ಆಲೂಗಡ್ಡೆ ಕೃಷಿ ಮಾಡುವ ಮುನ್ನ ತಿಳಿಯಬೇಕಾದ ವಿಷಯಗಳು

ತರಕಾರಿ ಬೆಳೆಗಳ ರಾಜ ಎಂದು ಕರೆಯುವ ಆಲೂಗಡ್ಡೆ ಉತ್ತಮ ಪೌಷ್ಠಿಕಾಂಶಗಳ ಆ. ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಲೂಗಡ್ಡೆ ತಿನ್ನುವುದು ಒಳ್ಳೆಯದು ಎನ್ನುತ್ತಾರೆ. ಸಾಕಷ್ಟು ತಿಂಡಿಗಳಲ್ಲಿ ಆಲೂಗಡ್ಡೆಯನ್ನು ಬಳಕೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೆ ಸದಾ ಬೇಡಿಕೆ ಇದ್ದೇ ಇರುತ್ತದೆ ಹಾಗಾಗಿ ರೈತರು ಆಲೂಗಡ್ಡೆಯನ್ನ ಬೆಳೆದರೆ ಉತ್ತಮ ಆದಾಯ ಪಡೆಯಬಹುದು.

ಕಲ್ಲಂಗಡಿ ಕೃಷಿ ಮಾಡುವವರಿಗೆ ಕಿವಿಮಾತು…!

ರಾಜ್ಯದ ಪ್ರಮುಖ ಬೇಸಿಗೆ ಬೆಳೆಯಾಗಿರುವ ಕಲ್ಲಂಗಡಿ ಕುಕುರ್ಬಿಟೇಸಿ ಕುಟುಂಕ್ಕೆ ಸೇರಿದ ಸಸ್ಯವಾಗಿರುತ್ತದೆಇದನ್ನು ಬಚ್ಚಲಗಾಯಿವಾಟರ್ಮೆಲನ್ ಎಂಬ ಹೆಸರುಗಳಿಂದ ಕರೆಯುತ್ತೇವೆಕಲ್ಲಂಗಡಿ ಬೇಸಿಗೆ ಕಾಲದ ಮುಖ್ಯವಾದ ಬೆಳೆ, ಕಾಯಿ ಹಣ್ಣಾಗುವಾಗ ಒಣಹವೆ ಇದ್ದರೆ ಸಕ್ಕರೆ ಅಂಶ ಹೆಚ್ಚಾಗುತ್ತದೆರಾಜ್ಯದ ಬಹುತೇಕ ಎಲ್ಲ ಪ್ರದೇಶಗಳಲ್ಲಿ  ಬೆಳೆಯನ್ನು ಬೆಳೆಯಬಹುದುಹಣ್ಣಿನಲ್ಲಿ ಪ್ರತಿಶತ 78ರಷ್ಟು ಭಾಗವು ಸೇವನೆಗೆ ಯೋಗ್ಯವಾಗಿದ್ದು ಪ್ರೋಟಿನ್ಕ್ಯಾಲ್ಸಿಯಂಫಾಸ್ಪರಸ್ಕಬ್ಬಿಣಕರೋಟಿನ್ಥಯಾಮಿನ್ರೈಬೋಪ್ಲೇವಿನ್ನಯಾಸಿನ್ ಹಾಗೂ ವಿಟಾಮಿನ್ ‘ಸಿ’ ಅಂಶವನ್ನು ಸಹ ಹೊಂದಿರುತ್ತದೆ.

ಉತ್ಕೃಷ್ಟ ಇಳುವರಿಗೆ ಸುಲಭ ತಂತ್ರ ಇಲ್ಲಿದೆ..!

       ಮಣ್ಣು ಇಲ್ಲದೇ ಜೀವಿಗಳು ಇಲ್ಲ. ಹಾಗಾಗಿಯೇ ಮಣ್ಣು ಸಕಲ ಸಂಪತ್ತಿನ ಆಗರ ಎನ್ನುವುದು. ಮಣ್ಣು ಫಲವತ್ತಾಗಿರದಿದ್ದರೆ ಯಾವುದೇ ಬೆಳೆಯಾಗಲಿ, ಯಾವುದೇ ಆಹಾರವಾಗಲಿ ಪೌಷ್ಠಿಕವಾಗಿರುವುದಿಲ್ಲ. ಮಣ್ಣಿನ ಫಲವತ್ತತೆ ಹಾಳಾಗಿದ್ದರ ಫಲವಾಗಿಯೇ ಇಂದು ಹಲವು ರೋಗ ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯಿಂದ ಮಣ್ಣು ಮತ್ತು ಆಹಾರ ಸತ್ವ ಕಳೆದುಕೊಂಡಿದೆ.

ಅತಿಯಾದ್ರೆ ಅಮೃತವೇ ವಿಷ. ಇನ್ನು ನೀರು ಏನಾಗುತ್ತೆ..?

