ಮುತ್ತು ಕೃಷಿ ಅಧಿಕ ಲಾಭದಾಯಕ. ಆದರೆ?
ಸಿಹಿ ನೀರಿನ ಕಪ್ಪೆ ಚಿಪ್ಪುಗಳಲ್ಲಿ ಮುತ್ತು ಕೃಷಿಯನ್ನು ಯಶಸ್ವಿ ಕೃಷಿ ಎಂದು ಭಾವಿಸಿರುವ ಸರಕಾರ, ಸಹಾಯಧನದ ಮೂಲಕ ಪ್ರೋತ್ಸಾಹವನ್ನು ಸಹ ನೀಡುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಹಾಯಧನದಡಿ ಸಿಹಿ ನೀರಿನ ಕಪ್ಪೆ ಚಿಪ್ಪುಗಳಲ್ಲಿ ಮುತ್ತು ಕೃಷಿಯನ್ನು ಸರ್ಕಾರ, ಮೀನುಗಾರಿಕೆ ಇಲಾಖೆ ಮೂಲಕ 2012-13ನೇ ಸಾಲಿನಲ್ಲಿ ಜಾರಿಗೊಳಿಸಿದೆ. ಮುತ್ತು ಕೃಷಿ ಆಯ್ದ ಜನರಿಗೆ ಮಾತ್ರ ಗೊತ್ತಾಗಿದ್ದು ನಿರೀಕ್ಷಿತ ಯಶಸು ಪಡೆದಿಲ್ಲ. ಆಭರಣಗಳಾಗಿ ಮಾತ್ರ ಮುತ್ತು ಬಳಕೆ ಆಗದೆ ಕಾಂತಿವರ್ಧಕ, ಔಷಧ, ಬಣ್ಣ ತಯಾರಿಕೆಗೂ ಬಳಸುತ್ತಿರುವುದರಿಂದ ಬೇಡಿಕೆ ಹೆಚ್ಚಿದೆ.
|
ಅಡಿಕೆ ತೋಟದಲ್ಲಿ ಹರಳು ಉದುರುವಿಕೆ ಸರ್ವೇ ಸಾಮಾನ್ಯ, ಆದರೆ ಇವರ ತೋಟದಲ್ಲಿ ಗೊನೆಗಳೇ ಉದುರುತ್ತೆ.!
ಸಾವಯವದಲ್ಲಿ ಕೃಷಿ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂಬುದಕ್ಕೆ ಸಾಕ್ಷಿ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಗೋಪಾರದೇವಳ್ಳಿ ಗ್ರಾಮದ ರೈತ ಬಾರೇಗೌಡ ಅವರು. ಅದರಲ್ಲೂ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡಿದರೆ ಇನ್ನೂ ಉತ್ತಮವಾದ ಇಳುವರಿ ಮತ್ತು ರೋಗಗಳ ವಿರುದ್ಧ ಹೋರಾಡುವ ಕ್ಷಮತೆ ಹೆಚ್ಚಿಸಲು ಸಹಾಯ ಮಾಡುತ್ತದೆ.
|
ಇಳುವರಿ ಹೆಚ್ಚಾಗಲು ಏನು ಮಾಡಬೇಕು..?
ಯಾವುದೇ ಬೆಳೆಯಾಗಲಿ ಮಣ್ಣು ಫಲವತ್ತಾಗಿದ್ದರೆ, ಫಸಲು ಉತ್ತಮವಾಗಿ ಬರುವುದರಲ್ಲಿ ಸಂದೇಹವೇ ಇಲ್ಲ. ಕೃಷಿ ಮಾಡುವವರು ಮಣ್ಣಿನ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಮಣ್ಣಿನ ಮತ್ತು ಕಳೆಗಳ ನಿರ್ವಹಣೆ ಸರಿಯಾಗಿ ಮಾಡುವುದು ಮುಖ್ಯ. ಕೃಷಿ ಮಣ್ಣು ಹಾಳಾಗುವುದಕ್ಕೆ ಕಾರಣ ರಾಸಾಯನಿಕಗಳ ಬಳಕೆ. ಇವು ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ನಾಶಮಾಡುತ್ತವೆ. ಸಾವಯವ ಕೃಷಿ ಇದಕ್ಕೆ ಪರಿಹಾರವಾಗಿದೆ.
|
ಯಾವುದೇ ಉಪಕರಣ ಇಲ್ಲದೇ, ನೀವೇ ಮಣ್ಣು ಪರೀಕ್ಷೆ ಮಾಡಿ..!
