ಆದಾಯಕ್ಕೂ ಕಾರಣವಾಗುತ್ತದೆ.

 ಇನ್ನು ಕಡಿಮೆ ಭೂಮಿ ಹೊಂದಿರುವ ರೈತರು, ಇಷ್ಟು ಭೂಮಿಯಲ್ಲಿ ವಿವಿಧ ಬೆಳೆ ಬೆಳೆಯುವುದರಿಂದ ಹೆಚ್ಚಿನ ಇಳುವರಿ ಸಿಗುವುದಿಲ್ಲ ಎಂದು ಭಾವಿಸಿರುತ್ತಾರೆ. ಆದ್ರೆ ಅಂತರ ಬೆಳೆ ಬೆಳೆದಾಗಲೇ ಇನ್ನು ಹೆಚ್ಚು ಇಳುವರಿ ಪಡೆಯಬಹುದು ಎಂಬುದು ಸತ್ಯ.

 ಸಮಗ್ರ ಬೆಳೆ ನಿರ್ವಹಣೆ:

 ಸಾವಯವ ಕೃಷಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಮಾಡಿದರೆ, ರೈತರಿಗೆ ಹೆಚ್ಚು ಲಾಭ. ಯಾಕಂದ್ರೆ ಇಲ್ಲಿ ಖರ್ಚು ಕಡಿಮೆಯಾಗುತ್ತೆ, ರೋಗ ಮತ್ತು ಕೀಟ ಬಾಧೆ ನಿಯಂತ್ರಣದಲ್ಲಿರುತ್ತದೆ. ಅಷ್ಟೆ ಅಲ್ಲ ಸಮಗ್ರ ಪೋಷಕಾಂಶಗಳು, ಬೆಳೆಗಳಿಗೆ ಸರಳವಾಗಿ ದೊರೆಯುತ್ತದೆ. ಭೂಮಿ ಮತ್ತಷ್ಟು ಫಲವತ್ತಾಗುತ್ತದೆ.

 

ಕೀಟ ಮತ್ತು ರೋಗ ಬಾಧೆ:

ಸಾವಯವ ಕೃಷಿಯಲ್ಲಿ ಕೀಟ ಮತ್ತು ರೋಗ ಬಾಧೆಯನ್ನ ಕಡಿಮೆ ಖರ್ಚಿನಲ್ಲಿ ನಿಯಂತ್ರಿಸಬಹುದು. ಇದರಿಂದ ಕೃಷಿ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುವುದಿಲ್ಲ. ಜತೆಗೆ ಬೆಳೆಗಳ ರೋಗ ನಿರೋಧಕ ಶಕ್ತಿಗೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹೀಗಾಗಿ ಸರಳವಾಗಿ ಸಾವಯವ ಕೃಷಿಯಲ್ಲಿ ಸಮಗ್ರ ಬೆಳೆಗಳನ್ನ ಕಾಪಾಡಿಕೊಳ್ಳಬಹುದು.

ಒಟ್ಟಾರೆಯಾಗಿ ಕೃಷಿಯಲ್ಲಿ ಕೃಷಿಕರು, ಏಕ ಬೆಳೆ ಪದ್ಧತಿಗೆ ದುಂಬಾಲು ಬೀಳದೆ, ಸಮಗ್ರ ಸಾವಯವ ಕೃಷಿಯತ್ತ  ತಮ್ಮ ಚಿತ್ತ ಹರಸಿದರೆ, ಆರ್ಥಿಕವಾಗಿ ಸದೃಢರಾಗುವುದು ನಿಶ್ಚಿತ.

 ವರದಿ: ಶ್ವೇತಾ ಕಲಕಣಿ

 

 ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

 https://www.youtube.com/watch?v=glToEHYtTZA


ಹುರುಳಿ ಕಾಳು ತಿಂದವರಿಗೂ, ಬೆಳೆದವರಿಗೂ ಹಾರ್ಸ್ ಪವರ್...!

ಹುರುಳಿ ಕಾಳು ಬೆಳೆಯಿಂದ ಮನುಷ್ಯನ ಆರೋಗ್ಯಕ್ಕೆ ಏನೆಲ್ಲ ಲಾಭ..? ಹುರುಳಿಯಿಂದ ರೈತನಿಗೆ ಆಗುವ ಲಾಭವೆಷ್ಟು? ಯಾವ ವಿಧಾದಲ್ಲಿ ಹುರುಳಿಕಾಳು ಬೆಳೆದರೆ ರೈತನ ಶ್ರಮಕ್ಕೆ ತಕ್ಕ ಪ್ರತಿಫಲಸಿಗುತ್ತೆ? ಈ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.

ಹಸಿರೆಲೆ ಗೊಬ್ಬರ ಬೆಳೆಗಳ ಪ್ರಯೋಜನಗಳು

ಗೊಬ್ಬರವಾಗಿ ಬಳಸುವ ಬೆಳೆಗಳನ್ನು ಹಸಿರೆಲೆ ಗೊಬ್ಬರ ಎಂದು ಕರೆಯುತ್ತಾರೆ. ಇವುಗಳು ಹೇರಳವಾಗಿ ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ.

ಉಪಕಾರಿ ಸೂಕ್ಷ್ಮಜೀವಿಗಳ ಅದ್ಭುತ ಉಡುಗೊರೆಗಳು..!

