ಆರೋಗ್ಯಕರ ಅರಿಶಿನ ಬೆಳೆಯಲು ಸರಳ ಮಾರ್ಗ
ಅರಿಶಿನ ಕೇವಲ ಅಡುಗೆಗೆ ಮಾತ್ರ ಬಳಸುವಂತಹ ಪದಾರ್ಥವ ಲ್ಲ. ಸಾಕಷ್ಟು ರೋಗಗಳಿಗೆ ಅರಿಶಿನ ರಾಮಬಾಣವಾಗಿದೆ.ಅರಿಶಿನದಲ್ಲಿ ಕಂಡು ಬರುವ ಕರ್ಕುಮಿನ್ ಎಂಬ ಪೋಷಕಾಂಶವೇ ಈ ಹೆಗ್ಗಳಿಕೆಗೆ ಪ್ರಮುಖ ಕಾರಣ. ಅಷ್ಟೇ ಅಲ್ಲ ಸೌಂದರ್ಯವರ್ಧಕಗಳಲ್ಲಿಯೂ ಸಹಿತ ಅರಿಶಿನದ ಪ್ರಾಮುಖ್ಯತೆ ಹೆಚ್ಚು. ಅರಿಶಿನದಲ್ಲಿ ಕರ್ಕುಮಿನ್ ಪೋಷಕಾಂಶ ಹೆಚ್ಚು ಆದ್ಯತೆ ಪಡೆದಿರುವುದರಿಂದ ಅರಿಶಿನ ಖರೀದಿ ಮಾಡುವಾಗ, ಮಾರ್ಕೆಟ್ ನಲ್ಲಿ ಕರ್ಕುಮಿನ್ ಕಂಟೆಂಟ್ ಎಷ್ಟಿದೆ ಎಂಬುದನ್ನು ನೋಡಿ ಖರೀದಿಸುತ್ತಾರೆ. ಅದು ಅಗತ್ಯ ಪ್ರಮಾಣದಲ್ಲಿದ್ದರೆ ಮಾತ್ರ ಹೆಚ್ಚು ಬೇಡಿಕೆ. ಹೀಗಿರುವಾಗ ರೈತರು ಅರಿಶಿನವನ್ನು ಬೆಳೆಯುವಾಗ ಗುಣಮಟ್ಟದ ಬೆಳೆ ಬರುವ ಹಾಗೆ ಜೈವಿಕ ಗೊಬ್ಬರಗಳನ್ನು ಬಳಸಿ ಬೆಳೆದರೆ ಒಳ್ಳೆಯದು.
|
120 ಎಕರೆಯ ಕಡಲೆಯಲ್ಲಿ ನೋಡಿ ಚಮತ್ಕಾರ..!
ಕಡಲೆ ಬೆಳೆ ಉತ್ಪಾದನೆ ಹಾಗೂ ಬೆಳವಣಿಗೆಯಲ್ಲಿ ಭಾರತ ದೇಶ ಅಗ್ರಸ್ಥಾನದಲ್ಲಿದೆ. ಕಡಲೆ ಬೆಳೆಯಲ್ಲಿ ಉತ್ತಮ ಪೋಷಕಾಂಶಗಳಿರುವುದರಿಂದ ಹೆಚ್ಚು ಬಳಸಲಾಗುತ್ತದೆ. 3 ತಿಂಗಳ ಬೆಳೆಯಾಗಿರುವ ಕಡಲೆ ಬೆಳೆಯನ್ನು ವಿವಿಧ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದು. ಮರಳು ಮಿಶ್ರಿತ ಕಲಸು ಮಣ್ಣು, ಜೇಡಿ ಮಣ್ಣು ಇದಕ್ಕೆ ಸೂಕ್ತವಾಗಿರುತ್ತದೆ. ಮಣ್ಣಿನಲ್ಲಿ 5.5 ರಿಂದ 7.0 ರವರೆಗಿನ ಪಿಎಚ್ ಮಟ್ಟ ಸೂಕ್ತ. ತೇವಾಂಶ ಭರಿತವಾದ ಹವಾಗುಣದಲ್ಲಿ ಕಡಲೆ ಚೆನ್ನಾಗಿ ಬೆಳೆಯುತ್ತದೆ.
|
ಕಬ್ಬು ಬೆಳೆಗಾರರೇ… ನೀವು ಮಾಡಬೇಕಾದ ಮುಖ್ಯ ಕೆಲಸವಿದು..!
