ಸಾವಯವ ಕಳೆನಾಶಕ ತಯಾರಿಸುವ ಸುಲಭ ವಿಧಾನ

ಸಾವಯವ ಕೃಷಿ ಪದ್ಧತಿಯಲ್ಲಿ ಕೀಟಬಾಧೆ, ರೋಗಬಾಧೆ, ಕಳೆ ನಿಯಂತ್ರಣ ಕಷ್ಟ ಎಂದುಕೊಳ್ಳುವ ರೈತರು, ಈ ವಿಚಾರಗಳನ್ನು ತಿಳಿದುಕೊಳ್ಳಲೇ ಬೇಕು. ಇವುಗಳ ನಿಯಂತ್ರಣ ತುಂಬಾ ಸರಳವಾಗಿದ್ದು, ಸಾವಯವ ಕೃಷಿಯಲ್ಲಿ ಸರಳ ಸಾಧನಗಳಿಂದ ನಿಯಂತ್ರಿಸಬಹುದಾಗಿದೆ.

ಬೆಂಬಲ ಬೆಲೆ ಸಿಗದೆ ಆರ್ಥಿಕ ಕಷ್ಟ ಅನುಭವಿಸುವ ರೈತರಿಗೆ ಇದೊಂದೇ ದಾರಿ

ದಂಪತಿಸಾವಯವ ಕೃಷಿ ಪದ್ಧತಿ ಊರಿಗೆ ಮಾದರಿಯಾಗಿದೆ. ಬಳ್ಳಾರಿ ಜಿಲ್ಲೆ , ಸಂಡೂರು ತಾಲೂಕಿನ ದಂತಿಯಾದ ಅಕ್ಕನಾಗಮ್ಮ, ಶಿವಕುಮಾರ್ ಸಾವಯವ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿ, ಎರಡೂವರೆ ಎಕರೆಯಲ್ಲಿ ಸುಮಾರು 7 ಬೆಳೆಗಿಂತ ಹೆಚ್ಚು ಬೆಳೆಯನ್ನು ಬೆಳೆಯುತ್ತಿದ್ದಾರೆ. ಮುಖ್ಯ ಬೆಳೆಯಾಗಿ ಅಡಿಕೆ, ಅದರಲ್ಲಿ ಅಂತರ ಬೆಳೆಯಾಗಿ ಬಾಳೆ , ಈರುಳ್ಳಿ, ತರಕಾರಿ ಬೆಳೆಗಳಿದ್ದು ಎಲ್ಲಾ ಬೆಳೆಗಳಿಗೂ ಡಾ.ಸಾಯಿಲ್ ದ್ರವರೂಪದ ಜೈವಿಕ ಗೊಬ್ಬರವನ್ನು ಬಳಸುತ್ತಿದ್ದಾರೆ.

ಗುಲಾಬಿ ಬೆಳೆಯ ನುಸಿ ಕೀಟಕ್ಕೆ ಸುಲಭ ಪರಿಹಾರ ಇಲ್ಲಿದೆ

ಹೂ ಬೆಳೆಯಯಲ್ಲಿ ಕೀಟಗಳ ಹಾವಳಿ ಹೆಚ್ಚಾಗಿರುತ್ತೆ. ಸುಗಂಧಭರಿತ ಪರಿಮಳ ಸೂಸುವ ಹೂಗಳು ಕೀಟಗಳ ಬಾಧೆಗೆ ತುತ್ತಾಗುವುದು ಸಹಜ. ಹೀಗಾಗಿ ಹೂ ಬೆಳೆಯಲ್ಲಿ ಕೀಟಬಾಧೆ ತಡೆಗೆ ಕೃಷಿಕರು ರಾಸಾಯನಿಕ ಸ್ಪ್ರೇ ಗಳಿಗೆ ಮೊರೆ ಹೋಗುತ್ತಾರೆ. ಕೀಟ ಬಾಧೆಯ ತಡೆಯುವಲ್ಲಿ ವಿಫಲವಾಗಿ ರಾಸಾಯನಿಕದ ವಿಷದಿಂದ ಇಡೀ ಬೆಳೆಯನ್ನೇ ನಾಶ ಮಾಡಿಕೊಳ್ಳುತ್ತಾರೆ. ಹಾಗಾದ್ರೆ ರಾಸಾಯನಿಕ ಸ್ಪ್ರೇಗಳನ್ನು ಬಳಸದೆ ಗುಲಾಬಿ ತೋಟದಲ್ಲಿ ನುಸಿ ಕೀಟ ಬಾಧೆಯನ್ನು ತಡೆಗಟ್ಟುವುದು ಹೇಗೆ?.