ಮಣ್ಣು ಅತ್ಯಂತ ಸಂಕೀರ್ಣ ಪರಿಸರ ವ್ಯವಸ್ಥೆ ಮತ್ತು ಪರಿಸರ ಕೇಂದ್ರಿಯ ದೃಪ್ಟಿಕೋನದಿಂದ ಅತ್ಯಮೂಲ್ಯವಾದ ಸಂಪನ್ಮೂಲವಾಗಿದೆ. ಅದರ ಹಲವು ನಿರ್ಣಾಯಕ ಕಾರ್ಯಗಳಿಂದಾಗಿ ಮಣ್ಣು ನಿಸ್ಸಂದೇಹವಾಗಿ ನಮ್ಮ ಅತ್ಯಂತ ಅಗತ್ಯ ಮತ್ತು ಕಾರ್ಯತಂತ್ರದ ಸಂಪನ್ಮೂಲಗಳಲ್ಲಿ ಒಂದಾಗಿದೆ.

ಕಬ್ಬಿನಲ್ಲಿ ಕೆಂಪು ಕೊಳೆ ರೋಗದ ನಿಯಂತ್ರಣ ಕ್ರಮಗಳು..!

ಸಿಹಿಯ ಮೂಲ ಕಬ್ಬಾಗಿದ್ದು, ಈ ಬೆಳೆಗೆ ಕೆಂಪು ಕೊಳೆ ರೋಗದ ಭೀತಿ ಹೆಚ್ಚಾಗಿದೆ. ರೈತರು ಕಬ್ಬು ನಾಟಿ ಮಾಡಿದಾಗಿನಿಂದಲೇ, ಇಳುವರಿ ಮೇಲೆ ಇನ್ನಿಲ್ಲದ ಕನಸುಗಳನ್ನ ಹೊತ್ತಿರುತ್ತಾರೆ. ವಿಪರ್ಯಾಸವೇನು ಅಂದ್ರೆ, ರೈತರು ಅಳವಡಿಸಿಕೊಂಡಿರುವ ಅವೈಜ್ಞಾನಿಕ ಪದ್ಧತಿಯಾಗಿರಬಹುದು ಅಥವಾ ವಾತಾವರಣದ ವೈಪರೀತ್ಯದಿಂದ ಕಬ್ಬಿನಲ್ಲಿ ಕೆಂಪು ಕೊಳೆ ರೋಗ ಶುರುವಾಗಿಬಿಡುತ್ತದೆ. ಹಾಗಾದ್ರೆ ಈ ಕೆಂಪು ಕೊಳೆ ರೋಗವನ್ನು ರೈತರು ಹೇಗೆ ಗುರುತಿಸಬೇಕು? ಹೇಗೆ ನಿರ್ವಹಣೆ ಮಾಡಬೇಕು? ಎಂಬ ವಿಚಾರಗಳನ್ನು ಮೊದಲು ಅರಿಯಬೇಕಾಗಿದೆ.

ಗಾಡ್ ಪ್ಲ್ಯಾಂಟ್ ಗ್ಲಿರಿಸಿಡಿಯಾ-ಇದು ಬುದ್ಧಿವಂತರ ಐಡಿಯಾ

ವೈಜ್ಞಾನಿಕವಾಗಿ ಗ್ಲಿರಿಸಿಡಿಯಂ ಸ್ಪೆಸಿಯಂ ಎಂಬ ಹೆಸರಿನಿಂದ ಕರೆಸಿಕೊಳ್ಳುವ  ಗೊಬ್ಬರ ಗಿಡವಾದ  ಗ್ಲಿರಿಸಿಡಿಯಾದ  ಉಪಯೋಗಗಳು ಒಂದಲ್ಲ ಎರಡಲ್ಲ.  ನೈಸರ್ಗಿಕವಾಗಿ  ಭೂಮಿಗೆ ಸಾವಯವ ಗೊಬ್ಬರವನ್ನು  ಒದಗಿಸಿಕೊಟ್ಟು ಭೂತಾಯಿಯನ್ನು  ಸಮೃದ್ಧವಾಗಿಡುವುದರಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆಸದಾ ಕಾಲ ಹಚ್ಚ ಹಸಿರಾಗಿರುವ ಈ ಗಿಡ ಸಾಕಷ್ಟು  ಪೋಷಕಾಂಶವನ್ನು ಹೊಂದಿದ್ದು ಕೃತಕ ಗೊಬ್ಬರಗಳಿಗೆ ಸೆಡ್ಡು ಹೊಡೆದು ನಿಂತಿದೆ.

ಕಡಿಮೆ ಖರ್ಚಿನಲ್ಲಿ ಅಡಿಕೆಯಿಂದ ಹೆಚ್ಚು ಇಳುವರಿ ಪಡೆಯಲು ಹೀಗೆ ಮಾಡಿ..!

ಅಡಿಕೆ ಬೆಳೆ ಇದೊಂದು ವಾಣಿಜ್ಯ ಬೆಳೆ, ಕೃಷಿಕ ತನ್ನ ನಿರೀಕ್ಷೆಯಂತೆ ಹೆಚ್ಚು ಇಳುವರಿ ಪಡೆದರೆ ಆದಾಯಕ್ಕೆ ಯಾವುದೇ ಕೊರತೆಯಿಲ್ಲ. ಒಂದು ವೇಳೆ ಬೆಳೆ ಪೋಷಕಾಂಶದಿಂದ ವಂಚಿತವಾಗಿ ಅನಾರೋಗ್ಯಕ್ಕೆ ಡಾದ್ರೆ, ರೈತ ಹಾಕಿದ ಬಂಡವಾಳ ನೀರಿನಲ್ಲಿ ಹೋಮವಾಗುವುದು ಖಚಿತ.

1234567
|< ... 6 7>|
Home    |   About Us    |   Contact    |   
microbi.tv | Powered by Ocat Online Advertising Service in India