ಉಪ ಕಸುಬು ಏಕೆ ಬೇಕು? ಏನೆಲ್ಲಾ ಲಾಭಗಳು? ಸಾವಯವ ಕೃಷಿ ತಜ್ಞರ ಅಮೂಲ್ಯ ಮಾಹಿತಿ

       ಬಹುತೇಕ ರೈತರು ತಮ್ಮ ಕೃಷಿ ಆದಾಯದಿಂದ ಸಂತೃಪ್ತರಿಲ್ಲ. ಸರಿಯಾದ ಬೆಲೆ ಸಿಗದ ಕಾರಣ ರೈತರು ಪರದಾಡುವ ಪರಿಸ್ಥಿತಿ ಏರ್ಪಾಡಾಗಿದೆ. ರೈತರು ತಮ್ಮ ಬಳಿ ಇರುವ ಜಮೀನಿನಲ್ಲೇ ಆದಾಯ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು? ಸಮಗ್ರ ಕೃಷಿ ಅಳವಡಿಸಿಕೊಳ್ಳುವುದರಿಂದ ಏನು ಲಾಭ? ಉಪಕಸುಬಿನಿಂದ ಲಾಭ ಹೇಗೆ ಮಾಡಬಹುದು? ನೋಡೋಣ ಬನ್ನಿ.

ಟೊಮ್ಯಾಟೋಗೆ ಬೀಜೋಪಚಾರ ಮಾಡಿದ ರೈತನ ಅದ್ಭುತ ಅನುಭವ

       ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ನಾವು ಆರಿಸುವ ಬೀಜ ಮತ್ತು ಅದರ ಆರೋಗ್ಯ ತುಂಬಾ ಮುಖ್ಯ. ಬೀಜಗಳಿಗೆ ರಕ್ಷಕ ಎನಿಸಿಕೊಳ್ಳುವ ಬೀಜೋಪಚಾರ ಮಾಡುವುದರಿಂದ ಬೀಜಗಳ ಮೊಳಕೆ ಪ್ರಮಾಣ ಹೆಚ್ಚಿಸಬಹುದು. ಸಾವಯವ ಪದ್ಧತಿಯಲ್ಲಿ ಬೀಜೋಪಚಾರ ಮಾಡುವುದರಿಂದ ಬಿಳಿಬೇರುಗಳ ಬೆಳವಣಿಗೆ ಉತ್ತಮವಾಗುತ್ತದೆ. ರೋಗಬಾಧೆಯ ವಿರುದ್ಧ ರಕ್ಷಣೆ ನೀಡಿ, ಸಸಿಗಳಿಗೆ ಪೋಷಕಾಂಶ ದೊರೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಇಲ್ಲಿ ಹಲವಾರು ಕೃಷಿಕರು ಸಾವಿರ, 10 ಸಾವಿರ ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ

       ಕರ್ನಾಟಕದ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು ಈಗ ವಿದೇಶಗಳಲ್ಲೂ ಸಾವಯವ ಕಂಪನ್ನು ಪಸರಿಸುತ್ತಿದ್ದಾರೆ. ರಾಜ್ಯದಾದ್ಯಂತ ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಮುಖಾಂತರ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಲು ಮಾರ್ಗ ತೋರಿದ ಡಾ.ಕೆ.ಆರ್.ಹುಲ್ಲುನಾಚೆಗೌಡರು, ಈಗ ಕೀನ್ಯಾದಲ್ಲಿನ ತೋಟವೊಂದಕ್ಕೆ ಭೇಟಿ ನೀಡಿ, ಅಲ್ಲಿರುವ ಮಣ್ಣು, ಕೃಷಿ ಪದ್ಧತಿ ಬಗ್ಗೆ ಮಾಹಿತಿ ನೀಡಿದ್ದಾರೆ.