ಮಣ್ಣು ಸಕಲ ಸಂಪತ್ತುಗಳ ಆಗರ ಎನ್ನುತ್ತಾರೆ ಹಿರಿಯರು. ಮಣ್ಣು ಫಲವತ್ತಾದರೆ ರೈತ ಬೆಳೆಯುವ ಫಸಲು ಆರೋಗ್ಯಕರವಾಗಿರುತ್ತದೆ. ಕೃಷಿಯಲ್ಲಿ ಮಣ್ಣಿನ ಮಹತ್ವ ಮರೆತಿರುವ ಇಂದಿನ ರೈತರು ಬೆಳೆಗಳಿಗೆ ಕೃತಕವಾಗಿ ಪೋಷಕಾಂಶಗಳನ್ನು ಪೂರೈಸಲು ಹೋಗಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದರ ಲಾಭ ಪಡೆದುಕೊಳ್ಳುತ್ತಿರುವುದು ರಾಸಾಯನಿಕ ಗೊಬ್ಬರ ತಯಾರಿಕ ಕಂಪನಿಗಳು. ಮಣ್ಣಿನ ಫಲವತ್ತತೆ, ಪೋಷಕಾಂಶಗಳ ಪ್ರಮಾಣ ತಿಳಿಯಲು ಮಣ್ಣು ಪರೀಕ್ಷೆ ಮಾಡಿಸುವುದು ವೈಜ್ಞಾನಿಕ ಪದ್ಧತಿ. ಆದರೆ ಇದರ ಜೊತೆ ರೈತರು ತಮ್ಮ ಕೃಷಿ ಭೂಮಿಯ ಮಣ್ಣನ್ನು ಸ್ವತಃ ತಾವೇ ಪರೀಕ್ಷಿಸಿಕೊಳ್ಳಬಹುದು. ಮಣ್ಣಿನ ಗುಣಧರ್ಮಗಳನ್ನು ತಿಳಿದರೆ ಕೃಷಿ ಸರಳವಾಗುತ್ತದೆ.
|
ಲಾಭಕರ ಕರಿ ಮೆಣಸು ಬೆಳೆಯುವುದು ಹೇಗೆ?
ಭಾರತೀಯ ಉಪಖಂಡವು ಮಸಾಲೆಗಳ ನಾಡು ಎಂದೇ ಪ್ರಸಿದ್ಧವಾಗಿದೆ. ಅನೇಕ ಮಸಾಲೆ ಪದಾರ್ಥಗಳು ಭಾರತದಲ್ಲಿ ಉತ್ಪಾದನೆಯಾಗುತ್ತವೆ. ಅದರಲ್ಲಿ ಕರಿ ಮೆಣಸು ಕೂಡ ಒಂದು. ಇದು ಒಂದು ಬಹುವಾರ್ಷಿಕ ಬೆಳೆಯಾಗಿದೆ. ಭಾರತದ ಮಲಬಾರ್ ಕರಾವಳಿಗೆ ಸ್ಥಳೀಯವಾಗಿದೆ ಮತ್ತು ಇದು ಮಾನವನಿಗೆ ತಿಳಿದಿರುವ ಪ್ರಾಚೀನ ಮಸಾಲೆಗಳಲ್ಲಿ ಒಂದಾಗಿದೆ. ಇದನ್ನು ಪ್ರಪಂಚದಾದ್ಯಂತ ಮಸಾಲೆಯಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತದಲ್ಲಿ ಕಾಳು ಮೆಣಸಿನ ಪ್ರಮುಖ ಉತ್ಪಾದಕರು ದಕ್ಷಿಣದ ರಾಜ್ಯಗಳು - ಕರ್ನಾಟಕ, ಕೇರಳ ಮತ್ತು ತಮಿಳುನಾಡು. ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಣಸಿಗೆ ತುಂಬಾ ಬೇಡಿಕೆ ಇದೆ. ಹಾಗಾಗಿ ಇದೊಂದು ಉತ್ತಮ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದೆ.
|
ಪ್ರತಿಯೊಬ್ಬ ರೈತರೂ ಇದನ್ನು ಕಡ್ಡಾಯವಾಗಿ ಓದಲೇ ಬೇಕು…! ಇಲ್ಲವಾದರೆ..?
ದಾವಣಗೆರೆ ಜಿಲ್ಲೆಯ ಈ ರೈತರು ತಮ್ಮ ಅಡಿಕೆ ತೋಟದಲ್ಲಿ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾದ ಮಹದೇವಪ್ಪ ಅವರಿಂದ ಸಾವಯವ ಕೃಷಿ ಶಿಕ್ಷಣ ಪಡೆದರು. ಸಾವಯವ ಕೃಷಿಯಿಂದ ಆಗುವ ಲಾಭಗಳ ಬಗ್ಗೆ ರೈತ ಸುಭಾಷ್ ಗೌಡರವರು ಮಾತನಾಡಿ ಇತರ ರೈತರಿಗೆ ತಿಳುವಳಿಕೆ ನೀಡಿದರು.
|
ಸಾವಯವ ಅಡಿಕೆ ತೋಟದಲ್ಲಿ ಗುಂಪು ಬಾಳೆ: ಏನು ಲಾಭ?