ಜೇನು ಹುಳು ಕಚ್ಚಿದಾಗ ಮಾಡಿಕೊಳ್ಳುವ ಮನೆ ಮದ್ದು…

ಜೇನುಹುಳುವಿನ ಸಿಟ್ಟು ನಿಮಗೆ ಗೊತ್ತೇ ಇದೆ. ಜೇನು ಹುಳ ಹಾಗೆಲ್ಲ ಸುಮ್ಮನೆ ಕಚ್ಚುವುದಿಲ್ಲ. ನಾವೇನಾದರೂ ಅವಕ್ಕೆ ತೊಂದರೆ ಮಾಡಿದರೆ ಮಾತ್ರ ಅವು ಸಿಟ್ಟಿಗೇಳುತ್ತವೆ. ಜೀನಿನ ಗುಂಪಿನಲ್ಲಿ ಯಾವುದೇ ಒಂದು ಹುಳಕ್ಕೆ ತೊಂದರೆಯಾದರೂ ಸಾಕು. ಅವು ಗುಂಪಾಗಿ ಬಂದು ದಾಳಿ ಮಾಡುತ್ತವೆ. ಜೇನು ಹುಳ ಕಚ್ಚಿದರೆ ನಿರ್ಲಕ್ಷ್ಯ ಮಾಡುವಂತಿಲ್ಲ, ಬಹಳ ಹುಳು ಕಚ್ಚಿದಾಗ ವೈದ್ಯರ ಬಳಿ ಹೋಗಲೇ ಬೇಕು, ಜೇನು ಕಚ್ಚಿದಾಗ  ಅದರ ಮುಳ್ಳು  ಕಚ್ಚಿದ ಜಾಗದಲ್ಲಿ  ಇರುತ್ತದೆ. ಅದನ್ನು ತಕ್ಷಣ ತೆಗೆಯಬೇಕು. ಆ ಮುಳ್ಳನ್ನು ತೆಗೆಯದಿದ್ದರೆ ನಂಜು ಹೆಚ್ಚುತ್ತದೆ. ಕಚ್ಚಿದ ಜಾಗ ಬಹಳ ಊದಿಕೊಳ್ಳುತ್ತದೆ.

ಜೇನು ಹುಳು ಕಚ್ಚಿದಾಗ ಮಾಡಿಕೊಳ್ಳುವ ಮನೆ ಮದ್ದು…

ಜೇನುಹುಳುವಿನ ಸಿಟ್ಟು ನಿಗೆ ಗೊತ್ತೇ ಇದೆ. ಜೇನು ಹುಳ ಹಾಗೆಲ್ಲ ಸುಮ್ಮನೆ ಕಚ್ಚುವುದಿಲ್ಲ. ನಾವೇನಾದರೂ ಅವಕ್ಕೆ ತೊಂದರೆ ಮಾಡಿದರೆ ಮಾತ್ರ ಅವು ಸಿಟ್ಟಿಗೇಳುತ್ತವೆ. ಜೀನಿನ ಗುಂಪಿನಲ್ಲಿ ಯಾವುದೇ ಒಂದು ಹುಳಕ್ಕೆ ತೊಂದರೆಯಾದರೂ ಸಾಕು. ಅವು ಗುಂಪಾಗಿ ಬಂದು ದಾಳಿ ಮಾಡುತ್ತವೆ. ಜೇನು ಹುಳ ಕಚ್ಚಿದರೆ ನಿರ್ಲಕ್ಷ್ಯ ಮಾಡುವಂತಿಲ್ಲಬಹಳ ಹುಳು ಕಚ್ಚಿದಾಗ ವೈದ್ಯರ ಬಳಿ ಹೋಗಲೇ ಬೇಕುಜೇನು ಕಚ್ಚಿದಾಗ  ಅದರ ಮುಳ್ಳು  ಕಚ್ಚಿದ ಜಾಗದಲ್ಲಿ  ಇರುತ್ತದೆ. ಅದನ್ನು ತಕ್ಷಣ ತೆಗೆಯಬೇಕು. ಆ ಮುಳ್ಳನ್ನು ತೆಗೆಯದಿದ್ದರೆ ನಂಜು ಹೆಚ್ಚುತ್ತದೆ. ಕಚ್ಚಿದ ಜಾಗ ಬಹಳ ಊದಿಕೊಳ್ಳುತ್ತದೆ.