ನೀರು ಸಕಲ ಜೀವರಾಶಿಗಳಿಗೆ ಅತ್ಯಗತ್ಯ. ಜತೆಗೆ ಕೃಷಿಯಲ್ಲಿಯೂ ಕೂಡ ನೀರಿನ ಪಾತ್ರ ಅತಿ ಮುಖ್ಯ. ನೀರು ಇಲ್ಲವೆಂದ್ರೆ ಬೆಳೆಯೇ ಇಲ್ಲ, ಹಾಗಂತ ನೀರನ್ನು ಹೆಚ್ಚಾಗಿ ಬಳಕೆ ಮಾಡುವಂತಿಲ್ಲ.ತಿಯಾದರೂ ಸಮಸ್ಯೆ, ಕಡಿಮೆಯಾದರೂ ಸಮಸ್ಯೆ. ಹಾಗಾಗಿ ಕೃಷಿ ಭೂಮಿಗೆ ನೀರನ್ನು ಹೇಗೆ ಬಳಸಬೇಕೆಂಬುದನ್ನು ರೈತರು ತಿಳಿಯಬೇಕು.

ಸಾವಯವ ಕೃಷಿ ಮೊದಲ ಯತ್ನದಲ್ಲೇ 100 ಟನ್ ಕಬ್ಬು ಇಳುವರಿ

ಸಾವಯವ ಕೃಷಿ ಮತ್ತು ವೈಜ್ಞಾನಿಕ ಕೃಷಿಯತ್ತ ರೈತರು ಚಿತ್ತ ಹರಿಸಿದರೆ ತಮ್ಮ ಭೂಮಿಯ ಆಯಸ್ಸನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ತಮ್ಮ ಕೃಷಿ ಭೂಮಿ ಮುಂದಿನ ಪೀಳಿಗೆಗೂ ಉಳಿಯಬೇಕೆಂದರೆ ರಾಸಾಯನಿಕಕ್ಕೆ ಮುಕ್ತಾಯ ಹೇಳುವುದು ಅನಿವಾರ್ಯವಾಗಿದೆ. ಅಷ್ಟೇ ಅಲ್ಲ ಮನುಷ್ಯನ ಆಯಸ್ಸು ಸಹಿತ ಕೃಷಿ ಪದ್ಧತಿಯ ಮೇಲೆಯೇ ಅವಲಂಬಿತವಾಗಿದೆ ಎಂದರೆ ತಪ್ಪಾಗದು. ಕಾರಣ ಮನುಷ್ಯ ಸೇವಿಸುವ ಆಹಾರ ಕೂಡ ವಿಷಯುಕ್ತವಾಗಿದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತಿಲ್ಲ. ಹೀಗಾಗಿ ಮನುಷ್ಯನ ಆರೋಗ್ಯ ಕೂಡ ದಿನೇ ದಿನೇ ಕ್ಷೀಣಿಸುತ್ತಿರುವುದು ವಿಪರ್ಯಾಸವೇ ಸರಿ.

ಇದು ZERO CHEMICAL ಸಾವಯವ ಕಬ್ಬು-160 ಟನ್ ಇಳುವರಿ..!

ಕಬ್ಬು ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಮಂಡ್ಯ, ಮೈಸೂರು, ಚಾಮರಾಜನಗರ, ಉತ್ತರ ಕರ್ನಾಟಕದ ಹಲವು ಭಾಗಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಎಷ್ಟೋ ರೈತರಿಗೆ ಕಬ್ಬು ಬೆಳೆಗೆ ನೀರು ನಿರ್ವಹಣೆ ಮಾಡುವುದೆ ದೊಡ್ಡ ತಲೆನೋವು. ಅದರ ಜತೆಗೆ ಗೊಣ್ಣೆ ಹುಳುವಿನ ತೊಂದರೆ, ಇನ್ನು ಹಲವಾರು ಸಮಸ್ಯೆಗಳನ್ನು ಅನುಭವಿಸಿ ಇಳುವರಿಯಲ್ಲಿ ಎಕರೆಗೆ ಕೇವಲ 30 ರಿಂದ 40 ಟನ್ ಪಡೆಯೋದು ಕಷ್ಟವಾಗಿರುತ್ತೆ. ಹೀಗಾಗಿ ನಿರೀಕ್ಷಿತ ಲಾಭ ಗಗನ ಕುಸುಮವಾಗಿದೆ.

ಸಾವಯವ ಕೃಷಿಯಲ್ಲಿ ಬದನೆ ಬೆಳೆ: ಏನು ಲಾಭ?

       ಮೈಸೂರು ಜಿಲ್ಲೆ HD ಕೋಟೆ ತಾಲ್ಲೂಕಿನ ಕಂಚಮಳ್ಳಿ ಗ್ರಾಮದ ರೈತ ಮಧು 5 ಎಕರೆ ಜಮೀನಿನ ಮಾಲೀಕರು. 1 ಎಕರೆಯಲ್ಲಿ ಬದನೆಕಾಯಿ ಬೆಳೆದಿದ್ದಾರೆ. ವಿಶೇಷವೆಂದರೆ ಇವರು ಸಾವಯವ ಕೃಷಿ ಪದ್ಧತಿಯಲ್ಲಿ ಬದನೆ ಬೆಳೆದಿದ್ದಾರೆ. ಯಾವುದೇ ರಾಸಾಯನಿಕಗಳನ್ನು ಬಳಸದೇ ನಾಟಿ ಹಸುವಿನ ಗಂಜಲ ಮತ್ತು ಬೇವಿನೆಣ್ಣೆ ಬಳಸಿ ಕೀಟಗಳ ನಿರ್ವಹಣೆ ಮಾಡುತ್ತಿದ್ದಾರೆ.

