ಎರೆಹುಳುಗಳಿಂದ ಎಷ್ಟೆಲ್ಲಾ ಲಾಭ ಸಿಗುತ್ತದೆ?

       ಎರೆಹುಳುಗಳ ಸಂಖ್ಯೆ ಒಂದು ಜಮೀನಿನ ಫಲವತ್ತತೆಯನ್ನು ತೋರಿಸುತ್ತದೆ. ಮಣ್ಣಿನ ಫಲವತ್ತತೆಯ ಸೂಚಕ ಎರೆಹುಳು ಎನ್ನಬಹುದು. ಹೇರಳವಾಗಿ ಎರೆಹುಳುಗಳು ಇವೆ ಎಂದರೆ ಮಣ್ಣಿನಲ್ಲಿ ಸಾವಯವ ತ್ಯಾಜ್ಯಗಳು ಹೇರಳವಾಗಿವೆ ಎಂದರ್ಥ. ಮೈಕ್ರೋಬಿ ಸಂಸ್ಥೆಯು ರೈತರಿಗೆ ಸಾವಯವ ಕೃಷಿಯ ಬಗ್ಗೆ ದಶಕದಿಂದ ತಿಳಿಸುತ್ತಾ ಬಂದಿದೆ. ರೈತರನ್ನು ಸಾವಯವದ ಕಡೆ ಹೋಗಲು ಪ್ರೇರೇಪಿಸುತ್ತಿದೆ. ಎರೆಹುಳುಗಳ ಜೊತೆ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವುದರಿಂದ ಮೈಕೋರೈಜಾದ ಅಭಿವೃದ್ಧಿಯಾಗುತ್ತದೆ. ಇದು ಬೆಳೆಗಳ ಬೇರಿಗೆ ಅಂಟಿ ಇನ್ನೂ ವಿಸ್ತಾರವಾಗಿ ಹರಡುತ್ತವೆ ಮತ್ತು ಸಸ್ಯಗಳಿಗೆ ಎಟುಕದ ಪೋಷಕಾಂಶಗಳನ್ನು ಸಸ್ಯಗಳ ಬೇರುಗಳಿಗೆ ರವಾನಿಸುತ್ತದೆ. ಬೇರುಗಳಿಗೆ ಹೆಲ್ಮೆಟ್ ರೀತಿ ಸುರಕ್ಷತೆ ನೀಡುತ್ತದೆ.

ಸಾವಯವ ಕೃಷಿಯ ಜೀವ ಈ ಜೈವಿಕ ಗೊಬ್ಬರಗಳು

       ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯು ಕೃಷಿ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವಿಷಯ. ರಾಸಾಯನಿಕ ಪದ್ಧತಿಯಿಂದ ಸಾವಯವ ಪದ್ಧತಿಯ ಕಡೆ ಬರಲು ಜನರು ಒಲವು ತೋರುತ್ತಿದ್ದಾರೆ. ವಿಷಮುಕ್ತ ಆಹಾರದ ಕಡೆ ಗ್ರಾಹಕರ ಬೇಡಿಕೆ ಹೆಚ್ಚಿರುವುದರಿಂದ ಮತ್ತು ಸಾವಯವ ಪದ್ಧತಿಯ ಕಡಿಮೆ ಖರ್ಚಿನ ಲಾಭಗಳಿಂದ ರೈತರು ಸಾವಯವದ ಕಡೆ ತಿರುಗುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರಗಳು ಅವಿಭಾಜ್ಯ ಅಂಗ ಮತ್ತು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ.

ಕಡಲೆ, ಜೋಳ ಬಿತ್ತುವ ಮುನ್ನ ಈ ವಿಚಾರ ತಿಳಿಯಿರಿ..!

ಬಿತ್ತಿದ ಬೀಜಗಳು ಸಸಿಯಾಗುತ್ತಲೇ ನಾನಾ ರೋಗಗಳಿಗೆ ತುತ್ತಾಗಿ ಸತ್ತು ಹೋಗುತ್ತವೆನ್ನೂ ಕೆಲವು ಬೀಜಗಳು ಮೊಳಕೆಯೊಡೆದು ಸಾಯುತ್ತವೆಮತ್ತೆ ಕೆಲವು ಸಂದರ್ಭದಲ್ಲಿ ಬೆಳೆದ ಬೆಳೆಗಳನ್ನು ರೋಗದಿಂದ ಉಳಿಸಿಕೊಳ್ಳಲು ಹತ್ತಾರು ಔಷಧಗಳನ್ನು ಸಿಂಪಡಿಸಬೇಕಾಗುತ್ತದೆ.