ಕಬ್ಬು ಬೆಳೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಸಿಹಿಯ ರಾಜಾ ಅಂದ್ರೆ ಅದು ಕಬ್ಬು ಬೆಳೆ. ಇನ್ನು ನಮ್ಮ ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳು ಎಂದರೆ, ಮಧ್ಯಪ್ರದೇಶ, ಗುಜರಾತ್, ಬಿಹಾರ್, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ.
|
ಈ 6 ಪರೀಕ್ಷೆ ಮಾಡಿದರೆ ನಿಮ್ಮ ತೋಟದ ಹಣೆಬರಹ ಗೊತ್ತಾಗುತ್ತೆ..!
ತೋಟಗಾರಿಕೆ ಬೆಳೆಯಾದ ಅಡಿಕೆ, ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಮಲೇಷ್ಯಾ ದೇಶದ ಮೂಲವಾದ ಅಡಿಕೆಗೆ ಹೆಚ್ಚಿನ ಬೇಡಿಕೆ. ಹೀಗಾಗಿ ಸಾಕಷ್ಟು ರೈತರು ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಮಲೆನಾಡು, ಕರಾವಳಿ ಸೇರಿದಂತೆ ಬಯಲು ಸೀಮೆಯಲ್ಲಿಯೂ ವ್ಯಾಪಕವಾಗಿ ಬೆಳೆಯುತ್ತಾರೆ.
|
ಕಬ್ಬಿನ ರವದಿ ಸುಡುತ್ತಿದ್ದೀರಾ? ಹಾಗಾದರೆ...!
ಕಬ್ಬು ಬೆಳೆಗಾರರು ಕಬ್ಬು ಕಟಾವು ಮಾಡಿದ ಮೇಲೆ ಉಳಿದ ಸೋಗು ಅಥವಾ ರವದಿ, ತ್ಯಾಜ್ಯಗಳನ್ನು ಸುಟ್ಟು ಹಾಕುತ್ತಾರೆ. ಇದು ಕೇವಲ ಕಬ್ಬಿಗಲ್ಲದೇ ಎಲ್ಲಾ ಬೆಳೆಗಳಲ್ಲೂ ಕಟಾವಿನ ನಂತರ ತ್ಯಾಜ್ಯಗಳನ್ನು ಸುಡುವುದು ಅಥವಾ ಜಮೀನಿನ ಹೊರಗೆ ಬಿಸಾಡುವುದು ಬಹುತೇಕ ರೈತರ ಹವ್ಯಾಸವಾಗಿದೆ. ಇದರಿಂದ ಗಾಳಿಯೂ ಮಲಿನವಾಗುತ್ತದೆ. ಆದರೆ ಇವುಗಳ ಉಪಯೋಗಗಳನ್ನು ತಿಳಿದರೆ ಬಹುಶಃ ಯಾವ ರೈತನೂ ತ್ಯಾಜ್ಯವನ್ನು ಸುಡುವುದಿಲ್ಲ. ಕೃಷಿಯಲ್ಲಿ ಯಾವುದೇ ತ್ಯಾಜ್ಯವಾಗಲಿ ಸರಿಯಾಗಿ ಉಪಯೋಗಿಸಿಕೊಂಡರೆ ಅನೇಕ ಲಾಭಗಳಿವೆ.
|
ಕಬ್ಬಿನಲ್ಲಿ ಸಕ್ಕರೆ ಅಂಶ ಕಂಡುಹಿಡಿಯಲು ಇಲ್ಲಿದೆ ಸಾಧನ?
