Blog

       ಹಿಪ್ಪುನೇರಳೆಯ ಎಲೆಗಳು ರೇಷ್ಮೆ ಹುಳುಗಳಿಗೆ ಏಕೈಕ ಆಹಾರವಾಗಿದೆ. ಆದ್ದರಿಂದ ಹಿಪ್ಪುನೇರಳೆ ಕೃಷಿ ನೇರವಾಗಿ ರೇಷ್ಮೆ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಹಿಪ್ಪುನೇರಳೆ ಹೆಚ್ಚು ಬೆಳೆಯುವ ದೇಶಗಳಲ್ಲಿ ಹೆಚ್ಚು ರೇಷ್ಮೆ ಉತ್ಪಾದಿಸಲಾಗುತ್ತದೆ. ಜಗತ್ತಿನ ಹಿಪ್ಪುನೇರಳೆ ಕೃಷಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ ಮತ್ತು ರೇಷ್ಮೆ ಉತ್ಪಾದನೆಯಲ್ಲೂ 2ನೇ ಸ್ಥಾನದಲ್ಲಿದೆ. ಇಲ್ಲೊಬ್ಬ ರೈತರು ಸಾವಯವದಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಹಿಪ್ಪುನೇರಳೆ ಬೆಳೆದಿದ್ದಾರೆ.

 

       ಯಾದಗಿರಿ ಜಿಲ್ಲೆ ಹಾಪುರ ತಾಲ್ಲೂಕಿನ ರೈತ ನಾಗಣ್ಣರವರು ತಮ್ಮ 2 ವರ್ಷದ ಹಿಪ್ಪುನೇರಳೆ ಬೆಳೆಗೆ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿದ್ದಾರೆ. ಸಾವಯವ ಕೃಷಿ ಪದ್ಧತಿಯಲ್ಲಿ ಕೃಷಿ ಮಾಡುವುದರಿಂದ ಮಣ್ಣು ಫಲವತ್ತಾಗಿದೆ ಮತ್ತು ಎರೆಹುಳುಗಳ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ ರೈತ ನಾಗಣ್ಣ. ಎಲೆಗಳ ಗಾತ್ರ ಹೆಚ್ಚಾಗಿದೆ. ವಿಷಮುಕ್ತ ಹಿಪ್ಪುನೇರಳೆಯ ಸೊಪ್ಪು ತಿನ್ನುವುದರಿಂದ ರೇಷ್ಮೆಹುಳುಗಳು ಆರೋಗ್ಯವಾಗಿರುತ್ತವೆ ಮತ್ತು ಉತ್ತಮ ಗೂಡುಗಳನ್ನು ಕಟ್ಟುತ್ತವೆ. ಗೂಡಿನ ತೂಕ ಹೆಚ್ಚುವುದರಿಂದ ಉತ್ತಮ ಆದಾಯವನ್ನು ರೈತರು ಗಳಿಸಬಹುದು.

 

ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=bJk3lzs7d1A&list=PLuN9VcGQAtK5YBtpuk_WHyVSiJ11BbN_d

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

Subscribe to Microbi Agrotech: https://youtube.com/c/MICROBIAGROTECH...

 

ಬರಹ: ರವಿಕುಮಾರ್

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #organicfarming  #sustainablefarming  #highyield  #healthycrop  #soilhealth  #fertileland  #soilfertility  #biofertilizers  #lowinvestment  #mulberry  #organicmulberry  #silkworm  



Blog




Home    |   About Us    |   Contact    |   
microbi.tv | Online Marketing with SEO Catalogs in India | Powered by Ocat SEO Catalogs