About Us

ನಮ್ಮ ಭಾರತ ದೇಶ ಬದನೆ ಬೆಳೆಯಲ್ಲಿ 2ನೇ ಸ್ಥಾನವನ್ನು ಹೊಂದಿದೆ. ಆದರೆ ಬದನೆಯಲ್ಲಿ ಹೆಚ್ಚಾಗಿ ಕಾಡುವ ಕಾಯಿಕೊರಕ ಹುಳುವಿನಿಂದ ಬದನೆ ಬೆಳೆ ನಾಶವಾಗುತ್ತಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ಕೃಷಿಕರು ಹೈರಾಣಾಗಿ ಹೋಗುತ್ತಿದ್ದಾರೆ. ಇವುಗಳ ನಿಯಂತ್ರಣಕ್ಕೆ ರೈತರು ಬಳಸುತ್ತಿರುವ ರಾಸಾಯನಿಕ ಸ್ಪ್ರೇಗಳಿಂದ ಹುಳುಗಳ ತಡೆಗಟ್ಟುವಿಕೆಯ ಬದಲು ಬೆಳೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕೃಷಿ ಭೂಮಿಯನ್ನು ದಿನೇದಿನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳು, ರಾಸಾಯನಿಕ ಸ್ಪ್ರೇಗಳು, ಮಣ್ಣಿನ ಆರೋಗ್ಯ, ಮನುಷ್ಯನ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿರುವುದು ನಿಮ್ಮಗೆಲ್ಲಾ ತಿಳಿದಿರುವ ವಿಚಾರ.

 

ಇನ್ನು ರಾಸಾಯನಿಕಗಳ ಬಳಕೆ ಇಲ್ಲದೆಯೆ ಹುಳುಗಳ ನಿಯಂತ್ರಣ ಹೇಗೆ ಎಂಬುದಾದರೆ, ಪುರಾತನ ಕಾಲದಿಂದ ಸಾವಯವ ಕೃಷಿಗೆ, ನೈಸರ್ಗಿಕ ಕೃಷಿಗೆ ಅದರದೆ ಆದ ಪ್ರಾಮುಖ್ಯತೆ, ವೈಜ್ಞಾನಿಕತೆ ಅಡಗಿದೆ. ಇತ್ತೀಚಿನ ದಿನಗಳಲ್ಲಿ ಅದು ಕಾಣುವುದು ವಿರಳವಾಗಿದೆ. ರಾಸಾಯನಿಕಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಈಗ ಮತ್ತೆ ಸಾವಯವ ಕೃಷಿಗೆ ಮರಳುವ ಅನಿವಾರ್ಯತೆಗಳು ಎದುರಾಗಿವೆ. ಅದೇ ರೀತಿಯಾಗಿ ಬದನೆಯಲ್ಲಿ ಕಾಡುವ ಕಾಯಿಕೊರಕ ರೋಗಕ್ಕೆ ಸಾವಯವ ಕೃಷಿಯಲ್ಲಿ ಸುಲಭ ನಿಯಂತ್ರಗಳಿವೆ.

 

ಸಾವಯವ ಕೃಷಿಯಲ್ಲಿ ಕಾಯಿಕೊರಕ ನಿಯಂತ್ರಣದ ಬಗ್ಗೆ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಾಯಿಲ್ ಡಾಕ್ಟರ್ ನೀಡಿದ್ದಾರೆ. ವೀಡಿಯೊ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

https://www.youtube.com/watch?v=--7Sh19mQyQ

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

ಬರಹ: ವನಿತಾ ಪರಸನ್ನವರ್

 

#brinjal  #brinjalfruitborer  #controlmeasures  #organicwaytocontrolpest  #bestfertilizerforvegetables  



About Us




Home    |   About Us    |   Contact    |   
microbi.tv | Powered by Ocat Business Promotion Service in India