Blog

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೃಷಿಕರಾದ ಸಂಜಯ್ ಅವರು, ತಮ್ಮ ಅಡಿಕೆ ಬೆಳೆಗೆ ಹಿಂದೆ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ ಹಾಗೆಯೇ ರಾಸಾಯನಿಕ ಗೊಬ್ಬರ ಬಳಸಿ ನಿರ್ವಹಣೆ ಮಾಡುತ್ತಿದ್ದರು. ಹಾಗಾಗಿ ಬಿಟ್ಟು ಬಿಡದಂಗೆ ಹರಳು ಉದುರುವಿಕೆ ಸಮಸ್ಯೆ, ಹಿಡಿಮುಂಡಿಗೆ ರೋಗಗಳು ಆವರಿಸಿದ್ದವು. ಹೀಗಾಗಿ ರೋಗಗಳ ಸರಮಾಲೆಗಳಿಂದ ಅಡಿಕೆ ತೋಟವನ್ನ ಬಚಾವ್ ಮಾಡುವ ಸಲುವಾಗಿ ಕೃಷಿಕ ಸಾವಯವ ಕೃಷಿಯತ್ತ ಹೆಜ್ಜೆ ಹಾಕಿದ್ರು.

 

ಒಂದು ಗಿಡದಲ್ಲಿ 45 ಕೆ.ಜಿ ಅಡಿಕೆ ಹೇಗೆ ಸಾಧ್ಯ?

ಅಡಿಕೆ ಬೆಳೆಗೆ ಸೂಕ್ತ ಪೋಷಕಾಂಶ ದೊರೆಯದಿದ್ದಾಗ ಬೆಳೆ ರೋಗಗಳಿಗೆ ತುತ್ತಾಗುವುದು ಸರ್ವೇಸಾಮಾನ್ಯ. ಹಾಗೆಯೇ ಹಿಂದೆ ಕೃಷಿಕ ನೀಡಿದ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳನ್ನು ಅಡಿಕೆ ಬೆಳೆ ಸ್ವೀಕಾರ ಮಾಡಲು ಸಾಧ್ಯವಾಗಲಿಲ್ಲ. ಯಾಕಂದ್ರೆ ರಾಸಾಯನಿಕ ಗೊಬ್ಬರದಿಂದಾಗಿ ಕೊಟ್ಟಿಗೆ ಗೊಬ್ಬರ ಮತ್ತು ಕುರಿ ಗೊಬ್ಬರವು ವಿಷವಾಗಿತ್ತು. ಹೀಗಾಗಿ ಎರೆಹುಳುಗಳು ಜನ್ಮ ತಾಳದೆ ಮಣ್ಣು ಗಟ್ಟಿಯಾಗಿತ್ತು. ಇದರಿಂದ ಬೇರಿಗೆ ಸಿಗಬೇಕಾದ ಪೋಷಕಾಂಶ ಮತ್ತು ಗಾಳಿ ಲಭ್ಯವಾಗಿರಲಿಲ್ಲ.

ಹೀಗಾಗಿ ಕೃಷಿಕ ಡಾ.ಸಾಯಿಲ್ ಅರೇಕಾ ಸ್ಪೆಷಲ್ ಬಳಸುವ ಮೂಲಕ ಸಾವಯವ ಕೃಷಿಯಲ್ಲಿ ನಿರ್ವಹಣೆ ಮಾಡಲು ಮುಂದಾದ್ರು. ಇಲ್ಲಿ ಅಚ್ಚರಿಯ ವಿಚಾರ ಅಂದ್ರೆ, ಕೃಷಿಕ ನೀಡಿದ್ದು ಬರೀ ಒಂದೇ ಡೋಸ್. ಈ ಒಂದು ಡೋಸ್ ನಿಂದಾಗಿ ಇಂದು ಗಿಡಕ್ಕೆ 45 ಕೆ.ಜಿ ಗಿಂತ ಹೆಚ್ಚು ಅಡಿಕೆ ಇಳುವರಿ ಹೊತ್ತಿರುವುದು ಕೃಷಿಕನಿಗೆ ಸಂತಸ ಮೂಡಿಸಿದೆ.

 

ಸಾವಯವದಿಂದ ಬದಲಾವಣೆ:

ಸಾವಯವ ಕೃಷಿ ಅಳವಡಿಸಿಕೊಂಡಿದ್ದರಿಂದ ತೋಟದಲ್ಲಿ ಬಿದ್ದ ತ್ಯಾಜ್ಯಗಳು ಕಳಿತು, ಸಾವಯವ ಇಂಗಾಲವಾಗಿ ಬದಲಾಗಿದೆ. ಹಾಗೆಯೇ ಎರೆಹುಳುಗಳ ಸಂಖ್ಯೆ ಅಗಣಿತವಾಗಿದೆ. ಇಂತಹ ಬದಲಾವಣೆಯಿಂದಾಗಿ ಮಣ್ಣು ಮೃದುವಾಯಿತು, ಅಡಿಕೆ ಬೇರುಗಳು ಸರಿಯಾಗಿ ಉಸಿರಾಡಲು ಶುರುಮಾಡಿದ್ವು. ಜತೆಗೆ ಬೆಳೆಗೆ ಸೂಕ್ತ ಪೋಷಕಾಂಶ ದೊರೆಯುತ್ತಿದೆ.

 

ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/watch?v=1ISZ5Glf5iA&t=301s

 

 

#organicarecanut  #arecanut  #organicfarming  #organicagriculture  #HowfarmerearnsinLakhsinarecanut  #OrganicfarmingArecanut  #Howtogrowhealthyarecanut  #trees  #Whichfertilizerisbestforarecanut,  



Blog




Home    |   About Us    |   Contact    |   
microbi.tv | Ocat Search Engine Catalog Promotion Service in India | Powered by Adsin Technologies