Blog

ಮಣ್ಣಿನ ಫಲವತ್ತತೆ:

ಬಾಳೆ ಮತ್ತು ಅಡಿಕೆ ಬೆಳೆಗೆ ಸಾವಯವ ಕೃಷಿ ಪದ್ಧತಿ ಅನುಸರಿಸಿದ್ದರಿಂದ ಕೃಷಿ ಭೂಮಿಯಲ್ಲಿ ಜೈವಿಕ, ಭೌತಿಕ, ರಾಸಾಯನಿಕ ಗುಣಗಳು ಅಭಿವೃದ್ಧಿಯಾಗಿವೆ.

ಜೈವಿಕ ಗುಣ: ಮಣ್ಣಿನಲ್ಲಿ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳುಗಳು ನೆಲೆಯೂರಿರುವುದರಿಂದ ಕೃಷಿ ಭೂಮಿ ಮೃದುವಾಗಿದೆ. ಇದರಿಂದಾಗಿ ಮಣ್ಣಿನ ಆಳಕ್ಕೆ ನೀರು ಮತ್ತು ಗಾಳಿ, ಬೆಳಕು ಸರಾಗವಾಗಿ ಚಲಿಸುತ್ತಿವೆ. ಈ ಪ್ರಕ್ರಿಯೆಯಿಂದಾಗಿ ತೋಟದಲ್ಲಿ ಜೈವಿಕ ಗುಣ ಚೇತರಿಯಾಯಿತು.

ಭೌತಿಕ ಗುಣ: ಮಣ್ಣು ಮುಟ್ಟಿದರೆ ನಯವಾಗಿರುವುದರಿಂದ ಮಣ್ಣಿನ ರಚನೆ ಸುಧಾರಿಸಿದೆ. ಇದಷ್ಟೆ ಅಲ್ಲದೆ ಮಣ್ಣಿನಲ್ಲಿ ಪೋಷಕಾಂಶ ಸಮೃದ್ಧವಾಗಿದೆ. ಹೀಗಾಗಿ ಕೃಷಿಕನ ತೋಟದಲ್ಲಿ ಭೌತಿಕ ಗುಣವು ಸುಧಾರಿಸಿತು.

ರಾಸಾಯನಿಕ ಗುಣ: ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳುಗಳ ಚಟುವಟಿಕೆ ಕ್ರಿಯಾಶೀಲವಾಗಿದ್ದರಿಂದ ಮಣ್ಣಿನಲ್ಲಿ ಬಿದ್ದ ತ್ಯಾಜ್ಯ ಸಂಪೂರ್ಣವಾಗಿ ಜೈವಿಕ ವಿಘಟನೆಗೊಂಡಿದೆ. ಹೀಗಾಗಿ ತೋಟದಲ್ಲಿ ಸಾವಯವ ಇಂಗಾಲಕ್ಕೆ ಕೊರತೆನೆಯಿಲ್ಲ.

ರಸ ಸಾರ:

ಕೃಷಿ ಭೂಮಿ ಸರಿಸುಮಾರು 2.5 ರಿಂದ 7.5 ವರೆಗೆ ರಸ ಸಾರವನ್ನ ಹೊಂದಿದ್ದರೆ, ಆ ಒಂದು ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗೆ ಯಾವುದೇ ಆಹಾರದ ಕೊರತೆಯಾಗದೆ, ಬೆಳೆ ಆರೋಗ್ಯಕರವಾಗಿ ಬೆಳೆಯುತ್ತದೆ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ  ತೋಟದಲ್ಲಿ ಬೆಳೆಯುತ್ತಿರುವ ಬಾಳೆ ಬೆಳೆಯೇ ಸಾಕ್ಷಿ. ಹೌದು ಬೆಳೆಯ ಬೆಳೆವಣಿಗೆ ಹಂತ ಅಥವಾ ಕಟಾವಿನ ಹಂತ ತಲುಪುತ್ತಿದ್ದಂತೆ ಬೆಳೆಗೆ ಸಾಕಷ್ಟು ರೀತಿಯ ಅಪಾಯಕಾರಿ ರೋಗಗಳು ತಗಲುತ್ತವೆ. ಆದ್ರೆ ಈ ತೋಟ ಮಾತ್ರ ಹಚ್ಚ ಹಸಿರಾಗಿ ಗೊನೆಗಳನ್ನ ಹೊತ್ತು ಆರೋಗ್ಯದ ಸೂಚನೆ ನೀಡುತ್ತಿವೆ.

ವರದಿ: ಶ್ವೇತಾ ಕಲಕಣಿ


ಇನ್ನು ಹಚ್ಚಿನ ಮಾಹಿತಿಗಾಗಿ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/watch?v=vHG_oeXmMAU&t=65s

 

#DrSoilBanana  #OrganicBanana  #Bumperyieldinbanana  #howtodoorganicfarming  #organicbanana  #farminginKarnataka  #organicbananaripening  #organicbananafertilizer  #OrganicbananafarminginKannada  #organicarecanut  #arecanut  #organicfarming  #organicagriculture  #HowfarmerearnsinLakhsinarecanut  #OrganicfarmingArecanut  #Howtogrowhealthyarecanut  #trees  #Whichfertilizerisbestforarecanut  



Blog




Home    |   About Us    |   Contact    |   
microbi.tv | Ocat Search Engine Catalog Promotion Service in India | Powered by Adsin Technologies