ಬೆಟ್ಟದ ನೆಲ್ಲಿಯನ್ನು ಮುಖ್ಯಬೆಳೆಯಲ್ಲಿ ಹೀಗೆ ಬೆಳೆದರೆ ಸಮೃದ್ಧ ಆದಾಯ..!

ಬೆಟ್ಟದ ನೆಲ್ಲಿ ಎಂದ ತಕ್ಷಣ, ಬಾಯಲ್ಲಿ ನೀರೂರಲು ಶುರುವಾಗುತ್ತೆ. ನಾವು ಎರಡು ವಿಧವಾದ ನೆಲ್ಲಿಯನ್ನು ನೋಡುತ್ತೆವೆ. ಒಂದು ನಾಡಿನ ನೆಲ್ಲಿಕಾಯಿ,ತ್ತೊಂದು ಹೆಚ್ಚಾಗಿ ಗುಡ್ಡ ಗಾಡುಗಳಲ್ಲಿ ಬೆಳೆದು, ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಬೆಟ್ಟದ ನೆಲ್ಲಿ. ಚಿಕ್ಕವಯಸ್ಸಿನಲ್ಲಿ ನೆಲ್ಲಿಕಾಯಿಯ ರುಚಿಯನ್ನು ಉಪ್ಪು, ಖಾರದೊಂದಿಗೆ ಸ್ನೇಹಿತರ ಜತೆ ಚಪ್ಪರಿಸಿ ತಿಂದಿರುವ ನೆನಪುಗಳು ನಮಗುಂಟು. ಮನೆಯ ಹಿತ್ತಲ್ಲಿನಲ್ಲಿ, ಹೊಲಗಳಲ್ಲಿ ಬೆಳೆದಾಗ, ಅವುಗಳನ್ನು ಕಿತ್ತು ತಿನ್ನುವುದೇ ಖುಷಿ. ಆದರೆ ಈಗಿನ ದಿನಮಾನಲ್ಲಿ, ತಂತ್ರಜ್ಞಾನ ಬದಲಾದಂತೆ ಮರ ಗಿಡಗಳನ್ನು ನೋಡುವುದೂ ಸಹಿತ ಕಡಿಮೆಯಾಗುತ್ತಿರುವುದು ದುಃಖದ ಸಂಗತಿ. ಹಾಗಾದ್ರೆ ಬೆಟ್ಟದ ನೆಲ್ಲಿಯನ್ನು ಕೃಷಿಯಲ್ಲಿ ಬಳಸಿಕೊಂಡಾಗ, ರೈತರಿಗೆ ಸಿಗುವ ಲಾಭಗಳೆಷ್ಟು ಗೊತ್ತಾ?

6,500 ರೂ.ಗೆ 10 ಟ್ರ್ಯಾಕ್ಟರ್ ಲೋಡ್ ಅರಿಶಿನ ಸಿಕ್ಕಿದ್ದು ಹೇಗೆ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ , ರಬಕವಿ ಬನಹಟ್ಟಿ ತಾಲೂಕಿನ ಕೃಷಿಕ ಸುರೇಶ್ ಜಾಲಿಕಟ್ಟಿ ಅವರ ಅರಿಶಿನ ಬೆಳೆಯಲ್ಲಿ, ಯವುದೇ ತರಹದ ರೋಗ, ಕೀಟ ಬಾಧೆಯ ತೊಂದರೆಯಿಲ್ಲ. ಅರಿಶಿನ ಬೆಳೆ ಆರೋಗ್ಯವಾಗಿ ಬೆಳೆದು, ಹೆಚ್ಚಿನ ಇಳುವರಿ ನೀಡಿದೆ.