ರಾಜ್ಯದ ಎಷ್ಟೋ ರೈತರು ಕಬ್ಬಿನ ಮೇಲೆ ಅವಲಂಬಿತರಾಗಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಬಹಳಷ್ಟು ರೈತರು ಕಬ್ಬನ್ನು ತಲತಲಾಂತರದಿಂದ ಬೆಳೆದುಕೊಂಡು ಬಂದಿದ್ದಾರೆ. ಹಾಗಾಗಿ ಇವರ ಆದಾಯ ಕಬ್ಬಿನ ಬೆಳೆ ಹಾಗೂ ಬೆಲೆಯ ಮೇಲೆ ನಿಂತಿದೆ. ಹೆಚ್ಚು ಟನ್ ಬೆಳೆದರೆ ಹೆಚ್ಚು ಆದಾಯ. ಕರ್ನಾಟಕದಲ್ಲಿ ಇಂದು ಟನ್ ಕಬ್ಬಿಗೆ 3000 ರೂ ಆಸುಪಾಸಿನಲ್ಲಿ ಬೆಲೆ ಇದೆ. ಆದರೆ ಕೇವಲ ಇಳುವರಿಯ ಮೇಲೆ ಬೆಲೆ ನಿಗದಿ ಮಾಡುವುದು ಎಷ್ಟು ಸರಿ? ಇದರ ಬದಲಿಗೆ ಗುಣಮಟ್ಟದ ಮೇಲೆ, ಸಕ್ಕರೆ ಪ್ರಮಾಣದ ಮೇಲೆ ಬೆಲೆ ನಿಗದಿ ಮಾಡಿದರೆ, ಉತ್ತಮ ಬೆಳೆಗೆ ಬೆಲೆ ಸಿಕ್ಕಿ ಕಡಿಮೆ ಇಳುವರಿ ಪಡೆದರೂ ಗುಣಮಟ್ಟದ ಮೇಲೆ ಉತ್ತಮ ಆದಾಯವನ್ನು ರೈತರು ಗಳಿಸಬಹುದು. ಸಕ್ಕರೆ ಅಂಶವನ್ನು ಅಳತೆ ಮಾಡಲು ಒಂದು ಸಾಧನ ಇದೆ. ಬ್ರಿಕ್ಸ್ ರಿಫ್ರಾಕ್ಟೋಮೀಟರ್(brix refractometer).
|
ಕೃಷಿ ಭೂಮಿಗೆ ನಾಟಿ ಔಷಧಿ ಕೆಲಸ ಮಾಡುತ್ತಾ?
ಕೋಟಿ ವಿದ್ಯೆಗಿಂತ ನಾಟಿ ವಿದ್ಯೆ ಮೇಲು. ಗುಡ್ಡಗಾಡುಗಳಲ್ಲಿ ಸಿಗುವ ಎಲೆ, ಬೇರು, ಕಾಯಿಗಳಿಂದ ಔಷಧಿ ತಯಾರಿಸಿ ನಾನಾ ವ್ಯಾಧಿಗಳಿಗೆ ಚಿಕಿತ್ಸೆ ನೀಡುತ್ತಾರೆ ನಾಟಿ ವೈದ್ಯರು. ನಾಟಿ ವೈದ್ಯ ಪದ್ಧತಿಗೆ ಶತಶತಮಾನಗಳ ಇತಿಹಾಸವಿದ್ದು, ಭವ್ಯ ಭಾರತದ ಶ್ರೇಷ್ಠ ಪರಂಪರೆಯ ಭಾಗವಾಗಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದು ಸಾವಿರಾರು ಜನರು ಈ ವೃತ್ತಿಯಲ್ಲಿದ್ದರೂ ಸಹಿತ ಎಲೆಮರೆಯ ಕಾಯಿಗಳಂತೆ ಕೆಲಸ ಮಾಡುತ್ತಿದ್ದಾರೆ.
|
ಅರಿಶಿನದಲ್ಲಿ ಕೊಳೆರೋಗ ಬಂದ್ರೆ ಕೆಮಿಕಲ್ ಬಳಸಬೇಡಿ..!
ಅರಿಶಿನ ಹಲವು ಮನೆಮದ್ದುಗಳ ಒಡೆಯ. ಅಡುಗೆಗೂ ಬೇಕು, ಔಷಧಿಗೂ ಬೇಕು, ಆರೋಗ್ಯಕ್ಕೂ ಅರಿಶಿನಬೇಕೇಬೇಕು. ನಮ್ಮ ಹೆಣ್ಣು ಮಕ್ಕಳು ಮನೆಯಲ್ಲಿಯೇ ಮಾಡಿಕೊಳ್ಳುವ ಚರ್ಮದ ಆರೈಕೆಯಲ್ಲಿ ಅರಿಶಿನದ್ದು ದೊಡ್ಡ ಪಾಲು. ಭಾರತೀಯರ ಮನೆಯಲ್ಲಿ ಅರಿಶಿನಕ್ಕೆ ಬಹಳ ಪ್ರಾಧಾನ್ಯತೆ ಇದೆ. ಮನೆ ಮದ್ದಿನ ರೂಪದಲ್ಲಿಯೂ ಅರಿಶಿನವನ್ನು ಬಳಸುತ್ತೇವೆ.