ರಾಸಾಯನಿಕ ಕೃಷಿಯಲ್ಲಿ ಭೂಮಿ ಹಾಳಾಗುತ್ತದೆ. ಆದರೆ ಸಾವಯವ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು ಮತ್ತು ಆದಾಯ ಹೆಚ್ಚಿಸಿಕೊಳ್ಳಲು ಸುಲಭ. ಸಾವಯವ ಕೃಷಿಯ ಮತ್ತೊಂದು ಉಪಯೋಗ ಎಂದರೆ ಇದು ಸಮಗ್ರ ಕೃಷಿಯನ್ನು ಉತ್ತೇಜಿಸುತ್ತದೆ. ರಾಸಾಯನಿಕ ಕೃಷಿ ಏಕಬೆಳೆ ಪದ್ಧತಿಯನ್ನು ಅವಲಂಬಿಸಿರುವುದರಿಂದ ರೈತರ ಆದಾಯ ಹವಾಮಾನ ಮತ್ತು ಬೇಡಿಕೆಗೆ ಅವಲಂಬಿತವಾಗಿ ನಿರಂತರ ಆದಾಯ ಇಲ್ಲವಾಗಿದೆ. ಸಾವಯವ ಕೃಷಿಯನ್ನು ಅಳವಡಿಸಿಕೊಂಡು ವಿವಿಧ ರೀತಿಯಲ್ಲಿ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ.
|
ಉಪ ಕಸುಬು ಏಕೆ ಬೇಕು? ಏನೆಲ್ಲಾ ಲಾಭಗಳು? ಸಾವಯವ ಕೃಷಿ ತಜ್ಞರ ಅಮೂಲ್ಯ ಮಾಹಿತಿ
ಬಹುತೇಕ ರೈತರು ತಮ್ಮ ಕೃಷಿ ಆದಾಯದಿಂದ ಸಂತೃಪ್ತರಿಲ್ಲ. ಸರಿಯಾದ ಬೆಲೆ ಸಿಗದ ಕಾರಣ ರೈತರು ಪರದಾಡುವ ಪರಿಸ್ಥಿತಿ ಏರ್ಪಾಡಾಗಿದೆ. ರೈತರು ತಮ್ಮ ಬಳಿ ಇರುವ ಜಮೀನಿನಲ್ಲೇ ಆದಾಯ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು? ಸಮಗ್ರ ಕೃಷಿ ಅಳವಡಿಸಿಕೊಳ್ಳುವುದರಿಂದ ಏನು ಲಾಭ? ಉಪಕಸುಬಿನಿಂದ ಲಾಭ ಹೇಗೆ ಮಾಡಬಹುದು? ನೋಡೋಣ ಬನ್ನಿ.
|
ಟೊಮ್ಯಾಟೋಗೆ ಬೀಜೋಪಚಾರ ಮಾಡಿದ ರೈತನ ಅದ್ಭುತ ಅನುಭವ
ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ನಾವು ಆರಿಸುವ ಬೀಜ ಮತ್ತು ಅದರ ಆರೋಗ್ಯ ತುಂಬಾ ಮುಖ್ಯ. ಬೀಜಗಳಿಗೆ ರಕ್ಷಕ ಎನಿಸಿಕೊಳ್ಳುವ ಬೀಜೋಪಚಾರ ಮಾಡುವುದರಿಂದ ಬೀಜಗಳ ಮೊಳಕೆ ಪ್ರಮಾಣ ಹೆಚ್ಚಿಸಬಹುದು. ಸಾವಯವ ಪದ್ಧತಿಯಲ್ಲಿ ಬೀಜೋಪಚಾರ ಮಾಡುವುದರಿಂದ ಬಿಳಿಬೇರುಗಳ ಬೆಳವಣಿಗೆ ಉತ್ತಮವಾಗುತ್ತದೆ. ರೋಗಬಾಧೆಯ ವಿರುದ್ಧ ರಕ್ಷಣೆ ನೀಡಿ, ಸಸಿಗಳಿಗೆ ಪೋಷಕಾಂಶ ದೊರೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
|
ಇಲ್ಲಿ ಹಲವಾರು ಕೃಷಿಕರು ಸಾವಿರ, 10 ಸಾವಿರ ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ
ಕರ್ನಾಟಕದ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು ಈಗ ವಿದೇಶಗಳಲ್ಲೂ ಸಾವಯವ ಕಂಪನ್ನು ಪಸರಿಸುತ್ತಿದ್ದಾರೆ. ರಾಜ್ಯದಾದ್ಯಂತ ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಮುಖಾಂತರ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಲು ಮಾರ್ಗ ತೋರಿದ ಡಾ.ಕೆ.ಆರ್.ಹುಲ್ಲುನಾಚೆಗೌಡರು, ಈಗ ಕೀನ್ಯಾದಲ್ಲಿನ ತೋಟವೊಂದಕ್ಕೆ ಭೇಟಿ ನೀಡಿ, ಅಲ್ಲಿರುವ ಮಣ್ಣು, ಕೃಷಿ ಪದ್ಧತಿ ಬಗ್ಗೆ ಮಾಹಿತಿ ನೀಡಿದ್ದಾರೆ.
|