Blog

ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕರೆ, ರೈತ ಪಟ್ಟ ಶ್ರಮಕ್ಕೆ ಪ್ರತಿಫಲ ದೊರೆತಂತಾಗುತ್ತದೆ. ಹಾಗಿದ್ದಾಗ ಬೆಲೆ ಚೆನ್ನಾಗಿ ಸಿಗಬೇಕೆಂದರೆ ಮೊದಲು ಬೆಳೆ ಆರೋಗ್ಯವಾಗಿ ಬೆಳೆದು, ಹೆಚ್ಚಿನ ಇಳುವರಿಯನ್ನು ರೈತನಿಗೆ ನೀಡಬೇಕು. ಮಾರ್ಕೆಟ್ ನಲ್ಲಿ ಹೆಚ್ಚಿನ ಬೇಡಿಕೆಯಲ್ಲಿ ನಾವು ಬೆಳೆದ ಆಹಾರ ಮಾರಾಟ ಆಗಲು, ನೋಡುವುದಕ್ಕೆ ಆಕರ್ಷಕವಾಗಿ, ತಿನ್ನಲು ರುಚಿಯಾಗಿ ಇರಬೇಕಾಗುತ್ತದೆ.

 

ಈ ರೀತಿಯಾದ ಬೆಳೆಯನ್ನು ನಾವು ಪಡೆದುಕೊಳ್ಳಲು ಇರುವ ಮಾರ್ಗ ಸಾವಯವ ಕೃಷಿ ಪದ್ಧತಿ. ಸಾವಯವದಲ್ಲಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದು ತಿಳಿದಿರುವ ವಿಚಾರ.ಇನ್ನು ರೋಗಮುಕ್ತವಾಗಿ, ವಿಷಮುಕ್ತವಾಗಿ ಬೆಳೆ ಬೆಳೆಯಲು ಸಾವಯವ ಕೃಷಿ ಒಂದೇ ದಾರಿ.

 

ಇದಕ್ಕೆ ಉದಾಹರಣೆಯಂತೆ, ಸಾವಯವ ಕೃಷಿಕರಾದ ಲಿಂಗರಾಜ್ ಅವರು ತಮ್ಮ ತೋಟದಲ್ಲಿ ಅಡಿಕೆ, ಬಾಳೆ ಬೆಳೆಯುತ್ತಿದ್ದಾರೆ. ಬಾಳೆಯಲ್ಲಿ ಇಳುವರಿ ಪಡೆಯುತ್ತಿರುವ ಕೃಷಿಕ ಒಂದೊಂದು ಬಾಳೆ ಗೊನೆ 20 ಕೆ.ಜಿ ಯಷ್ಟು ಬರುತ್ತಿದ್ದು, ಮಾರುಕಟ್ಟೆಯಲ್ಲಿ ಕೆ.ಜಿ ಗೆ 50 ರೂ. ಲಾಭ ಪಡೆಯುತ್ತಿದ್ದಾರೆ. ಈ ಬಗ್ಗೆ ಕೃಷಿಕ ಲಿಂಗರಾಜು ಅವರು ಮೈಕ್ರೋಬಿ ಟಿವಿಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

https://www.youtube.com/watch?v=NNVLlPhM1iQ&t=244s

 

ತಮ್ಮ ಕೃಷಿ ಯಶಸ್ಸಿನ ಬಗ್ಗೆ ಮಾತನಾಡಿದ ಕೃಷಿಕ, ಹೇಗೆಲ್ಲಾ ಜೈವಿಕಗೊಬ್ಬರಗಳ ಬಳಕೆ ಮಾಡುತ್ತಿದ್ದಾರೆ ಎಂಬುದನ್ನು ನೋಡಿದ್ದೀರ. ನೀವೂ ಕೂಡ ಹೀಗೆ ಕೃಷಿಯನ್ನು ಮಾಡಿದರೆ ಉತ್ತಮ ಲಾಭ ಪಡೆಯಬಹುದು.

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

ಬರಹ: ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Powered by Ocat Online Catalog - Web Promotion Service in India | Member of Ocat Platform