ಕಬ್ಬು: ಅಧಿಕ ಇಳುವರಿಗೆ 4 ಅಂಶಗಳು

      ಸಕ್ಕರೆ, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಎಲ್ಲಿ ನೋಡಿದ್ರೂ ಪಾಕದಿಂದ ಮಾಡಿದ ತಿನಿಸುಗಳು, ಪಾನೀಯಗಳು. ಬಿಸ್ಕಟ್, ಫ್ರೂಟ್ ಜ್ಯೂಸ್, ಹೀಗೆ ಹೋದ್ರೆ ದೊಡ್ಡ ಪಟ್ಟಿ ಆಗಿ ಬಿಡುತ್ತೆ. ಎಲ್ಲರಿಗೂ ಗೊತ್ತಿರೋ ವಿಷಯ ಅಂದ್ರೆ, ಸಕ್ಕರೆ ತಯಾರಾಗೋದು ಕಬ್ಬಿನಿಂದ. ಇದೊಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕಬ್ಬಿಗೆ ಎಂದೂ ಕಡಿಮೆಯಾಗದಂತಹ ಡಿಮ್ಯಾಂಡ್ ಇದೆ. ಕಬ್ಬು ಬೆಳೆದರೆ ಮಾರ್ಕೆಟ್ ಮಾಡುವುದು ಕಷ್ಟದ ವಿಷಯವಲ್ಲ. ಹೆಚ್ಚು ಕಬ್ಬು ಹೆಚ್ಚು ಲಾಭ. ಆದರೆ ಇಲ್ಲಿ ಪ್ರಶ್ನೆ ಇರುವುದು ಕಬ್ಬಿನ ಇಳುವರಿ ಹೆಚ್ಚಿಸಲು ಏನು ಮಾಡ್ಬೇಕು ಅಂಥ. ಏನು ಮಾಡಿದರೆ, ಯಾವ ತಪ್ಪುಗಳನ್ನು ಸರಿ ಮಾಡಿಕೊಂಡರೆ ಇಳುವರಿ ಹೆಚ್ಚಿಸಿಕೊಳ್ಳಬಹುದು.

ಅಲೋವೆರಾ(ಲೋಳೆರಸ): ಕಡಿಮೆ ಖರ್ಚು,ಆದಾಯ ಹೆಚ್ಚು

       ಅಲೋವೆರಾ(ಲೋಳೆರಸ) ಒಂದು ಕ್ಯಾಕ್ಟಸ್(ಕಳ್ಳಿ) ತರಹದ ಸಸ್ಯ. ಅಲೋವೆರಾ ಒಂದು ಚಮತ್ಕಾರಿ ಸಸ್ಯ ಎಂದರೆ ತಪ್ಪಾಗಲಾರದು. ಅನೇಕ ಔಷಧೀಯ ಗುಣಗಳಿರುವ ಇದನ್ನು ಪಾನೀಯಗಳು, ಚರ್ಮದ ಲೋಷನ್, ಸೌಂದರ್ಯವರ್ಧಕಗಳು, ಮುಲಾಮುಗಳು ಅಥವಾ ಸಣ್ಣ ಸುಟ್ಟಗಾಯಗಳಿಗೆ ಜೆಲ್ ರೂಪದಲ್ಲಿ ಸೇರಿದಂತೆ ಅನೇಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಆದರೆ ಎಷ್ಟೋ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ, ಇದನ್ನು ಬೆಳೆಯಾಗಿ ಬೆಳೆಯಬಹುದು ಮತ್ತು ಆದಾಯ ಗಳಿಸಬಹುದು ಎಂಬುದು. ಇದೊಂದು ನಿರ್ಲಕ್ಷ್ಯಕ್ಕೊಳಗಾದ ಬೆಳೆ. ಕಡಿಮೆ ನಿರ್ವಹಣೆಯಲ್ಲಿ ಬೆಳೆಯಬಹುದಾದರೂ ತಿಳುವಳಿಕೆಯ ಆಭಾವದಿಂದ ನಿರ್ಲಕ್ಷ್ಯಕ್ಕೊಳಗಾಗಿದೆ.

4ನೇ ಕುಳೆಯಲ್ಲಿಯೂ ಎಕರೆಗೆ 65 ಟನ್ ಕಬ್ಬು..?

       ಕಬ್ಬು ಒಂದು ವಾಣಿಜ್ಯ ಬೆಳೆಯಾಗಿದೆ. ರಾಜ್ಯಾದ್ಯಂತ ಹಲವಾರು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಸಕ್ಕರೆನಾಡು ಎಂದೇ ಖ್ಯಾತಿ ಪಡೆದಿರುವ ಮಂಡ್ಯದಲ್ಲಿ ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಸಕ್ಕರೆ ಕಾರ್ಖಾನೆಗಳಿಗೆ ಕಳಿಸಲಾಗುವ ಈ ಕಬ್ಬಿನಲ್ಲಿ ಇಳುವರಿ ಉತ್ತಮವಾದರೆ ರೈತನಿಗೆ ಉತ್ತಮ ಆದಾಯ. ಇಲ್ಲವಾದಲ್ಲಿ ನಷ್ಟ ಅನುಭವಿಸಬೇಕಾದಂತಹ ಸ್ಥಿತಿ. ಕಬ್ಬಿನಲ್ಲಿ ಲಾಭ ಗಳಿಸಲು ಏನು ಮಾಡಬೇಕು?

|< ... 21 22 23 24 25 26 ...>|
Home    |   About Us    |   Contact    |   
microbi.tv | Powered by Ocat Online Advertising Service in India