|
ಬಾಂಗ್ಲಾದೇಶದಲ್ಲಿ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಡಾ. ಸಾಯಿಲ್ ಜೈವಿಕ ಗೊಬ್ಬರಗಳ ಸದ್ದು
ಕಳೆದ 1 ದಶಕದಿಂದ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರು ಮತ್ತು ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಕೆ.ಆರ್.ಹುಲ್ಲುನಾಚೇಗೌಡರ ನೇತೃತ್ವದ ತಂಡ ರಾಜ್ಯದಾದ್ಯಂತ ಸಂಚರಿಸಿ ರೈತರ ಜಮೀನು, ತೋಟಗಳಿಗೆ ಭೇಟಿ ನೀಡಿ ಮಣ್ಣಿನ ಫಲವತ್ತತೆ, ಬೆಳೆಗಳ ಇಳುವರಿ ಹೆಚ್ಚಿಸುವ ಸಾವಯವ ಕೃಷಿಯ ಬಗ್ಗೆ ಪಾಠ ಮಾಡಿದೆ. ನಾಡಿನಾದ್ಯಂತ ಸಾವಯವ ಕೃಷಿಯ ಮಹತ್ವವನ್ನು ರೈತರಿಗೆ ತಿಳಿಸುತ್ತಾ, ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನು ಸಾವಯವ ಕೃಷಿಗೆ ಬದಲಾಯಿಸಿದ ಮೈಕ್ರೋಬಿ ಸಂಸ್ಥೆಯ ಉತ್ಪನ್ನವಾದ ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಯಶೋಗಾಥೆ ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿ ಪ್ರತಿಧ್ವನಿಸಿದೆ.
|
ಕೃಷಿ ಭೂಮಿಯಿಲ್ಲದಿದ್ದರು ಕೃಷಿಮಾಡುವ ವಿಧಾನದ ಬಗ್ಗೆ ನಿಮಗೆಷ್ಟು ಗೊತ್ತು?
ತಂತ್ರಜ್ಞಾನ, ವಿಜ್ಞಾನ, ಶಿಕ್ಷಣ ಸೇರಿದಂತೆ ಎಲ್ಲದರಲ್ಲೂ ನಾವು ಮುಂದೆ ಸಾಗುತ್ತಿರುವುದು ಹೆಮ್ಮೆಯ ವಿಚಾರವೇ. ಅದರಂತೆ ಕೃಷಿ ಕ್ಷೇತ್ರದಲ್ಲಿಯೂ ಒಂದಲ್ಲಾ ಒಂದು ಬೆಳವಣಿಗೆ, ಪ್ರಯೋಗ ನಿತ್ಯವೂ ಸಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗಿರುವ ಹೈಡ್ರೋಪೋನಿಕ್ಸ್ ಕೃಷಿ ಎಲ್ಲರ ಗಮನ ಸೆಳೆಯುತ್ತಿದೆ. ಕೃಷಿಗೆ ಮಣ್ಣೇ ಜೀವಾಳ. ಆದರೆ ಈ ಹೊಸ ಮಾದರಿಯ ಕೃಷಿಗೆ ಮಣ್ಣು ಬೇಡವೇ ಬೇಡ. ಮಣ್ಣಿಲ್ಲದೆ ಕೃಷಿ ಮಾಡಿ ಅಧಿಕ ಆದಾಯ ಗಳಿಸಬಹುದು. ಹೈಡ್ರೋಪೋನಿಕ್ಸ್ ತಂತ್ರಜ್ಞಾನವೆಂದು ಕರೆಯಲ್ಪಡುವ ಈ ವಿಧಾನವನ್ನು 1940ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ವ್ಯವಸ್ಥೆಯಲ್ಲಿ ಬೆಳೆಯುವ ಬೆಳವಣಿಗೆಗೆ ಬೇಕಾಗುವ ಪೋಷಕಾಂಶ ದ್ರಾವಣವನ್ನು ಅಭಿವೃದ್ಧಿಪಡಿಸಿದರು. ನಂತರ 1960 ಮತ್ತು 70ರ ದಶಕದಲ್ಲಿ ಕೆಲವೊಂದು ದೇಶಗಳಲ್ಲಿ ಹೈಡ್ರೋಪೋನಿಕ್ಸ್ ಫಾರ್ಮ್ ಗಳು ತಲೆ ಎತ್ತಿದವು.
|