ಇವರ ಕಡಲೆ ಬೆಳೆ ಕಂಡು 200 ಎಕರೆಯಲ್ಲಿ ರೈತರು ಮಾಡಿದ್ದೇನು ಗೊತ್ತಾ..?

ಕಡಲೆ ದ್ವಿದಳ ಧಾನ್ಯಗಳ ಪೈಕಿ ಪ್ರಮುಖ ಬೆಳೆಯಾಗಿದ್ದು, ಉತ್ತಮ ತೇವಾಂಶದ ಪರಿಸ್ಥಿತಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕಡಲೆ ಬೆಳೆಯಲು ಸೂಕ್ತವಾದ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ನಿಂದ 30 ಡಿಗ್ರಿ ಸೆಲ್ಸಿಯಸ್. ಕಡಲೆ ಬೆಳೆಯನ್ನು ವಿವಿಧ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಆದರೆ ಮರಳು ಮಿಶ್ರಿತ ಕಲಸು ಮಣ್ಣು, ಜೇಡಿ ಮಣ್ಣು ಈ ಬೆಳೆಗೆ ಸೂಕ್ತವಾಗಿರುತ್ತೆ. ಮಣ್ಣಿನಲ್ಲಿ ರಸಸಾರ 5 ರಿಂದ 7ರಷ್ಟು ಇದ್ದರೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ.     

ಒಂದು ಮರದಿಂದ 400-500 ಎಳನೀರು: ಹೀಗೆ ಮಾಡಿದರೆ ನಿಮಗೂ ಸಾಧ್ಯ

       ಸಾವಯವ ಕೃಷಿಯನ್ನು ಅನುಸರಿಸಿದರೆ ಕೃಷಿಕರಿಗೆ ಹಲವು ಲಾಭಗಳಿವೆ. ಮಣ್ಣಿನ ಫಲವತ್ತತೆ ಹೆಚ್ಚುತ್ತೆ, ಅಧಿಕ ಇಳುವರಿ ಸಿಗುತ್ತೆ, ಹೀಗೆ ಇದರ ಪ್ರಯೋಜನಗಳು ಹಲವು. ಎಳನೀರು ವ್ಯಾಪಾರಿಯೂ ಆದ ಈ ಸಾವಯವ ಕೃಷಿಕರು, ತಮ್ಮ ತೆಂಗಿನ ತೋಟದಲ್ಲಿ ಬಹಳ ವ್ಯತ್ಯಾಸ ಕಂಡಿದ್ದಾರೆ. ರಾಸಾಯನಿಕ ಬಳಸುತ್ತಿದ್ದಾಗ ಇದ್ದ ಸಮಸ್ಯೆಗಳು ಕಾಣೆಯಾಗಿವೆ. ವರ್ಷಕ್ಕೆ ಒಂದು ಮರದಲ್ಲಿ 480 ರಿಂದ 500 ತೆಂಗಿನ ಕಾಯಿಯನ್ನು ಪಡೆಯುತ್ತಿದ್ದಾರೆ.

ತೆಂಗು, ಅಡಿಕೆ ಒಟ್ಟಿಗೆ ಬೆಳೆಯಬಹುದಾ?

       ಅಡಿಕೆ ಮತ್ತು ತೆಂಗು ಉತ್ತಮ ಆದಾಯ ಕೊಡುವ ಎರಡು ತೋಟಗಾರಿಕೆ ಬೆಳೆಗಳು. ಹಲವು ಕಡೆ ಇವನ್ನು ಒಟ್ಟಿಗೆ ಬೆಳೆಯುವುದನ್ನು ನೋಡಿದ್ದೇವೆ. ಇವೆರಡರಲ್ಲಿ ಒಂದನ್ನು ಮುಖ್ಯ ಬೆಳೆಯಾಗಿ, ಮತ್ತೊಂದನ್ನು ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತಾರೆ. ಹೀಗೆ ರೈತರು ಅಡಿಕೆ ಮತ್ತು ತೆಂಗು ಎರಡನ್ನೂ ಒಟ್ಟಿಗೆ ಬೆಳೆಯುವ ವಾಡಿಕೆ ಇದೆ. ಆದರೆ ಹೀಗೆ ಬೆಳೆಯಬಹುದಾ? ಇದರಿಂದ ಆಗುವ ಅಡ್ಡ ಪರಿಣಾಮಗಳೇನು? ತೆಂಗು, ಅಡಿಕೆ ಜೊತೆ ಯಾವ ಬೆಳೆಗಳನ್ನು ಬೆಳೆದರೆ ಉತ್ತಮ?

|<  1   2   3   4  5 ...>|
Home    |   About Us    |   Contact    |   
microbi.tv | Powered by Ocat Online Advertising Service in India