6 ವರ್ಷದ ಅಡಿಕೆಯಲ್ಲಿ ಇನ್ನೂ ಹೊಂಬಾಳೆ ಬಂದಿಲ್ಲ ಯಾಕೆ..?

 ಬೆಳೆ ಆರೋಗ್ಯವಾಗಿರಬೇಕೆಂದರೆ ಮೊದಲು ಕೃಷಿ ಭೂಮಿ ಆರೋಗ್ಯವಾಗಿ ಸಮಗ್ರ ಪೋಷಕಾಂಶಗಳಿಂದ ಕೂಡಿರಬೇಕು. ಹಾಗಿದ್ದಾಗ ಮಾತ್ರ ನಾವು ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಪಡೆಯೋಕೆ ಸಾಧ್ಯವಾಗುತ್ತೆ.

ರೋಗ-ರುಜಿನಗಳಿಲ್ಲದ ಬೆಳೆ ಬೆಳೆಯಬೇಕಾದರೆ ಹೀಗೆ ಮಾಡಿ…

       ವಿಜಯಪುರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ತಿಪ್ಪಾಪುರ ಗ್ರಾಮದ ರೈತ ಮುದ್ದಿ ನಿಂಗಪ್ಪ ತಮ್ಮ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಇಲ್ಲಿಯವರೆಗೆ ರಾಸಾಯನಿಕ ಬಳಸಿ ಕೃಷಿ ಮಾಡಿದ್ದ ಇವರು, ಸಾವಯವ ಕೃಷಿಯ ಫಲಿತಾಂಶ ನೋಡಿ ಬೆರಗಾಗಿದ್ದಾರೆ. ಹಾಗಾದರೆ ಇವರು ಅನುಸರಿಸಿರುವ ಕ್ರಮಗಳೇನು? ಇವರ ಅನುಭವವೇನು ತಿಳಿಯೋಣ.

ಸೇವಂತಿಗೆ ಸಸಿಗಳಿಗೆ ತಪ್ಪದೇ ಉಪಚರಿಸಿ, ಇಳುವರಿ ಹೆಚ್ಚುತ್ತೆ

ಕೃಷಿಯಲ್ಲಿ ಇಳುವರಿ ಉತ್ತಮವಾಗಿ ಬರಲು ಏನು ಮಾಡಬೇಕು? ಅಧಿಕ ಲಾಭ ಗಳಿಸಲು ಒಂದು ಪ್ರಮುಖ ಭಾಗ, ಆದರೆ ಎಷ್ಟೋ ರೈತರಿಗೆ ತಿಳಿಯದ ವಿಷಯ ಅಂದರೆ ಅದು ಬೀಜೋಪಚಾರ ಅಥವಾ seed treatment. ಹೂವಿನ ಬೆಳೆ ಅಥವಾ ಇನ್ಯಾವುದೇ ಬೆಳೆಯಾಗಲಿ ಬೀಜೋಪಚಾರ ಅತ್ಯವಶ್ಯಕ. ಬೀಜಗಳು ಮೊಳಕೆಯೊಡೆಯುವ ಪ್ರಮಾಣ ಮತ್ತು ಸಸಿಗಳ ಆರೋಗ್ಯ ವೃದ್ಧಿಸುತ್ತದೆ. ಏಕದಳ, ದ್ವಿದಳ ಮತ್ತು ಹಣ್ಣು-ತರಕಾರಿ ಬೆಳೆಗಳಿಗೆ ತಕ್ಕಂತೆ ವಿವಿಧ ಬೀಜೋಪಚಾರ ದ್ರವಗಳು ಸಾವಯವದಲ್ಲಿ ದೊರೆಯುತ್ತದೆ.

ಅಡಿಕೆ ಬೆಳೆಗಾರ ಬದಲಾದರೆ ತೋಟ ಬದಲಾಗಿ ಬಿಡುತ್ತಾ?

       ರೈತ ಬದಲಾದರೆ ತೋಟ ಬದಲಾಗುತ್ತಾ? ಬಹುತೇಕ ರೈತರಿಗೆ ಸರಿಯಾದ ಕೃಷಿ ಪದ್ಧತಿ ಮತ್ತು ತಂತ್ರಜ್ಞಾನದ ಅರಿವಿನ ಕೊರತೆಯಿಂದ ಕೃಷಿಯಲ್ಲಿ ತಪ್ಪು ಮಾಡುತ್ತಿದ್ದಾರೆ. ಇದರಿಂದ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಉತ್ತಮ ಬೆಳೆ ಬೆಳೆಯಲಾಗದೆ ನಷ್ಟಕ್ಕೆ ಸಿಲುಕುತ್ತಿದ್ದಾರೆ. ಹಾಗಾದರೆ ರೈತ ಹೇಗೆ ಬದಲಾಗಬೇಕು? ಇದರಿಂದ ಏನು ಲಾಭ?