ಒಂದು ಗುಲಾಬಿ ತೋಟದ ದುರಂತ ಕತೆ

       ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವ ಹೂ ಗುಲಾಬಿ. ವಿವಿಧ ಬಣ್ಣಗಳ ಗುಲಾಬಿಯನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಸುಗಂಧ ದ್ರವ್ಯ ತಯಾರಿಕೆ, ಖಾದ್ಯ, ಅಲಂಕಾರ ಹೀಗೆ ನಾನಾ ರೀತಿಯಲ್ಲಿ ಬಳಸಲ್ಪಡುತ್ತದೆ. ಇಂಥಾ ವಿಶೇಷತೆ ಹೊಂದಿರುವ ಗುಲಾಬಿಯನ್ನು ಬೆಳೆಯುವುದರಿಂದ ಉತ್ತಮ ಲಾಭಗಳಿಸಬಹುದು. ಆದರೆ ಇಲ್ಲೊಂದು ಗುಲಾಬಿ ತೋಟದಲ್ಲಿ ಮಾಡಿದ ತಪ್ಪುಗಳಿಂದ ಇಡೀ ತೋಟವೇ ಹಾಳಾಗಿದೆ. ಈ ರೈತರು ಮಾಡಿರುವ ತಪ್ಪೇನು? ಇದಕ್ಕೆ ಮೈಕ್ರೋಬಿ ತಂಡ ನೀಡಿದ ಸಲಹೆಗಳೇನು? ನೋಡೋಣ ಬನ್ನಿ

ನಿಮ್ಮ ಬೆಳೆಗಳಿಗೆ ಫಾಸ್ಫರಸ್, ಪೊಟ್ಯಾಶ್ ಬೇಕೆ?

       ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ ದೇವನಹಳ್ಳಿಯ ರೈತ ಮಧು ಅವರು ಡಾ.ಸಾಯಿಲ್ ಸ್ಲರಿ ಬಳಸಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಪೊಟ್ಯಾಶ್ ಮತ್ತು ಫಾಸ್ಫರಸ್ ಎನ್ರಿಚರ್ ಸ್ಲರಿಗಳನ್ನು ಬಳಸಿ ಬಾಳೆ, ಸೌತೆಕಾಯಿ ಹೀಗೆ ಇತರ ಬೆಳೆಗಳಿಗೆ ಬಳಸುತ್ತಾ ಬಂದಿದ್ದಾರೆ.

ನೀವೂ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೀರಾ?

       ಆಹಾರ ಭದ್ರತೆ ಹೆಚ್ಚಿಸಲು 1960ರ ದಶಕದಲ್ಲಿ ಬಂದ ಹಸಿರು ಕ್ರಾಂತಿಯಿಂದ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಯಿತು. ಆದರೆ ಇಂದು ರಾಸಾಯನಿಕಗಳ ಬಳಕೆಯಿಂದ ಮಣ್ಣು ಹಾಳಾಗುತ್ತಿರುವುದಲ್ಲದೇ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಹಾಗಾಗಿ ಕೃಷಿ ಇಂದು ಮಾಲಿನ್ಯಕ್ಕೆ ಕಾರಣವಾಗಿರುವ ಬಹುದೊಡ್ಡ ಕಾರಣಗಳಲ್ಲಿ ಒಂದಾಗಿದೆ.

