Blog

ನಮ್ಮ ಭಾರತ ದೇಶ ಬದನೆ ಬೆಳೆಯಲ್ಲಿ 2ನೇ ಸ್ಥಾನವನ್ನು ಹೊಂದಿದೆ. ಆದರೆ ಬದನೆಯಲ್ಲಿ ಹೆಚ್ಚಾಗಿ ಕಾಡುವ ಕಾಯಿಕೊರಕ ಹುಳುವಿನಿಂದ ಬದನೆ ಬೆಳೆ ನಾಶವಾಗುತ್ತಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ಕೃಷಿಕರು ಹೈರಾಣಾಗಿ ಹೋಗುತ್ತಿದ್ದಾರೆ. ಇವುಗಳ ನಿಯಂತ್ರಣಕ್ಕೆ ರೈತರು ಬಳಸುತ್ತಿರುವ ರಾಸಾಯನಿಕ ಸ್ಪ್ರೇಗಳಿಂದ ಹುಳುಗಳ ತಡೆಗಟ್ಟುವಿಕೆಯ ಬದಲು ಬೆಳೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕೃಷಿ ಭೂಮಿಯನ್ನು ದಿನೇದಿನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳು, ರಾಸಾಯನಿಕ ಸ್ಪ್ರೇಗಳು, ಮಣ್ಣಿನ ಆರೋಗ್ಯ ಮನುಷ್ಯನ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿರುವುದು ನಿಗೆಲ್ಲಾ ತಿಳಿದಿರುವ ವಿಚಾರ.

ಇನ್ನು ರಾಸಾಯನಿಕಗಳ ಬಳಕೆ ಇಲ್ಲದೆಯೇ ಹುಳುಗಳ ನಿಯಂತ್ರಣ ಹೇಗೆ ಎಂಬುದಾದರೆ, ಹಿಂದಿನ ಕಾಲದಿಂದ ಸಾವಯವ ಕೃಷಿಗೆ, ನೈಸರ್ಗಿಕ ಕೃಷಿಗೆ, ಅದರದೆ ಆದ ಪ್ರಾಮುಖ್ಯತೆ, ವೈಜ್ಞಾನಿಕತೆ ಅಡಗಿದೆ. ಇತ್ತೀಚಿನ ದಿನಗಳಲ್ಲಿ ಅದು ಕಾಣುವುದು ವಿರಳವಾಗಿದೆ. ರಾಸಾಯನಿಕಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಈಗ ಮತ್ತೆ ಸಾವಯವ ಕೃಷಿ ಮರುಕಳಿಸುವ ಅನಿವಾರ್ಯತೆಗಳು ಎದುರಾಗಿದೆ. ಅದೇ ರೀತಿಯಾಗಿ ಬದನೆಯಲ್ಲಿ ಕಾಡುವ ಕಾಯಿಕೊರಕ ರೋಗಕ್ಕೆ ಸಾವಯವ ಕೃಷಿಯಲ್ಲಿ ಸುಲಭ ಪರಿಹಾರಗಳಿವೆ.

ಸಾವಯವ ಕೃಷಿಯಲ್ಲಿ ಕಾಯಿ ಕೊರಕ ನಿಯಂತ್ರಣದ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ  

https://www.youtube.com/watch?v=--7Sh19mQyQ

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

ಬರಹ: ವನಿತಾ ಪರಸನ್ನವರ್

 

#brinjal  #brinjalfruitborer  #controlmeasures  #organicwaytocontrolpest  #bestfertilizerforvegetables  



Blog




Home    |   About Us    |   Contact    |   
microbi.tv | Powered by Ocat Online Advertising Service in India