ಕಬ್ಬಿನಲ್ಲಿ 10 ಕುಳೆ ಬೆಳೆಯಲು ಸಾಧ್ಯ..?

       ಕಬ್ಬಿನಲ್ಲಿ 3 ಕುಳೆ ಬೆಳೆ ತೆಗೆಯುವವರೇ ಕಡಿಮೆ, ಇಳುವರಿ ಕಡಿಮೆಯಾಗಿ ಆದಾಯ ಕಡಿಮೆಯಾಗುತ್ತದೆ ಎಂಬ ಲೆಕ್ಕಾಚಾರ. ಆದರೆ ಸಾವಯವ ಪದ್ಧತಿಯಲ್ಲಿ 10 ಕುಳೆ ಬೆಳೆ ಕೂಡ ತೆಗೆಯಬಹುದು. ನಿರ್ವಹಣೆ ಮತ್ತು ತಂತ್ರಜ್ಞಾನ ತಿಳಿದುಕೊಳ್ಳಬೇಕು ಅಷ್ಟೆ.

300 ಲೋಡ್ ಮಣ್ಣು, 3 ಎಕರೆ ಅಡಿಕೆ ತೋಟ ನಾಶ

       ಜಮೀನಿಗೆ ಮಣ್ಣು ಹೊಡೆಸುವುದರಿಂದ ಮಣ್ಣು ಫಲವತ್ತಾಗಿ, ಬೆಳೆಗಳು ಉತ್ತಮವಾಗಿ ಬರುತ್ತವೆ ಎಂಬುದು ಬಹುತೇಕ ರೈತರ ಅನಿಸಿಕೆ. ಎಲ್ಲಿಂದಲೋ ಮಣ್ಣು ತರಿಸಲು ಹಣ ಸುರಿಯುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಇದರ ಪ್ರಯೋಜನ ಎಷ್ಟು? ಇದರಿಂದ ನಿಜವಾಗಿಯೂ ಮಣ್ಣು ಫಲವತ್ತಾಗುತ್ತದೆಯೇ? ಉತ್ತಮ ಇಳುವರಿ ನಿರೀಕ್ಷಿಸಬಹುದೇ? ಇಲ್ಲೊಬ್ಬ ರೈತರು ತಮ್ಮ ಅನುಭವ ಹಂಚಿಕೊಂಡಿದ್ದಾರೆ ನೋಡೋಣ ಬನ್ನಿ. 

ಕಾಫಿಯಲ್ಲಿ ನಷ್ಟ ಬಾರದಿರಲು ಈ ಕ್ರಮಗಳು ಅಗತ್ಯ..!

ಹೆಚ್ಚು ಕಾಫಿ ಉತ್ಪಾದಕತೆಯ ಪ್ರತಿಷ್ಠಿ10 ದೇಶಗಳಲ್ಲಿ ನಮ್ಮ ಭಾರತ ಕೂಡ ಒಂದು. ಅದರಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದ್ದು, ಕಾಫಿಗೆ ಹೆಸರುವಾಸಿಯಾಗಿದೆ. ಹೀಗಿರುವಾಗ ನಾವು ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ, ಕಾಫಿ ಬೆಳೆಗಾರರು ಲಾಭಕ್ಕಿಂತ ಹೆಚ್ಚು ನಷ್ಟವನ್ನುಅನುಭವಿಸುತ್ತಿದ್ಧಾರೆ ಅಂತ ಹೇಳಿದ್ರೆ ತಪ್ಪಾಗಲಾರದು. ಕಾರಣಗಳನ್ನು ನೋಡುವುದಾದರೆ, ರೈತರು ಅನುಸರಿಸುತ್ತಿರುವ ಅವೈಜ್ಞಾನಿಕ ಕೃಷಿ ಪದ್ಧತಿ. ಮೊದಲನೆಯದಾಗಿದೆ.

|< ... 15 16 17 18 19 20 ...>|
Home    |   About Us    |   Contact    |   
microbi.tv | Powered by Ocat Online Advertising Service in India