ಕೀನ್ಯಾದ ಬರಗಾಲದಲ್ಲಿ 2 ಸಾವಿರ ಗೋವುಗಳನ್ನು ಪೋಷಿಸಿದ ಕರ್ನಾಟಕದ ಕರ್ಣ

       ಕಳೆದ 2 ವರ್ಷಗಳಿಂದ ಪೂರ್ವ ಆಫ್ರಿಕಾದಲ್ಲಿ ಬರಗಾಲ ಮನೆಮಾಡಿತ್ತು. ಇದರಲ್ಲಿ ಕೀನ್ಯಾ ದೇಶವೂ ಒಂದು. ಸತತ ನಾಲ್ಕು ಋತುಗಳು ಸಾಕಷ್ಟು ಮಳೆಯಾಗದ ಕಾರಣ 1980 ರ ದಶಕದ ನಂತರದ ಅತ್ಯಂತ ಕೆಟ್ಟ ಶುಷ್ಕ ಪರಿಸ್ಥಿತಿ ಕೀನ್ಯಾದಲ್ಲಿ ಸೃಷ್ಟಿಯಾಗಿತ್ತು. ನದಿಗಳು ಮತ್ತು ಬಾವಿಗಳು ಬತ್ತಿಹೋಗಿ, ಹುಲ್ಲುಗಾವಲುಗಳು ಧೂಳಾಗಿ ಮಾರ್ಪಟ್ಟಿತ್ತು. ಇದರಿಂದ ಕೀನ್ಯಾದಲ್ಲಿ 15 ಲಕ್ಷಕ್ಕೂ ಹೆಚ್ಚು ಜಾನುವಾರುಗಳ ಸಾವಿಗೀಡಾಗಿದ್ದವು. ಇಂತಹ ಪರಿಸ್ಥಿತಿಯಲ್ಲಿ ರೈತರ ಗೋಳು ಕೇಳಲಾಗದು. ಕೃಷಿ ಮಾಡಲಾಗದೇ ತಗೂ ಆಹಾರ ಇಲ್ಲದೇ, ತಾವು ಸಾಕುವ ದನಗಳಿಗೂ ಆಹಾರವಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಸಿಗುವ ಸಣ್ಣ ಸಹಾಯವೂ ದೊಡ್ಡ ಪ್ರಭಾವ ಬೀರುತ್ತದೆ. ಕರ್ನಾಟಕದ ವ್ಯಕ್ತಿಯೊಬ್ಬರು ಕೀನ್ಯಾದ ಹಸುಗಳಿಗೆ ಮೇವು ಒದಗಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ.

ರೈತರಿಗೆ ಮಾಹಿತಿಯ ಕಣಜವಾಗಿರುವ ಕೃಷಿ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ

       ಭಾರತ ಕೃಷಿ ಪ್ರಧಾನವಾದ ದೇಶ. 2011ರ ಜನಗಣತಿಯ ಪ್ರಕಾರ 54.6% ಜನಸಂಖ್ಯೆಯು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ದೇಶದ GDPಯ ಒಂದು ಪ್ರಮುಖ ಭಾಗ ಕೃಷಿ. ದೇಶದ ಆರ್ಥಿಕತೆ ಬೆಳೆಯಬೇಕಾದರೆ ರೈತರು ಆರ್ಥಿಕವಾಗಿ ಪ್ರಬಲರಾಗಬೇಕು.

ಬೀಜೋಪಚಾರದಿಂದ 80 ಚೀಲ ಶೇಂಗಾ ಬಂತು..!

ಡಾ.ಸಾಯಿಲ್ ಬೀಜೋಪಚಾರಗಳಿಂದ ಬೆಳೆದ ಬೆಳೆಗಳಲ್ಲಿ ಲಾಸು ಎಂಬುದೇ ಇಲ್ಲ. ಬೆಳೆಗೆ ತಕ್ಕಂತೆ ರೈಜೋಬಿಯಂ, ಅಜೋಸ್ಪಿರಿಲಂ, ಅಜಟೋಬ್ಯಾಕ್ಟರ್ ಬೀಜೋಪಚಾರಗಳು ಡಾ.ಸಾಯಿಲ್ ನಲ್ಲಿ ಲಭ್ಯವಿದ್ದು, ಪ್ರತಿ ಬೆಳೆಯಲ್ಲಿಯೂ ಉತ್ಕೃಷ್ಟವಾಗಿ ಇಳುವರಿ ಬರಲು ಸಹಾಯಕವಾಗಿದೆ.

ಬೇವಿನ ಹಿಂಡಿ ಕೃಷಿ ಭೂಮಿಗೆ ಎಷ್ಟು ಲಾಭಕರ..?

ಬೇವಿನ ಹಿಂಡಿ ಕೃಷಿಕರಿಗೆ ವರದಾನ. ಕೃಷಿ ಭೂಮಿಗೆ ಬೇವಿನ ಹಿಂಡಿ ನೀಡುವುದರಿಂದ ಸಾಕಷ್ಟು ಲಾಭಗಳು ದೊರೆಯುತ್ತವೆ. ಕೃಷಿ ವಿಜ್ಞಾನಿಗಳು ಬೇವಿನ ಹಿಂಡಿಯನ್ನು ಬಳಸುವಂತೆ ಹೆಚ್ಚಾಗಿ ರೈತರಿಗೆ ಶಿಫಾರಸ್ಸು ಮಾಡ್ತಾರೆ. ಕಾರಣ?

|< ... 12 13 14 15 16 17 ...>|
Home    |   About Us    |   Contact    |   
microbi.tv | Powered by Ocat Business Promotion Service in India