Blog

ಈರುಳ್ಳಿ ಎಲ್ಲಾ ರೀತಿಯ ಅಡುಗೆ, ತಿಂಡಿ-ತಿನಿಸುಗಳಲ್ಲಿ ಬಳಸುವ ತರಕಾರಿಯಾಗಿದೆ. ನಮ್ಮ ದೇಶದಲ್ಲಂತೂ ಈರುಳ್ಳಿ ಇಲ್ಲದೆ ಅಡುಗೆಯೇ ಇಲ್ಲಾ ಎಂಬ ಮಟ್ಟಿಗೆ ಇದರ ಬಳಕೆಯಿದೆ. ಹಾಗಾಗಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ದೇಶಗಳಲ್ಲಿ ಚೀನಾ ನಂತರ 2ನೇ ಸ್ಥಾನದಲ್ಲಿ ಭಾರತ ಇದೆ. ನಮ್ಮ ದೇಶದಲ್ಲಿ ತುಂಬಾ ರೈತರು ಈರುಳ್ಳಿ ಬೆಳೆಯುತ್ತಾರೆ. ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕವು 3ನೇ ಸ್ಥಾನದಲ್ಲಿದೆ. ನಮ್ಮ ರಾಜ್ಯದಲ್ಲಿ ಈರುಳ್ಳಿಗೆ ತುಂಬಾ ಬೇಡಿಕೆಯಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಬಹುದು. ಇಲ್ಲೊಬ್ಬ ರೈತರು ಈರುಳ್ಳಿಯಲ್ಲಿ ಉತ್ತಮ ಇಳುವರಿಯನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

 

       ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಗ್ರಾಮದ ರೈತ ಶಿವಕುಮಾರ್ ಕೇವಲ ರಾಸಾಯನಿಕ ಪದ್ಧತಿಯಲ್ಲಿ ಕೃಷಿ ಮಾಡಿದವರು, ಸಾವಯವ ಕೃಷಿ ಪದ್ಧತಿ ಇವರಿಗೆ ಹೊಸದು. ಯೂಟ್ಯೂಬ್ ನಲ್ಲಿ ವಿಡೀಯೋ ನೋಡಿ ಸಾವಯವ ಕೃಷಿ ಪ್ರಯತ್ನಿಸಲು ಡಾ.ಸಾಯಿಲ್ ಬಳಸಲು ನಿರ್ಧರಿಸಿದ್ದಾರೆ. ಮಿಶ್ರಬೆಳೆಯಾಗಿ ಈರುಳ್ಳಿ ತೆ ಬಾಳೆ ಬೆಳೆದಿದ್ದಾರೆ. ಕೇವಲ 2 ತಿಂಗಳ ಈರುಳ್ಳಿ ಬೆಳೆಯಲ್ಲಿ ಕಾಯಿಗಳು ದಪ್ಪವಾಗಿ ಬಂದಿವೆ. ಬಾಳೆಯೂ ಕೂಡ ಉತ್ತಮವಾಗಿ ಬೆಳೆದಿದೆ ಎಂದು ಶಿವಕುಮಾರ್ ತೋರಿಸುತ್ತಾರೆ. ಇವರ ತೆಯಲ್ಲೇ ಈರುಳ್ಳಿ ಬಿತ್ತಿ ರಾಸಾಯನಿಕ ಕೃಷಿ ಪದ್ಧತಿ ಅನುಸರಿಸಿದವರ ತುಲನೆಯಲ್ಲಿ ಶಿವಕುಮಾರ್ ಅವರ ಬೆಳೆ ಅತ್ಯುತ್ತಮವಾಗಿದೆ ಎಂದು ಹೇಳಬಹುದು. ಕಾರಣ ರಾಸಾಯನಿಕ ಮುಕ್ತ ಮಣ್ಣು. ಡಾ.ಸಾಯಿಲ್ ಸ್ಲರಿ ಎನ್ರಿಚರ್ ಬಳಸುವುದರಿಂದ ಈರುಳ್ಳಿಯ ಗಾತ್ರ ಹೆಚ್ಚಾಗಿ ಇಳುವರಿ ಉತ್ತಮವಾಗುತ್ತದೆ.

 

ಈ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=-q9m1axXSmc&list=PLuN9VcGQAtK7KBr2njNxtZszprDKI0roO&index=2

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

Subscribe to Microbi Agrotech: https://youtube.com/c/MICROBIAGROTECH...

 

ಬರಹ: ರವಿಕುಮಾರ್

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #organicfarming  #sustainablefarming  #highyield  #healthycrop  #soilhealth  #fertileland  #soilfertility  #biofertilizers  #lowinvestment  #onion  #organiconion  #onioncultivation  



Blog




Home    |   About Us    |   Contact    |   
microbi.tv | Powered by Ocat Online Catalog - Web Promotion Service in India | Member of Ocat Platform